Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!
ಅವಮಾನದಿಂದ ಊರಿನಲ್ಲಿ ವಾಸವಾಗಿರಲು ಸಾಧ್ಯವಾಗಿಲ್ಲವಾಗಿತ್ತು
Team Udayavani, Oct 24, 2024, 1:25 PM IST
ಮೊರಾದಾಬಾದ್: ಸುಮಾರು ಒಂಬತ್ತು ವರ್ಷಗಳ ಹಿಂದೆ ಶೂವಿನ ಮಾಲೆ ಮಾಡಿ ಹಾರ ಹಾಕಿ ಅವಮಾನ ಪಡುವಂತೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಆತನನ್ನು ಹ*ತ್ಯೆಗೈದ ಘಟನೆ ಉತ್ತರಪ್ರದೇಶದಲ್ಲಿ ಇತ್ತೀಚೆಗೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಮನ್ವೀರ್ ಹೇಳಿಕೆ ಪ್ರಕಾರ, ಘನಶ್ಯಾಮ್ ಸೈನಿ ಎಂಬಾತ ಸುಮಾರು 9 ವರ್ಷಗಳ ಹಿಂದೆ ತನ್ನ ಸೊಸೆಗೆ ಕಿರುಕುಳ ನೀಡಿರುವುದಾಗಿ ಸುಳ್ಳು ಆರೋಪ ಹೊರಿಸಿ, ಶೂಗಳ ಹಾರ ಕುತ್ತಿಗೆಯಲ್ಲಿ ಧರಿಸುವಂತೆ ಮಾಡಿದ್ದ ಎಂದು ತಿಳಿಸಿದ್ದಾನೆ.
ಪೊಲೀಸರ ತನಿಖೆಯಲ್ಲಿ, ಕಿರುಕುಳ ನೀಡಿದ್ದ ಎಂದು ಆರೋಪಿಸಿದ್ದ ಘನಶ್ಯಾಮ್ ತನ್ನ ಮನೆಯಲ್ಲಿ ಸಮುದಾಯದ ಸದಸ್ಯರ ಜೊತೆ ಪಂಚಾಯ್ತಿ ಕರೆದಿದ್ದ. ಅಲ್ಲಿಗೆ ನನ್ನ ಕರೆಯಿಸಿ ಸುಳ್ಳು ಆರೋಪ ಹೊರಿಸಿದ್ದ ಎಂದು ಮನ್ವೀರ್ ತಿಳಿಸಿದ್ದಾನೆ.
ನಂತರ ಶೂ ಮತ್ತು ಚಪ್ಪಲಿಯಿಂದ ಹೊಡೆದು, ಶೂಗಳ ಹಾರ ಹಾಕಿಸಿ ಅವಮಾನಿಸಿಬಿಟ್ಟಿದ್ದರು ಎಂದು ಮನ್ವೀರ್ ವಿವರಿಸಿದ್ದಾನೆ. ಈ ಘಟನೆ ನಂತರ ನನಗೆ ಅವಮಾನದಿಂದ ಊರಿನಲ್ಲಿ ವಾಸವಾಗಿರಲು ಸಾಧ್ಯವಾಗಿಲ್ಲವಾಗಿತ್ತು. ಪ್ರತಿಯೊಬ್ಬರು ನನಗೆ ತಮಾಷೆ ಮಾಡಿ ಅವಮಾನ ಮಾಡುತ್ತಿದ್ದರು.
ಅವಮಾನದಿಂದ ನೊಂದು ಪಕ್ವಾರಾ ಗ್ರಾಮದಿಂದ ರಾಜಸ್ಥಾನಕ್ಕೆ ತೆರಳಿ, ಅಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡಲು ಆರಂಭಿಸಿರುವುದಾಗಿ ಮನ್ವೀರ್ ತಿಳಿಸಿದ್ದಾನೆ. ಆದರೆ ನಾನು ಯಾವಾಗ ಊರಿಗೆ ಬರುತ್ತೇನೋ ಆ ಸಂದರ್ಭದಲ್ಲಿ ಸ್ಥಳೀಯರು ಶೂ ಹಾರ ಹಾಕಿದ್ದ ವಿಚಾರ ಪ್ರಸ್ತಾಪಿಸಿ ಅವಮಾನ ಮಾಡುತ್ತಿದ್ದರು.
ಘನಶ್ಯಾಮ್ ಕೂಡಾ ಸ್ಥಳೀಯರ ಎದುರು ಆ ಘಟನೆ ಪ್ರಸ್ತಾಪಿಸಿ ಅವಮಾನಿಸುತ್ತಿದ್ದ. ಈ ಆರೋಪದಿಂದ ಮದುವೆಯಾಗಲು ಅಡ್ಡಿಯಾಗುತ್ತಿತ್ತು ಎಂದು ಮನ್ವೀರ್ ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. ನನಗೆ ಘನಶ್ಯಾಮ್ ಮೇಲೆ ವಿಪರೀತ ದ್ವೇಷ ತುಂಬಿಕೊಂಡಿತ್ತು. ಅದಕ್ಕಾಗಿ ನಾನು ಪ್ರತೀಕಾರ ತೀರಿಸಲು ಆಲೋಚಿಸುತ್ತಿದ್ದೆ.
ಅಕ್ಟೋಬರ್ 16ರಂದು ಸೈನಿ ಗದ್ದೆಯಲ್ಲಿ ಒಬ್ಬಂಟಿಯಾಗಿರುವುದು ಕಂಡು, ಚೂರಿಯಿಂದ ಕುತ್ತಿಗೆಗೆ ಇರಿದು ಬಿಟ್ಟಿದ್ದೆ. ನಂತರ ಮುಖ, ಕೈಗಳು, ಭುಜದ ಮೇಲೆ ದಾಳಿ ನಡೆಸಿದ್ದು, ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ. ಆದರೆ ನಾನು ತಪ್ಪಿಸಿಕೊಂಡು ಹೋಗುವ ಬಗ್ಗೆ ಚಿಂತಿಸಿಲ್ಲ, ಯಾಕೆಂದರೆ ಇಷ್ಟೊಂದು ಹಳೆಯ ಘಟನೆಯ ಪ್ರತೀಕಾರ ಎಂಬುದು ಯಾರೂ ಆಲೋಚಿಸುವುದಿಲ್ಲ ಎಂದು ಮನ್ವೀರ್ ತನಿಖೆಯಲ್ಲಿ ತಿಳಿಸಿದ್ದ.
ಸೈನಿಯನ್ನು ಕೊಲೆ ಮಾಡಿದ ನಂತರ ಸಮೀಪದ ಗ್ರಾಮದಲ್ಲಿದ್ದ ಗೆಳೆಯನ ಮನೆಯಲ್ಲಿ ವಾಸವಾಗಿದ್ದೆ. ಆದರೆ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮನ್ವೀರ್ ಕೊಲೆ ಮಾಡಿದ ಜಾಡು ಪತ್ತೆ ಹಚ್ಚಿದ್ದರು…ಇದನ್ನು ತಿಳಿದ ಆತ ರಾಜಸ್ಥಾನಕ್ಕೆ ಪರಾರಿಯಾಗಲು ಯತ್ನಿಸಿದ್ದು, ನಂತರ ಪೊಲೀಸರು ಬಂಧಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UP: ಹಾವು ಕಚ್ಚಿ ಮೂವರು ಮೃತ್ಯು, ಇಬ್ಬರು ಗಂಭೀರ… ಹಾವಾಡಿಗನ ಮೊರೆ ಹೋದ ಅಧಿಕಾರಿಗಳು
Jammu – Kashmir: ಮತ್ತೆ ಉಗ್ರರಿಂದ ಗುಂಡಿನ ದಾಳಿ… ಓರ್ವ ವಲಸೆ ಕಾರ್ಮಿಕನಿಗೆ ಗಾಯ
Arrested: ನಟ ಸಲ್ಮಾನ್ ಖಾನ್ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್
Female CFO: ಭಾರತದ ಪಾಮ್ ಕೌರ್ಗೆ ಎಚ್ಎಸ್ಬಿಸಿ ಸಿಎಫ್ಒ ಹುದ್ದೆ
Post Office Fined: 50 ಪೈಸೆ ಹಿಂದಿರುಗಿಸದ ಅಂಚೆ ಕಚೇರಿಗೆ 15,000 ದಂಡ!
MUST WATCH
ಹೊಸ ಸೇರ್ಪಡೆ
UP: ಹಾವು ಕಚ್ಚಿ ಮೂವರು ಮೃತ್ಯು, ಇಬ್ಬರು ಗಂಭೀರ… ಹಾವಾಡಿಗನ ಮೊರೆ ಹೋದ ಅಧಿಕಾರಿಗಳು
India: ಮತ್ತೆ ಏರ್ ಇಂಡಿಯಾ, ವಿಸ್ತಾರ ಸೇರಿ 85 ವಿಮಾನಗಳಿಗೆ ನಕಲಿ ಬಾಂಬ್ ಬೆದರಿಕೆ ಕರೆ
INDvsNZ: ವಾಷಿಂಗ್ಟನ್ ಸ್ಪಿನ್ ಜಾಲಕ್ಕೆ ಸಿಲುಕಿದ ಕಿವೀಸ್; 259 ರನ್ ಗೆ ಆಲೌಟ್
Salaar 2: ಪ್ರಭಾಸ್ – ಪ್ರಶಾಂತ್ ನೀಲ್ ʼಸಲಾರ್ -2ʼ ಶೂಟಿಂಗ್ ಆರಂಭ?
Udupi: ಸಂಸ್ಕೃತ ಎಲ್ಲ ಭಾಷೆಗಳ ಮೂಲ.. ಪ್ರಾಚ್ಯವಿದ್ಯಾ ಸಮ್ಮೇಳನ ಉದ್ಘಾಟಿಸಿ ಬಾಬಾ ರಾಮ್ ದೇವ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.