![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Dec 16, 2021, 2:44 PM IST
ಮುಂಬಯಿ : ದೇಶಾದ್ಯಂತ ಸಂಚಲನ ಮೂಡಿಸಿದ ಕೊಲೆ ಪ್ರಕರಣ ದೊಡ್ಡ ತಿರುವೊಂದನ್ನು ಪಡೆದು ಕೊಂಡಿದ್ದು ಶೀನಾ ಬೋರಾ ಕಾಶ್ಮೀರದಲ್ಲಿ ಜೀವಂತವಾಗಿದ್ದಾಳೆ ಎಂದು ಆಕೆಯ ತಾಯಿ ಇಂದ್ರಾಣಿ ಮುಖರ್ಜಿ ಹೇಳಿದ್ದಾಳೆ.
2012ರಲ್ಲಿ ತನ್ನ ಮಗಳು ಶೀನಾ ಬೋರಾಳನ್ನು ಹತ್ಯೆಗೈದ ಆರೋಪ ಹೊತ್ತಿರುವ ಮಾಜಿ ಮಾಧ್ಯಮ ಕಾರ್ಯನಿರ್ವಹಣಾಧಿಕಾರಿ ಇಂದ್ರಾಣಿ ಮುಖರ್ಜಿ ಸಿಬಿಐಗೆ ಪತ್ರ ಬರೆದಿದ್ದು, ಮಗಳು ಬದುಕಿರುವ ಬಗ್ಗೆ ಸಿಬಿಐಗೆ ತನಿಖೆ ನಡೆಸುವಂತೆ ಕೋರಿದ್ದು, ಈ ಪತ್ರ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ತಾನು ಕಾಶ್ಮೀರದಲ್ಲಿ ಶೀನಾ ಬೋರಾಳನ್ನು ಭೇಟಿಯಾಗಿದ್ದೆ ಎಂದು ಹೇಳಿದ ಮಹಿಳಾ ಖೈದಿಯೊಬ್ಬರನ್ನು ತಾನು ಭೇಟಿಯಾಗಿದ್ದಾಗಿ ಇಂದ್ರಾಣಿ ಮುಖರ್ಜಿ ಹೇಳಿಕೊಂಡಿದ್ದಾರೆ ಎಂದು ಸಿಬಿಐ ಮುಖ್ಯಸ್ಥರಿಗೆ ನೇರವಾಗಿ ಕಳುಹಿಸಿದ ಪತ್ರವನ್ನು ಉಲ್ಲೇಖಿಸಿ ಮೂಲಗಳು ತಿಳಿಸಿವೆ.
ಇಂದ್ರಾಣಿ ಸಿಬಿಐಗೆ ಪತ್ರ ಬರೆದಿದ್ದಾರೆ,ಆದರೆ ಅವರು ಏನು ಬರೆದಿದ್ದಾರೆ ಎಂಬುದರ ಕುರಿತು ನಮಗೆ ಯಾವುದೇ ವಿವರಗಳು ತಿಳಿದಿಲ್ಲ” ಎಂದು ಅವರ ವಕೀಲೆ ಸನಾ ಖಾನ್ ಇಂದು ಹೇಳಿದರು, ಜಾಮೀನಿಗಾಗಿ ಔಪಚಾರಿಕ ಅರ್ಜಿಯನ್ನು ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.
ಇಂದ್ರಾಣಿ ಮುಖರ್ಜಿಯನ್ನು 2015 ರಿಂದ ಮುಂಬೈನ ಬೈಕುಲ್ಲಾ ಜೈಲಿನಲ್ಲಿಡಲಾಗಿದೆ. ಆಕೆಯ ಮೊದಲ ಗಂಡನ ಮಗಳು 25 ವರ್ಷದ ಶೀನಾ ಬೋರಾಳನ್ನು ಹತ್ಯೆಗೈದ ಆರೋಪದ ಮೇಲೆ ಬಂಧಿಸಲಾಗಿತ್ತು.
ಇಂದ್ರಾಣಿ ಬಂಧನದ ಮೂರು ತಿಂಗಳ ನಂತರ, ಸಹಾಯ ಮಾಡಿದ ಆರೋಪದ ಮೇಲೆ ಆಕೆಯ ಮಾಜಿ ಪತಿ ಪೀಟರ್ ಮುಖರ್ಜಿಯನ್ನೂ ಬಂಧಿಸಲಾಗಿತ್ತು.
ತನಿಖಾಧಿಕಾರಿಗಳು ಆಕೆಯ ಇತ್ತೀಚಿನ ಹೇಳಿಕೆಯನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಮೂಲಗಳು ಹೇಳಿವೆ.
ಶೀನಾ ಬೋರಾಳನ್ನು ಇಂದ್ರಾಣಿ ಮುಖರ್ಜಿ ಕೊಲೆ ಮಾಡಿದ್ದಾಳೆ, ಚಾಲಕ ಶ್ಯಾಮ್ವರ್ ರೈ ಮತ್ತು ಅವರ ಎರಡನೇ ಪತಿ ಸಂಜೀವ್ ಖನ್ನಾ ಕೊಲೆಗೆ ಸಹಾಯ ಮಾಡಿದ್ದಾರೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಮುಂಬೈ ಪೋಲೀಸರ ತಿಂಗಳ ತನಿಖೆಯ ನಂತರ 2015 ರ ಕೊನೆಯಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡ ಸಿಬಿಐ ಪ್ರಕಾರ, ಹಿಂದಿನ ಮದುವೆ ಪೀಟರ್ ಮುಖರ್ಜಿಯವರ ಮಗ – ರಾಹುಲ್ ಮುಖರ್ಜಿಯೊಂದಿಗಿನ ಸಂಬಂಧದ ಬಗ್ಗೆ ಶೀನಾಳೊಂದಿಗೆ ಕೋಪಗೊಂಡಿದ್ದರಿಂದ ಇಂದ್ರಾಣಿ ಕೊಲೆ ಮಾಡಿದ್ದಾರೆ. ಅವರ ನಡುವಿನ ಹಣಕಾಸಿನ ವಿವಾದದ ನಂತರ ಶೀನಾ ಬೋರಾ ತನ್ನ ತಾಯಿಯ ವಿಚಾರಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಸಿಬಿಐ ಹೇಳಿದೆ.
ಕೊಲೆಯ ನಂತರ ಇಂದ್ರಾಣಿ, ಶೀನಾ ಅಮೆರಿಕಕ್ಕೆ ತೆರಳಿದ್ದಾಳೆ ಎಂದು ಎಲ್ಲರಿಗೂ ಹೇಳಿ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿದರು ಎಂದು ತನಿಖಾಧಿಕಾರಿಗಳು ಈಗಾಗಲೇ ಹೇಳಿದ್ದಾರೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.