![vijayapura](https://www.udayavani.com/wp-content/uploads/2024/07/vijayapura-415x249.jpg)
ಟಿ 20 ಬ್ಯಾಟಿಂಗ್ ರ್ಯಾಂಕಿಂಗ್ : 27 ಸ್ಥಾನ ಜಿಗಿದ ಶ್ರೇಯಸ್ ಅಯ್ಯರ್!
ಕೊಹ್ಲಿ , ರೋಹಿತ್ ಗಿಂತಲೂ ಮೇಲಕ್ಕೇರಿದ ಯುಎಇ ಯ ವಾಸಿಂ!
Team Udayavani, Mar 2, 2022, 4:51 PM IST
![1-sdsa](https://www.udayavani.com/wp-content/uploads/2022/03/1-sdsa-620x348.jpg)
ನವದೆಹಲಿ : ಐಸಿಸಿ ಪುರುಷರ ಟಿ 20 ಪ್ಲೇಯರ್ ರ್ಯಾಂಕಿಂಗ್ಸ್ ಇತ್ತೀಚಿನ ಪ್ರಕಟಣೆಯಲ್ಲಿ ಭಾರತದ ಬ್ಯಾಟ್ಸ್ ಮ್ಯಾನ್ ಶ್ರೇಯಸ್ ಅಯ್ಯರ್ 27 ಸ್ಥಾನಗಳನ್ನು ಜಿಗಿದು 18 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಶ್ರೀಲಂಕಾ ವಿರುದ್ಧದ ಭಾರತದ ಇತ್ತೀಚಿನ ಸರಣಿಯ ತವರಿನ ಗೆಲುವು ಐಸಿಸಿ ಪುರುಷರ ಟಿ 20 ಆಟಗಾರರ ಶ್ರೇಯಾಂಕದಲ್ಲಿ ಪ್ರಮುಖ ಪರಿಣಾಮಗಳನ್ನು ಬೀರಿದೆ. ಆಕ್ರಮಣಕಾರಿ ಅಗ್ರ ಕ್ರಮಾಂಕದ ಬ್ಯಾಟ್ಸ್ ಮ್ಯಾನ್ ಶ್ರೇಯಸ್ ಅಯ್ಯರ್ ಉತ್ತಮ ಸ್ಥಾನಗಳಿಸಲು ಸಹಾಯ ಮಾಡಿದೆ.
ಶ್ರೀಲಂಕಾ ವಿರುದ್ಧ ಭಾರತ 3-0 ಗೆಲುವಿನಲ್ಲಿ ಅಯ್ಯರ್ ಮೂರು ಅಜೇಯ ಅರ್ಧಶತಕಗಳನ್ನು ಗಳಿಸಿ ಪ್ರಮುಖ ಪಾತ್ರ ವಹಿಸಿದರು, 27 ವರ್ಷದ ಆಟಗಾರ ಪ್ರಭಾವಶಾಲಿ 174 ಸ್ಟ್ರೈಕ್ ರೇಟ್ನಲ್ಲಿ 204 ರನ್ಗಳನ್ನು ಗಳಿಸಿದ್ದರು. ಅವರ ಅಮೋಘ ಆಟ 27 ಸ್ಥಾನಗಳನ್ನು ಜಿಗಿಯಲು ಸಹಾಯ ಮಾಡಿದೆ.
ಸರಣಿಗಾಗಿ ವಿಶ್ರಾಂತಿ ಪಡೆದಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿ ಐದು ಸ್ಥಾನ ಕುಸಿದು 15 ನೇ ಸ್ಥಾನಕ್ಕೆ ತಲುಪಿದ್ದಾರೆ. ಕೆಎಲ್ ರಾಹುಲ್ 10ನೇ ಸ್ಥಾನಕ್ಕೆ ಕುಸಿದಿದ್ದಾರೆ. ಭುವನೇಶ್ವರ್ ಕುಮಾರ್ ಬೌಲರ್ ಶ್ರೇಯಾಂಕದಲ್ಲಿ ಮೂರು ಸ್ಥಾನಗಳನ್ನು ಮೇಲಕ್ಕೇರಿ 17 ನೇ ಸ್ಥಾನಕ್ಕೆ ತಲುಪಿದ್ದಾರೆ.
ಶ್ರೀಲಂಕಾದ ಪಥುಮ್ ನಿಸ್ಸಾಂಕಾ ಸರಣಿಯ ಎರಡನೇ ಪಂದ್ಯದಲ್ಲಿ ಪ್ರಭಾವಿ 75 ರನ್ ಗಳಿಸಿದರು ಮತ್ತು ಅವರು ಶ್ರೇಯಾಂಕದಲ್ಲಿ ಆರು ಸ್ಥಾನಗಳ ಏರಿಕೆಯೊಂದಿಗೆ ಒಂಬತ್ತನೇ ಸ್ಥಾನಕ್ಕೆ ಏರಿದ್ದಾರೆ.
ಈ ವಾರದ ಟಿ 20 ಕ್ರಿಕೆಟ್ನ ಗಮನಾರ್ಹ ಬೆಳವಣಿಗೆಯಲ್ಲಿ ಯುಎಇಯ ಮುಹಮ್ಮದ್ ವಸೀಮ್ ಐಸಿಸಿ ಪುರುಷರ ಟಿ 20 ವಿಶ್ವಕಪ್ ಕ್ವಾಲಿಫೈಯರ್ ಎ ವಿಭಾಗದ ಫೈನಲ್ನಲ್ಲಿ ಐರ್ಲೆಂಡ್ ವಿರುದ್ಧ ಅಜೇಯ ಶತಕ ಸಿಡಿಸಿ 12 ನೇ ಸ್ಥಾನವನ್ನು ತಲುಪಿದ್ದಾರೆ. ಇದು ಯುಎಇ ಬ್ಯಾಟ್ಸ್ ಮ್ಯಾನ್ ಒಬ್ಬನ ಅತ್ಯುನ್ನತ ಶ್ರೇಯಾಂಕವಾಗಿದೆ. 2017 ರಲ್ಲಿ ಶೈಮನ್ ಅನ್ವರ್ ಸಾಧಿಸಿದ 13 ನೇ ಸ್ಥಾನವನ್ನು ಮೀರಿಸಿದೆ.
ಪಾಕ್ ನ ಬ್ಯಾಟ್ಸ್ ಮ್ಯಾನ್ ಬಾಬರ್ ಅಜಮ್ ಮೊದಲ ಸ್ಥಾನದಲ್ಲಿದ್ದರೆ , ಮೊಹಮ್ಮದ್ ರಿಜ್ವಾನ್ ಎರಡನೆ ಸ್ಥಾನದಲ್ಲಿದ್ದಾರೆ.
ಬೌಲಿಂಗ್ ಮತ್ತು ಆಲ್ ರೌಂಡರ್ ವಿಭಾಗದಲ್ಲಿ ಟಾಪ್ 10 ರಲ್ಲಿ ಭಾರತದ ಯಾವೊಬ್ಬ ಆಟಗಾರರು ಕಾಣಿಸಿಕೊಂಡಿಲ್ಲ.
ಭಾರತದ ಎದುರಿನ ಸರಣಿಯಲ್ಲಿ ಶ್ರೀಲಂಕಾದ ಲಹಿರು ಕುಮಾರ ಅವರು ಪಡೆದ ಐದು ವಿಕೆಟ್ಗಳು ಅವರನ್ನು ಮೊದಲ ಬಾರಿಗೆ ಟಾಪ್ 40 ಬೌಲರ್ಗಳ ಯಾದಿಯಲ್ಲಿ ಕಾಣಿಸುವಂತೆ ಮಾಡಿದೆ.
ಟಾಪ್ ನ್ಯೂಸ್
![vijayapura](https://www.udayavani.com/wp-content/uploads/2024/07/vijayapura-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![T20 World Cup Final; ಸೂರ್ಯ ಕ್ಯಾಚ್ ಬಗ್ಗೆ ಅನುಮಾನ ಪಟ್ಟವರಿಗೆ ಸಿಕ್ಕಿತು ಉತ್ತರ](https://www.udayavani.com/wp-content/uploads/2024/07/surya-150x83.jpg)
T20 World Cup Final; ಸೂರ್ಯ ಕ್ಯಾಚ್ ಬಗ್ಗೆ ಅನುಮಾನ ಪಟ್ಟವರಿಗೆ ಸಿಕ್ಕಿತು ಉತ್ತರ
![Badminton Player: ಪಂದ್ಯಾವಳಿ ವೇಳೆ ಹೃದಯಾಘಾತಗೊಂಡು ಯುವ ಬ್ಯಾಡ್ಮಿಂಟನ್ ಆಟಗಾರ ಮೃತ್ಯು…](https://www.udayavani.com/wp-content/uploads/2024/07/tournament-150x86.jpg)
Badminton Player: ಪಂದ್ಯಾವಳಿ ವೇಳೆ ಹೃದಯಾಘಾತಗೊಂಡು ಕುಸಿದು ಬಿದ್ದ ಬ್ಯಾಡ್ಮಿಂಟನ್ ಆಟಗಾರ
![Zimbabwe series; ಮತ್ತೆ ತಂಡದಲ್ಲಿ ಬದಲಾವಣೆ; ಟೀಂ ಇಂಡಿಯಾ ಸೇರಿದ ಮೂವರು ಯುವ ಆಟಗಾರರು](https://www.udayavani.com/wp-content/uploads/2024/07/team-india-1-150x83.jpg)
Zimbabwe series; ಮತ್ತೆ ತಂಡದಲ್ಲಿ ಬದಲಾವಣೆ; ಟೀಂ ಇಂಡಿಯಾ ಸೇರಿದ ಮೂವರು ಯುವ ಆಟಗಾರರು
![1-rewew](https://www.udayavani.com/wp-content/uploads/2024/07/1-rewew-150x100.jpg)
ICC ತಂಡದಲ್ಲಿ ಚಾಂಪಿಯನ್ ಭಾರತದ ಆರು ಆಟಗಾರರು: ದಕ್ಷಿಣ ಆಫ್ರಿಕಾದ ಒಬ್ಬರೂ ಇಲ್ಲ
![1-asddasdsa](https://www.udayavani.com/wp-content/uploads/2024/07/1-asddasdsa-150x100.jpg)
Storm: ವಿಂಡೀಸ್ನಲ್ಲೇ ಉಳಿದ ಭಾರತ ಕ್ರಿಕೆಟ್ ತಂಡ
MUST WATCH
ಹೊಸ ಸೇರ್ಪಡೆ
![vijayapura](https://www.udayavani.com/wp-content/uploads/2024/07/vijayapura-150x90.jpg)
Vijayapura; ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ಹಲವರು ನಾಪತ್ತೆ, ಓರ್ವನ ಶವ ಪತ್ತೆ
![3-crime](https://www.udayavani.com/wp-content/uploads/2024/07/3-crime-150x90.jpg)
Crime News: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು
![Krishna-Byregowda](https://www.udayavani.com/wp-content/uploads/2024/07/Krishna-Byregowda-150x90.jpg)
DK, Udupi: ಕಾಲು ಸಂಕಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ: ಕೃಷ್ಣ ಭೈರೇಗೌಡ
![Kishkindha Anjanadri ,ಅಂಜನಾದ್ರಿ ಹುಂಡಿ,Africa, Italy, England currency](https://www.udayavani.com/wp-content/uploads/2024/07/TEMPLE-150x87.jpg)
Kishkindha ಅಂಜನಾದ್ರಿ ಹುಂಡಿಯಲ್ಲಿ ಆಫ್ರಿಕಾ, ಇಟಲಿ, ಇಂಗ್ಲೆಂಡ್ ಕರೆನ್ಸಿ
![ಚಾರಣಪಥಗಳ ಆನ್ ಲೈನ್ ಟಿಕೆಟ್ ಗೆ ಶೀಘ್ರ ಚಾಲನೆ: ಈಶ್ವರ ಖಂಡ್ರೆ](https://www.udayavani.com/wp-content/uploads/2024/07/eshwar-150x83.jpg)
Trekking: ಚಾರಣಪಥಗಳ ಆನ್ ಲೈನ್ ಟಿಕೆಟ್ ಗೆ ಶೀಘ್ರ ಚಾಲನೆ: ಈಶ್ವರ ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.