![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jun 9, 2023, 5:15 AM IST
ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮಂಗಳೂರು ಉತ್ತರ, ಮಂಗಳೂರು ಪೂರ್ವ ಹಾಗೂ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮಟ್ಕಾ ದಂಧೆ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡಸಿದ್ದಾರೆ.
ಒಟ್ಟು ಐದು ಪ್ರಕರಣಗಳನ್ನು ದಾಖಲಿಸಿದ್ದು, 25 ಆರೋಪಿಗಳನ್ನು ಬಂಧಿಸಿ 18,170 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ಪೂರ್ವ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ, ಶ್ರೀನಿವಾಸ, ಅಶೋಕ್ ಕುಮಾರ್, ಹರೀಶ ಪೂಜಾರಿ, ಮಹಮದ್ ಇಸ್ಮಾಯಿಲ್, ಪುನೀತ್ ರಾವ್, ನಿರೀಕ್ಷಿತ್, ಪ್ರದೀಪ್, ಶರವಣ ಕುಮಾರ್, ಪ್ರದೀಪ್ ಸಾಲ್ಯಾನ್, ದೇವರಾಜ್ ಶೆಟ್ಟಿ, ಚರಣ್ ಕುಮಾರ್, ಹುಸೇನ್ ಉಮರ್, ಸದಾಶಿವ, ಜಯಂತ್, ಗಣೇಶ್ ಎಂ., ಮಹಮ್ಮದ್ ಶರೀಫ್, ವಿಜಿತ್, ಕೀರ್ತಿ, ಧೀರಜ್ ಸಹಿತ 19 ಆರೋಪಿಗಳನ್ನು ಬಂಧಿಸಿ 13,010 ರೂ. ವಶಪಡಿಸಲಾಗಿದೆ.
ಮಂಗಳೂರು ಉತ್ತರ ಠಾಣೆಯಲ್ಲಿ ಸಜಿತ್, ಚೇತನ್ ಕುಮಾರ್ ಹಾಗೂ ಶರತ್ ರಾಜ್ ಎನ್ನುವ ಮೂವರನ್ನು ಬಂಧಿಸಿ 3,890 ರೂ. ವಶಪಡಿಸಿಕೊಳ್ಳಲಾಯಿತು.
ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಮೋಹನ್, ಆಸಿಫ್, ಮಹ್ಮದ್ ಮುಸ್ತಫ ಅವರನ್ನು ಬಂಧಿಸಿ 1,270 ರೂ. ವಶಪಡಿಸಲಾಗಿದೆ.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.