ಅದು ಚಂದ್ರಯಾನ-3ರ ಬಿಡಿಭಾಗ ಅಲ್ಲ ಎಂದ ಬಾಹ್ಯಾಕಾಶ ತಜ್ಞರು
ಪತ್ತೆಯಾಗಿದ್ದು 20 ವರ್ಷ ಹಳೆ ರಾಕೆಟ್!
Team Udayavani, Jul 19, 2023, 7:50 AM IST
ಹೊಸದಿಲ್ಲಿ: ಪಶ್ಚಿಮ ಆಸ್ಟ್ರೇಲಿಯಾದ ಗ್ರೀನ್ ಹೆಡ್ ನಗರದ ಜೂರಿಯನ್ ಕೊಲ್ಲಿ ತೀರದಲ್ಲಿ ಪತ್ತೆಯಾಗಿರುವ ವಿಚಿತ್ರ ವಸ್ತು ಚಂದ್ರಯಾನ-3ರ ಬಿಡಿಭಾಗವಲ್ಲ. ಬದಲಿಗೆ ಸುಮಾರು 20 ವರ್ಷಗಳ ಹಿಂದೆ ಉಡಾಯಿಸಲಾದ ಭಾರತದ ರಾಕೆಟ್ನ ಭಾಗ ವಾ ಗಿರಬಹುದು ಎಂದು ಬಾಹ್ಯಾಕಾಶ ತಜ್ಞರು ಅಂದಾಜಿಸಿದ್ದಾರೆ.
ಸೋಮವಾರ ಪತ್ತೆಯಾದ ಗೋಳಾಕಾರದ ಈ ವಸ್ತುವು ಬಗೆಯಬಗೆಯ ಚರ್ಚೆಗೆ ಕಾರಣವಾಗಿತ್ತು. ಜು.14ರಂದು ಶ್ರೀಹರಿಕೋಟಾದಲ್ಲಿ ಗಗನಕ್ಕೇರಿದ ಚಂದ್ರಯಾನ-3ನ ಅವಶೇಷಗಳ ತುಣು ಕಿರಬಹುದು ಎಂದು ಕೆಲ ವರು ಊಹಿಸಿದ್ದರು. ಇನ್ನೂ ಕೆಲ ವರು ಅದನ್ನು ಅನ್ಯಗ್ರಹ ಜೀವಿಗಳ ವಾಹನ ಎಂದು ತರ್ಕಿಸಿದ್ದರು.
ಮಂಗಳವಾರ ಈ ಕುರಿತು ಮಾತ ನಾಡಿರುವ ಐರೋಪ್ಯ ಬಾಹ್ಯಾಕಾಶ ಕೇಂದ್ರದ ಎಂಜಿನಿಯರ್ ಆ್ಯಂಡ್ರೂ ಬಾಯ್ಡ “ಈ ವಸ್ತುವಿನ ಆಕಾರ ಮತ್ತು ಗಾತ್ರವನ್ನು ನೋಡಿದರೆ ಇದು ಭಾರತದ ಬಾಹ್ಯಾಕಾಶ ನೌಕೆಯ ಮೇಲ್-ಹಂತದ ಎಂಜಿನ್ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಇದು ಈ ವರ್ಷದ್ದಲ್ಲ. ಸುಮಾರು 20 ವರ್ಷಗಳಷ್ಟು ಹಳೆಯದು. ಬಾಹ್ಯಾಕಾಶ ನೌಕೆಯ ಕಕ್ಷೆ ಎತ್ತರಿಸುತ್ತಾ ಸಾಗುವಾಗ, ಪ್ರಥಮ, ದ್ವಿತೀಯ ಮತ್ತು ತೃತೀಯ ಹಂತದ ಎಂಜಿನ್ಗಳು ಸಾಮಾನ್ಯವಾಗಿ ಹಿಂದೂ ಮಹಾಸಾಗರದಲ್ಲಿ ಬೀಳುತ್ತವೆ. ಸಮುದ್ರದ ಅಲೆಗಳ ಹರಿವಿನೊಂದಿಗೆ ಅದು ಈಗ ತೀರಕ್ಕೆ ಬಂದಿರಬಹುದು’ ಎಂದಿದ್ದಾರೆ. ಇದೇ ವೇಳೆ ಆಸೀಸ್ ಬಾಹ್ಯಾಕಾಶ ಸಂಸ್ಥೆ, “ಅದರ ಹತ್ತಿರ ಹೋಗಬೇಡಿ, ಸಮಸ್ಯೆಯಾಗಬಹುದು’ ಎಂದು ಎಚ್ಚರಿಸಿದೆ.
3ನೇ ಹಂತದ ಪ್ರಕ್ರಿಯೆ ಯಶಸ್ವಿ
ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಕಕ್ಷೆ ಎತ್ತರಿಸುವಂಥ ಮೂರನೇ ಹಂತದ ಪ್ರಕ್ರಿಯೆಯನ್ನು ಮಂಗಳವಾರ ನಡೆಸಲಾಗಿದ್ದು, ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ಇಸ್ರೋ ತಿಳಿಸಿದೆ. ಜು.20(ಗುರುವಾರ)ರಂದು ಮಧ್ಯಾಹ್ನ 2ರಿಂದ 3 ಗಂಟೆಯೊಳಗೆ ಮುಂದಿನ ಹಂತದ ಕಕ್ಷೆ ಎತ್ತರಿಸುವ ಕಾರ್ಯ ನೆರವೇರಿಸಲಿದ್ದೇವೆ ಎಂದೂ ಮಾಹಿತಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Kuloor: ಮೊಯ್ದೀನ್ ಬಾವಾ ಸೋದರ ಮಮ್ತಾಜ್ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ
Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?
Martin: ಇಂದು ಧ್ರುವ ಸರ್ಜಾ ಬರ್ತ್ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್ ಇವೆಂಟ್
New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ
Tender Open: ತುರ್ತು ಸೇವೆಗೆ ಬರಲಿದೆ ಮೂರು ಸೀ ಆ್ಯಂಬುಲೆನ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.