ಕೊನೇ ಕ್ಷಣದಲ್ಲಿ ಎಸ್ಪಿಗೆ ಕೈಕೊಟ್ಟ 7ಶಾಸಕರು, ಯುಪಿಯಲ್ಲಿ ಎಸ್ಪಿ ಮುಖ್ಯ ಸಚೇತಕ ರಾಜೀನಾಮೆ
Team Udayavani, Feb 28, 2024, 9:21 AM IST
ಲಕ್ನೋ: ರಾಜ್ಯಸಭೆ ಚುನಾವಣೆಯ ದಿನವಾದ ಮಂಗಳವಾರ ಬೆಳಗ್ಗೆಯೇ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷಕ್ಕೆ ದೊಡ್ಡ ಶಾಕ್ ಎದುರಾಯಿತು. ಈ ಆಘಾತದ ಪರಿಣಾಮವು ರಾತ್ರಿ ಪ್ರಕಟವಾದ ಫಲಿತಾಂಶದಲ್ಲಿ ಸ್ಪಷ್ಟವಾಗಿ ಗೋಚರಿಸಿತು.
ಹೌದು, ರಾಜ್ಯಸಭೆಯ 10 ಸ್ಥಾನಗಳಿಗೆ ನಡೆದ ಚುನಾವಣೆ ವೇಳೆ ಎಸ್ಪಿಯ 7 ಶಾಸಕರು ಬಿಜೆಪಿ ಪರ ಅಡ್ಡಮತದಾನ ಮಾಡಿದರು. ಬೆಳಗ್ಗೆ ಎಸ್ಪಿ ನಾಯಕ ಅಖೀಲೇಶ್ ಯಾದವ್ ಅವರು ಕರೆದಿದ್ದ ಸಭೆಗೆ 9 ಶಾಸಕರು ಗೈರಾಗಿದ್ದರು. ಆಗಲೇ “ಅಡ್ಡ ಮತದಾನದ’ ವಾಸನೆ ಬಡಿಯತೊಡಗಿತ್ತು. ಈ ವೇಳೆ ಮಾತನಾಡಿದ್ದ ಅಖೀಲೇಶ್, “ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪಕ್ಷದ ನಿರ್ಧಾರವು ಯಾರು ಪಕ್ಷಕ್ಕೆ ನಿಷ್ಠರಾಗಿದ್ದಾರೆ ಮತ್ತು ಯಾರು ಬಂಡಾಯದ ಬಾವುಟ ಹಾರಿಸುತ್ತಾರೆ ಎಂಬುದರ ಪರೀಕ್ಷೆಯಾಗಿದೆ’ ಎಂದಿದ್ದರು. ಅದರಂತೆಯೇ, ಚುನಾವಣೆ ವೇಳೆ ಸಮಾಜವಾದಿ ಪಕ್ಷದ 7 ಶಾಸಕರು ಬಿಜೆಪಿಯ ಕೈಹಿಡಿದರು.
ಯಾರು ಈ ಪರಿಸ್ಥಿತಿಯಲ್ಲಿ “ಲಾಭ’ ಪಡೆಯಲು ಉದ್ದೇಶಿಸಿದ್ದಾರೋ, ಅವರೆಲ್ಲರೂ ಬಿಟ್ಟು ಹೋಗಲಿ, ಚಿಂತೆಯಿಲ್ಲ ಎಂದು ಅಖೀಲೇಶ್ ಹೇಳಿದರು.
ಮುಖ್ಯ ಸಚೇತಕ ರಾಜೀನಾಮೆ: ವಿಶೇಷವೆಂದರೆ, ಮಂಗಳವಾರ ಬೆಳಗ್ಗೆ ಮುಖ್ಯ ಸಚೇತಕರೂ ಆಗಿದ್ದ ಎಸ್ಪಿ ಶಾಸಕ ಮನೋಜ್ ಕುಮಾರ್ ಪಾಂಡೆಯವರು ರಾಜೀನಾಮೆ ನೀಡಿದರು. “ನೀವು ಸಮಾಜವಾದಿ ಪಕ್ಷದ ಮುಖ್ಯ ಸಚೇತಕರಾಗಿ ನನ್ನನ್ನು ನೇಮಕ ಮಾಡಿದ್ದೀರಿ. ಆಧರೆ, ನಾನು ಈ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ, ದಯವಿಟ್ಟು ನನ್ನ ರಾಜೀನಾಮೆಯನ್ನು ಸ್ವೀಕರಿಸಿ’ ಎಂದು ಅಖೀಲೇಶ್ಗೆ ಪತ್ರ ಬರೆದರು. ಇದರ ಬೆನ್ನಲ್ಲೇ, ಚುನಾವಣೆಯಲ್ಲೂ ಎಸ್ಪಿಗೆ ಆಘಾತ ಎದುರಾಯಿತು.
ಇದನ್ನೂ ಓದಿ: ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನಕ್ಕೆ ಕಬ್ಬಿನ ಲಾರಿ ಡಿಕ್ಕಿ… 13 ಕಾರ್ಮಿಕರಿಗೆ ಗಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rescue;ಅಪಘಾತಕ್ಕೀಡಾಗಿ ಫ್ಲೈಓವರ್ ಪಿಲ್ಲರ್ನಲ್ಲಿ ಸಿಲುಕಿಕೊಂಡ ಮಹಿಳೆ!!
Laddu ವಿವಾದ: ಮುಂದಿನ ಕ್ರಮದ ಬಗ್ಗೆ ಅರ್ಚಕರು, ತಜ್ಞರೊಂದಿಗೆ ಸಮಾಲೋಚನೆ: ಸಿಎಂ ನಾಯ್ಡು
Air Force Chief: ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ
Ayodhya: 8 ಕಾಲುಗಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು
Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.