ಮುಂಬೈ ಇಂಡಿಯನ್ಸ್ಗೆ 4 ವಿಕೆಟ್ ಗೆಲುವು: ಸೋಲಿನೊಂದಿಗೆ ಡಬ್ಲೂಪಿಎಲ್ ಮುಗಿಸಿದ ಮಂಧನಾ ಪಡೆ
Team Udayavani, Mar 22, 2023, 7:32 AM IST
ಮುಂಬೈ: ತೀವ್ರ ಪೈಪೋಟಿಯಿಂದ ಸಾಗಿದ ವನಿತಾ ಪ್ರೀಮಿಯರ್ ಲೀಗ್ನ ಮಂಗಳವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ರಾಯಲ್ ಚಾಲೆಂಜರ್ ಬೆಂಗಳೂರು ತಂಡವನ್ನು 4 ವಿಕೆಟ್ಗಳಿಂದ ಸೋಲಿಸಲು ಯಶಸ್ವಿಯಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡವು 6 ವಿಕೆಟಿಗೆ 125 ರನ್ ಗಳಿಸಲು ಶಕ್ತವಾಯಿತು. ಇದಕ್ಕುತ್ತರವಾಗಿ ಉತ್ತಮ ಆರಂಭದ ಹೊರತಾಗಿಯೂ ಬ್ಯಾಟಿಂಗ್ ಕುಸಿತಕ್ಕೆ ಒಳಗಾದರೂ ಅಂತಿಮವಾಗಿ 16.3 ಓವರ್ಗಳಲ್ಲಿ 129 ರನ್ ಗಳಿಸಿ ಜಯಭೇರಿ ಬಾರಿಸಿತು. ಹೀಲಿ ಮ್ಯಾಥ್ಯೂಸ್ ಮತ್ತು ಯಾಸ್ತಿಕಾ ಭಾಟಿಯಾ ಮೊದಲ ವಿಕೆಟಿಗೆ 53 ರನ್ ಪೇರಿಸಿದ್ದರು. ಆಬಳಿಕ ಕೆಲವು ವಿಕೆಟ್ ಉರುಳಿದ್ದರೂ ಗೆಲುವಿನ ಮೊತ್ತ ಕಡಿಮೆ ಇದ್ದ ಕಾರಣ ಮುಂಬೈ ಜಯ ಸಾಧಿಸುವಂತಾಯಿತು.
ಸ್ಪಿನ್ ದಾಳಿಗೆ ಕಂಗಾಲು
ಈ ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆರ್ಸಿಬಿ ತಂಡವು ಅಮೆಲಿಯಾ ಕೆರ್ರ ಅವರ ಮಾರಕ ದಾಳಿಗೆ ಸಿಲುಕಿ 125 ರನ್ ಗಳಿಸಲಷ್ಟೇ ಶಕ್ತವಾಯಿತು. ಸ್ಪಿನ್ನರ್ಗಳು ಮೇಲುಗೈ ಪಡೆಯಬಹುದೆಂಬ ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್ ಪ್ರೀತ್ ಅವರ ನಿರೀಕ್ಷೆ ಸರಿಯಾಗಿಯೇ ಫಲ ನೀಡಿತು. ಕೆರ್ರ ಅವರು 22 ರನ್ ನೀಡಿ ಮೂರು ವಿಕೆಟ್ ಉರುಳಿಸಿ ಬೌಲಿಂಗ್ನಲ್ಲಿ ಅಗ್ರಸ್ಥಾನಿಯಾಗಿ ಮಿಂಚಿದರೆ ಹೀಲಿ ಮ್ಯಾಥ್ಯೂಸ್ ಮತ್ತು ಸೈಕಾ ಇಶಾಕಿ ಅವರು ಬ್ಯಾಟರ್ಗಳನ್ನು ಕಾಡುವಲ್ಲಿ ಯಶಸ್ವಿಯಾದರು.
ಮಂಗಳವಾರದ ಈ ಸಾಧನೆಯೊಂದಿಗೆ ಕೆರ್ರ ಮತ್ತು ಇಶಾಕಿ ಅವರು ಯುಪಿಯ ಸೋಫಿ ಅವರೊಂದಿಗೆ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಗರಿಷ್ಠ 13 ವಿಕೆಟ್ ಉರುಳಿಸಿದ ಸಾಧನೆಗೆ ಪಾತ್ರರಾದರು.
ಪಂದ್ಯದ ನಾಲ್ಕನೇ ಎಸೆತದಲ್ಲಿಯೇ ಮುಂಬೈ ಯಶಸ್ಸೊಂದನ್ನು ಪಡೆಯಿತು. ಸ್ಮತಿ ಮಂಧನಾ ಮತ್ತು ಸೋಫಿ ಡಿವೈನ್ ಅವರ ನಡುವಿನ ಹೊಂದಾಣಿಕೆ ರಹಿತ ಓಟವು ರನೌಟ್ಗೆ ಕಾರಣವಾಯಿತು. ಇದರಿಂದ ಆರಂಭದಲ್ಲಿಯೇ ಆರ್ಸಿಬಿ ಒತ್ತಡಕ್ಕೆ ಸಿಲುಕಿತು. ಆಗ ತಂಡದ ಸ್ಕೋರ್ ಕೇವಲ ಒಂದು ರನ್-ಒಂದು ವಿಕೆಟ್.
ಸ್ಮತಿ ಅವರು ಕೆರ್ರ ಅವರ ಸ್ಪಿನ್ ದಾಳಿಗೆ ಸಿಲುಕುವ ಮೊದಲು ಉತ್ತಮವಾಗಿ ಆಡಿ 25 ಎಸೆತಗಳನ್ನು ಎದುರಿಸಿ 24 ರನ್ ಸಂಪಾದಿಸಿದರು. ಇದರಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡಿತ್ತು. ಎಲ್ಸಿ ಪೆರ್ರಿ ಅವರು ಆರಂಭದಲ್ಲಿ ಎಚ್ಚರಿಕೆಯಿಂದ ಆಟವಾಡಿದರು. ಅವರು 10ನೇ ಓವರ್ನಲ್ಲಷ್ಟೇ ಸತತ ಬೌಂಡರಿ ಸಿಡಿಸುವ ಮೂಲಕ ರನ್ರೇಟ್ ಏರಿಸಿಕೊಂಡರು. ಒಟ್ಟು 28 ಎಸೆತಗಳನ್ನು ಎದುರಿಸಿ 29 ರನ್ ಗಳಿಸಿದರು. ಅದರಲ್ಲಿ ಮೂರು ಬೌಂಡರಿಗಳಿದ್ದವು. ಅರ್ಧ ಇನ್ನಿಂಗ್ಸ್ ಮುಗಿದಾಗ ತಂಡ ಎರಡು ವಿಕೆಟ್ ನಷ್ಟಕ್ಕೆ 56 ರನ್ ಗಳಿಸಿತ್ತು. ಮಧ್ಯಮ ಕ್ರಮಾಂಕದಲ್ಲಿ ರಿಚಾ ಘೋಷ್ ಅವರು ಸ್ವಲ್ಪ ಸಿಡಿದ ಕಾರಣ ತಂಡ 100ರ ಗಡಿ ದಾಟಲು ಸಾಧ್ಯವಾಯಿತು. ರಿಚಾ ಅವರು ಕೇವಲ 13 ಎಸೆತಗಳಲ್ಲಿ 29 ರನ್ ಸಿಡಿಸಿದರು. ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ಗಳು ಇದರಲ್ಲಿ ಸೇರಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ
Womens T20 World Cup: ಪಾಕ್ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್ ಸೋತ ಭಾರತ
INDvsBAN: ಟಿ20ಯಲ್ಲಿ ಭಾರತಕ್ಕೆ ಹೊಸ ಆರಂಭಿಕರು; ಶರ್ಮಾ ಜತೆ ಓಪನರ್ ಯಾರು?
T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್
Women’s T20 World Cup: ಭಾರತಕ್ಕೆ ಎದುರಾಗಿದೆ ಪಾಕ್ ಸವಾಲು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.