![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jan 6, 2023, 2:24 PM IST
ಬೆಂಗಳೂರು: ನಿನ್ನೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಬೆಂಗಳೂರು – ಮೈಸೂರು ಹೈವೆ ಪರಿಶೀಲನೆ ನಡೆಸಿದ್ದಾರೆ. ಕಾವೇರಿ ನದಿ ಹೆಸರನ್ನು ಹೈವೆಗೆ ಇಡಲು ಮನವಿ ಮಾಡಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಶುಕ್ರವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೈಸೂರು ಸಂಸದ ,ಫೆಬ್ರವರಿ ಅಂತ್ಯದೊಳಗೆ ಕಾಮಗಾರಿ ಮುಗಿಸಲು ಗಡ್ಕರಿ ಅವರು ಸೂಚನೆ ನೀಡಿದ್ದಾರೆ.
ರಸ್ತೆ ಬಹಳ ಚೆನ್ನಾಗಿ ಬಂದಿದೆ ಎಂದು ಹೇಳಿದ್ದಾರೆ. ದ್ವಿಚಕ್ರ – ತ್ರಿಚಕ್ರ ವಾಹನಗಳಿಗೆ ಬೆಂಗಳೂರು – ಮೈಸೂರು ಹೈವೆಯಲ್ಲಿ ಪ್ರವೇಶವಿಲ್ಲ ಎಂದು ತಿಳಿಸಿದ್ದಾರೆ.
ಸರ್ವಿಸ್ ರೋಡ್ ಸಂಪೂರ್ಣ ವಾಗಿ ನಿರ್ಮಾಣವಾಗುವವರೆಗೂ ಎಲ್ಲಾ ವಾಹನಗಳಿಗೆ ಅವಕಾಶ ನೀಡಲಾಗುತ್ತದೆ. ಸರ್ವಿಸ್ ರಸ್ತೆ ನಿರ್ಮಾಣವಾದ ಮೇಲೆ ದ್ವಿಚಕ್ರ – ತ್ರಿಚಕ್ರ ವಾಹನಗಳಿಗೆ ಹೈವೆ ರಸ್ತೆಯಲ್ಲಿ ಅವಕಾಶವಿಲ್ಲ.ಆಕ್ಸಿಡೆಂಟ್ ಫ್ರೀ ರಸ್ತೆ ಮಾಡುವ ಉದ್ದೇಶದಿಂದ ಈ ತೀರ್ಮಾನ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಉತ್ತರ ಪ್ರದೇಶದಲ್ಲಿ ನದಿಗಳ ಹೆಸರನ್ನು ಹೈವೇಗೆ ಇಟ್ಟಿದ್ದಾರೆ. ಅದೇ ರೀತಿಯಲ್ಲಿ ಕಾವೇರಿ ನದಿ ಹೆಸರನ್ನು ಹೈವೆಗೆ ಇಡಲು ಮನವಿ ಮಾಡಿದ್ದೇನೆ. ಕಾವೇರಿ ಜೀವನದಿ, ಪವಿತ್ರವಾದ ನದಿ. ಬಹಳ ಭಕ್ತಿಯಿಂದ ಪೂಜಿಸುವ ನದಿ ಕಾವೇರಿ. ಬೆಂಗಳೂರು ಉದ್ಧಾರವಾಗಿದ್ದೆ ಕಾವೇರಿ ನದಿಯಿಂದ. ರಾಜಕಾರಣಿಗಳು ಒಂದೊಂದು ಹೆಸರು ಹೇಳುತ್ತಿದ್ದಾರೆ. ಕಾವೇರಿ ನದಿ ಇಲ್ಲದೆ ಇದ್ದರೆ ನಾವು ಯಾವ ನೀರು ಕುಡಿಯಬೇಕಿತ್ತು? ಕಾವೇರಿ ನದಿ ಇರದಿದ್ದರೆ ಕನ್ನಂಬಾಡಿ ಕಟ್ಟಲು ಆಗುತ್ತಿತ್ತಾ? ನಾಲ್ವಡಿ ಹೆಸರನ್ನು ಮೈಸೂರು ವಿಮಾನ ನಿಲ್ದಾಣಕ್ಕೆ ಇಡುತ್ತಿದ್ದೇವೆ. ದೇವೇಗೌಡರ ಹೆಸರು ಕೂಡ ಕೇಳಿ ಬಂದಿದೆ.ದೇಶದಲ್ಲಿ ಎಲ್ಲೂ ಹೈವೆಗೆ ವ್ಯಕ್ತಿಯ ಹೆಸರು ಇಟ್ಟಿಲ್ಲ. ಎಸ್.ಎಂ. ಕೃಷ್ಣ ಅವರ ಬಗ್ಗೆ ಗೌರವವಿದೆ. ಅವರನ್ನು ಕೇಳುತ್ತೇವೆ. ಎಲ್ಲರೂ ಸೇರಿ ಕಾವೇರಿ ನದಿ ಹೆಸರು ಇಡಲು ಸಿಎಂ ಗೆ ಮನವಿ ಮಾಡೋಣ ಎಂದರು.
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
Congress Siddu Team: ಸಿದ್ದರಾಮಯ್ಯ ಆಪ್ತರಿಂದ ಈಗ ʼಮಾಸ್ ಲೀಡರ್ʼ ಅಸ್ತ್ರ
You seem to have an Ad Blocker on.
To continue reading, please turn it off or whitelist Udayavani.