ಮುಲ್ಲಕಾಡು ರೇಚಕ ಸ್ಥಾವರದಿಂದಲೇ ತ್ಯಾಜ್ಯ ನೀರು ನೇರ ತೋಡಿಗೆ!


Team Udayavani, Feb 10, 2021, 5:35 AM IST

ಮುಲ್ಲಕಾಡು ರೇಚಕ ಸ್ಥಾವರದಿಂದಲೇ ತ್ಯಾಜ್ಯ ನೀರು ನೇರ ತೋಡಿಗೆ!

ಕಾವೂರು: ಸ್ವತ್ಛತೆ ಕಾಪಾಡಿ ಎಂದು ಸಾರ್ವಜನಿಕರಿಗೆ ಬುದ್ಧಿ ಹೇಳುವ ಸರಕಾರದ ಘಟಕಗಳೇ ಸ್ವತಃ ಈ ಮಾತನ್ನು ಉಲ್ಲಂಘಿಸುತ್ತಿರುವುದು ಕಾವೂರು ಮುಲ್ಲ ಕಾಡಿನ ರೇಚಕ ಸ್ಥಾವರ ಕಂಡಾಗ ತಿಳಿದು ಬರುತ್ತದೆ. ವಾರದಿಂದ ಇಲ್ಲಿನ ರೇಚಕ ಸ್ಥಾವರದ ಶುದ್ಧೀಕರಣ ಘಟಕದಲ್ಲಿ ಕೊಳಚೆ ನೀರನ್ನು ನೇರವಾಗಿ ತೋಡಿಗೆ ಬಿಡುವ ಆರೋಪ ಕೇಳಿಬಂದಿದೆ. ಇಲ್ಲಿನ ಸ್ಥಾವರಕ್ಕೆ ಬಂದ ಒಳಚರಂಡಿ ತ್ಯಾಜ್ಯಗಳನ್ನು ಮೂರು ಹಂತಗಳಲ್ಲಿ ಶುದ್ಧೀಕರಣಗೊಳಿಸಿ ಎಸ್‌ಇಝಡ್‌ಗೆ ಸಾಗಿಸಲಾಗುತ್ತಿದೆ. ಆದರೆ ಇದೀಗ ಇಲ್ಲಿನ ಉಳಿದ ತ್ಯಾಜ್ಯ ಸ್ಲೆಜ್‌ಗಳನ್ನು ನೇರವಾಗಿ ದೊಡ್ಡ ಪೈಪ್‌ ಮೂಲಕ ರೇಚಕ ಸ್ಥಾವರದ ಒಳಗಿರುವ ತೋಟಕ್ಕೆ ಬಿಡಲಾಗುತ್ತಿದೆ.

ಈ ಕೊಳಚೆ ನೀರು ಸಮೀಪದಲ್ಲೇ ಹರಿಯುವ ಮಳೆ ನೀರು ತೋಡಿಗೆ ಹರಿದು ಮುಲ್ಲಕಾಡು, ಮಂಜಲ್‌ ಪಾದೆ, ಬಂಗ್ರ ಕೂಳೂರು ಮತ್ತಿತರ ಕಡೆ ದುರ್ನಾತ ಬೀರು ತ್ತಿದೆ. ಇದರಿಂದ ಸ್ಥಳೀಯರು ಸಾಂಕ್ರಾಮಿಕ ರೋಗ ಹರಡುವ ಭೀತಿಗೆ ಒಳಗಾಗಿದ್ದಾರೆ

ರೇಚಕದ ಡೈಯಿಂಗ್‌ ಬೆಡ್‌ ಫ‌ುಲ್‌!
ಇಲ್ಲಿನ ರೇಚಕ ಸ್ಥಾವರಕ್ಕೆ ಬರುವ ತ್ಯಾಜ್ಯಗಳನ್ನು ಇಲ್ಲಿನ ಡೈಯಿಂಗ್‌ ಬೆಡ್‌ನ‌ಲ್ಲಿ ಎರಡಿಂಚಿನಷ್ಟು ತುಂಬಿಸಿ ಅದರಲ್ಲಿನ ಕಲ್ಮಶಗಳನ್ನು ತೆಗೆದು ಸಂಸ್ಕರಿಸಿ ಎರಡನೇ ಹಂತಕ್ಕೆ ಪೈಪ್‌ ಮೂಲಕ ಕಳಿಸಬೇಕಾಗುತ್ತದೆ. ಅನಂತರ ಮೂರನೇ ಹಂತದಲ್ಲಿ ಸಂಸ್ಕರಿಸಿ ಎಸ್‌ಇಝಡ್‌ ನೀರಿನ ಮರುಬಳಕೆಗೆ ಕ್ರಮ ಕೈಗೊಳ್ಳುತ್ತದೆ. ಆದರೆ ಇಲ್ಲಿ ಮೊದಲ ಹಂತದಲ್ಲೇ ಆರಿಂಚಿನಷ್ಟು ಸ್ಲೆಜ್‌ ತುಂಬಿಸಿದ ಕಾರಣ ತಾಂತ್ರಿಕವಾಗಿ ಸಮಸ್ಯೆಯಾಗಿ ಬೆಡ್‌ಗಳಲ್ಲಿ ನೀರು ನಿಂತು ಪಾಚಿ ಹಿಡಿದಿದೆ. ಇತ್ತ ಸ್ಲೆಜ್‌ಗಳನ್ನು ನೇರವಾಗಿ ತೋಡಿಗೆ ಬಿಡಲಾಗಿದೆ. ಇದರಿಂದ ಸುತ್ತಮುತ್ತ ಅತಿಯಾದ ದುರ್ನಾತ, ಸೊಳ್ಳೆಕಾಟ ಕಂಡು ಬರುತ್ತಿದ್ದು, ಸಾಂಕ್ರಾಮಿಕ ರೋಗ ಬಾ ಧಿಸಿದರೂ ಅಚ್ಚರಿ ಯಿಲ್ಲ. ಮುಲ್ಲಕಾಡು ಜನತೆ ಇಲ್ಲಿನ ರೇಚಕ ಸ್ಥಾವರದಿಂದ ಈಗಾಗಲೇ ನಿತ್ಯ ನರಕಯಾತನೆ ಅನುಭವಿಸುತ್ತಿದ್ದು ಇದೀಗ ಇಲ್ಲಿನ ಮಾಲಿನ್ಯದಿಂದ ಸುತ್ತಮುತ್ತಲಿನ ಬಾವಿನೀರು ಹಾಳಾಗಿ ಪಾಲಿಕೆಯ ಕೊಳವೆ ನೀರನ್ನು ಆಶ್ರಯಿಸಿದ್ದಾರೆ.ಹಲವು ದಿನ ಗಳಿಂದ ಈ ಭಾಗದಲ್ಲಿ ವಾಸವಿರುವ ಕುಟುಂಬ ಗಳಿಗೆ ಕೆಟ್ಟ ವಾಸನೆ ಬೀರುತ್ತಿದ್ದರಿಂದ ಅನು ಮಾನಗೊಂಡು ಏಕಾಏಕೀ ಭೇಟಿ ನೀಡಿ ಪರಿಶೀಲಿಸಿದಾಗ ಶುದ್ಧೀಕರಣಗೊಳಿಸದೆ ಪೈಪ್‌ನಲ್ಲಿ ತ್ಯಾಜ್ಯವನ್ನು ನೇರವಾಗಿ ತೋಟಕ್ಕೆ ಬಿಡುತ್ತಿರುವುದು ಕಂಡು ಆತಂಕವಾಯಿತು. ಈ ರೀತಿ ನಿರ್ಲಕ್ಷ್ಯಮಾಡಿದರೆ ಸ್ಥಳೀಯರು ಮುಂದಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಬಹುದು. ಈ ಹಿಂದೆಯೂ ಇಂತಹ ಅಧ್ವಾನಗಳಾದಾಗ ಮರಗಿಡಗಳಲ್ಲಿ ಎಲ್ಲೆಂದರಲ್ಲಿ ನೊಣಗಳು ಕಂಡು ಬಂದು ಸಾರ್ವಜನಿಕರಿಗೆ ತೊಂದರೆಯಾಗಿತ್ತು ಎನ್ನುತ್ತಾರೆ ದೀಪಕ್‌ ಪೂಜಾರಿ.

ಬೆರಳೆಣಿಕೆಯ ಕಾರ್ಮಿಕರು!
ಇಲ್ಲಿನ ರೇಚಕ ಸ್ಥಾವರದ ಡೈಯಿಂಗ್‌ ಬೆಡ್‌ ಶುಚಿಗೊಳಿಸಲು ಕನಿಷ್ಠ ಹತ್ತು ಕಾರ್ಮಿಕರ ಆವಶ್ಯಕತೆಯಿದೆ. ಆದರೆ ಬುಧವಾರ ಭೇಟಿ ನೀಡಿದಾಗ ಬೆರಳೆಣಿಕೆಯ ಕಾರ್ಮಿಕರು ಕಂಡು ಬಂದಿದ್ದು ನಿತ್ಯ ಕೆಲಸ ಕಾರ್ಯಕ್ಕೂ ಸಾಲದಾಗಿದೆ. ಈ ಎಲ್ಲ ಸಮಸ್ಯೆಯಿಂದ ಡೈಯಿಂಗ್‌ ಬೆಡ್‌ ಶುಚಿಗೊಳಿಸಲಾಗದೆ ನೇರವಾಗಿ ತೋಡಿಗೆ ಬಿಡಲಾಗುತ್ತಿದೆ.

ಕ್ರಮಕ್ಕೆ ಸೂಚನೆ
ಮುಲ್ಲಕಾಡು ರೇಚಕ ಸ್ಥಾವರದಲ್ಲಿ ತ್ಯಾಜ್ಯವನ್ನು ನೇರವಾಗಿ ತೋಡಿಗೆ ಬಿಡುತ್ತಿರುವುದರ ಬಗ್ಗೆ ಅಧಿಕಾರಿಗಳಿಗೆ ಪರಿಶೀಲನೆ ನಡೆಸಲು ಸೂಚಿಸಲಾಗುವುದು. ತಪ್ಪು ಎಸಗಿದ್ದು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಅಕ್ಷಯ್‌ ಶ್ರೀಧರ್‌, ಆಯುಕ್ತರು, ಮ.ನ.ಪಾ.

ತತ್‌ಕ್ಷಣ ಕ್ರಮ ಕೈಗೊಳ್ಳಿ
ಇಲ್ಲಿನ ಸ್ಥಾವರ ನಿರ್ವಹಣೆಗೆ ಶೇ.70ರಷ್ಟು ಎಸ್‌ಇಝಡ್‌, ಪಾಲಿಕೆ ಶೇ. 30ರಷ್ಟು ಅಂದರೆ 1.30 ಕೋ.ರೂ. ಗುತ್ತಿಗೆದಾ ರರಿಗೆ ಪಾವತಿಸುತ್ತದೆ. ತತ್‌ಕ್ಷಣ ಎಸ್‌ಇಝಡ್‌ ಅಧಿಕಾರಿಗಳು, ಪಾಲಿಕೆ ಆರೋಗ್ಯ ವಿಭಾಗ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕು. ಗುತ್ತಿಗೆ ರದ್ದುಪಡಿಸಿ ಗುತ್ತಿಗೆ ದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು.
-ದೀಪಕ್‌ ಪೂಜಾರಿ,ನಗರ ಯೋಜನೆ, ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷರು,

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Dinesh-Gundurao

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.