![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Mar 6, 2023, 4:14 PM IST
ಶಿಮ್ಲಾ: ಧಾರ್ಮಿಕ ಸೌಹಾರ್ದತೆಯ ಸಂದೇಶ ನೀಡಲು ಹಿಮಾಚಲ ಪ್ರದೇಶದ ರಾಮ್ಪುರದ ಹಿಂದೂ ದೇವಾಲಯದ ಆವರಣದಲ್ಲಿ ಇಸ್ಲಾಮಿಕ್ ವಿವಾಹ ಪದ್ಧತಿಯಂತೆ ಮುಸ್ಲಿಂ ಜೋಡಿಯ ವಿವಾಹ ಭಾನುವಾರ ನೆರವೇರಿದೆ.
ವಿಶ್ವ ಹಿಂದೂ ಪರಿಷತ್ತಿನ ಠಾಕೂರ್ ಸತ್ಯನಾರಾಯಣ ದೇವಸ್ಥಾನದ ಆವರಣದಲ್ಲಿ ವಿವಾಹ ನೆರವೇರಿತು. ಮುಸ್ಲಿಂ ಮತ್ತು ಹಿಂದೂ ಸಮಾಜದ ಜನರೆಲ್ಲರೂ ಸಮಾರಂಭಕ್ಕೆ ಸಾಕ್ಷಿಯಾದರು. ದೇವಸ್ಥಾನದ ಆವರಣದಲ್ಲೇ ಮೌಲ್ವಿ, ಸಾಕ್ಷಿಗಳು ಮತ್ತು ವಕೀಲರ ಸಮ್ಮುಖದಲ್ಲಿ ನಿಕಾಹ ನೆರವೇರಿಸಲಾಯಿತು. ಧಾರ್ಮಿಕ ಸೌಹಾರ್ದತೆ ಹಾಗೂ ಸಹೋದರತ್ವದ ಸಂದೇಶ ಸಾರುವ ಉದ್ದೇಶವೇ ಪ್ರಮುಖವಾಗಿತ್ತು.
ಸತ್ಯನಾರಾಯಣ ದೇವಸ್ಥಾನ ಸಂಕೀರ್ಣವು ವಿಹೆಚ್ ಪಿ ಮತ್ತು ಆರ್ಎಸ್ಎಸ್ನ ಜಿಲ್ಲಾ ಕಚೇರಿಯಾಗಿದೆ ಎಂದು ದೇವಸ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವಿನಯ್ ಶರ್ಮಾ ಎಎನ್ಐಗೆ ತಿಳಿಸಿದರು.
ವಿಹೆಚ್ ಪಿ ಮತ್ತು ಆರ್ಎಸ್ಎಸ್ಗಳು ಸಾಮಾನ್ಯವಾಗಿ ಮುಸ್ಲಿಂ ವಿರೋಧಿ ಎಂದು ಆರೋಪಿಸುತ್ತಾರೆ. ಆದರೆ ಇಲ್ಲೊಂದು ಮುಸ್ಲಿಂ ಜೋಡಿಯೊಂದು ಹಿಂದೂ ದೇವಾಲಯದ ಆವರಣದಲ್ಲಿ ಮದುವೆಯಾಗಿದೆ. ಇದು ಸನಾತನ ಧರ್ಮವು ಯಾವಾಗಲೂ ಎಲ್ಲರಿಗೂ ಮುಂದುವರಿಯಲು ಮತ್ತು ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯಲು ಪ್ರೇರೇಪಿಸುತ್ತದೆ ಎಂದು ತೋರಿಸಿ ಕೊಟ್ಟಿದೆ ಎಂದರು.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.