![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Jun 8, 2023, 8:08 AM IST
ಹಂಬಂತೋಟ: ಶ್ರೀಲಂಕಾ-ಅಫ್ಘಾನಿಸ್ತಾನ ನಡುವಿನ 3ನೇ ಹಾಗೂ ಅಂತಿಮ ಏಕದಿನ ಪಂದ್ಯ 38.2 ಓವರ್ಗಳಲ್ಲಿ ಮುಗಿದು ಹೋಗಿದೆ. ಇದನ್ನು ಆತಿಥೇಯ ಲಂಕಾ 9 ವಿಕೆಟ್ಗಳಿಂದ ಗೆದ್ದು 2-1ರಿಂದ ಸರಣಿ ವಶಪಡಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ತಾನ 22.2 ಓವರ್ಗಳಲ್ಲಿ ಕೇವಲ 116ಕ್ಕೆ ಕುಸಿಯಿತು. ಶ್ರೀಲಂಕಾ 16 ಓವರ್ಗಳಲ್ಲಿ ಒಂದೇ ವಿಕೆಟಿಗೆ 120 ರನ್ ಬಾರಿಸಿತು. ಮೊದಲ ಪಂದ್ಯವನ್ನು ಸೋತಿದ್ದ ದಸುನ್ ಶಣಕ ಪಡೆ ಸತತ 2 ಜಯದೊಂದಿಗೆ ಸರಣಿ ಮೇಲೆ ಅಧಿಕಾರ ಚಲಾಯಿಸಿತು.
ದುಷ್ಮಂತ ಚಮೀರ, ವನಿಂದು ಹಸರಂಗ, ಲಹಿರು ಕುಮಾರ ಮತ್ತು ಮಹೀಶ್ ತೀಕ್ಷಣ ಅವರ ಹರಿತವಾದ ಎಸೆತಗಳಿಗೆ ಅಫ್ಘಾನ್ ಬಳಿ ಉತ್ತರವೇ ಇರಲಿಲ್ಲ. ಚಮೀರ 4, ಹಸರಂಗ 3 ಹಾಗೂ ಕುಮಾರ 2 ವಿಕೆಟ್ ಹಾರಿಸಿದರು.
23 ರನ್ ಹೊಡೆದ ಮಾಜಿ ನಾಯಕ ಮೊಹಮ್ಮದ್ ನಬಿ ಅವರದೇ ಅಫ್ಘಾನ್ ಸರದಿಯ ಸರ್ವಾಧಿಕ ಗಳಿಕೆ. ಪ್ರವಾಸಿಗರ ಸರದಿಯ ಏಕೈಕ ಸಿಕ್ಸರ್ ಕೊನೆಯ ಆಟಗಾರ ಫರೀದ್ ಅಹ್ಮದ್ ಅವರಿಂದ ಸಿಡಿಯಿತು.
ಚೇಸಿಂಗ್ ವೇಳೆ ಲಂಕಾ ಆರಂಭಿಕರಿಬ್ಬರಿಂದಲೂ ಅರ್ಧ ಶತಕ ದಾಖಲಾಯಿತು. ಪಥುಮ್ ನಿಸ್ಸಂಕ 51 ಹಾಗೂ ದಿಮುತ್ ಕರುಣಾರತ್ನೆ 56 ರನ್ ಹೊಡೆದರು. ಮೊದಲ ವಿಕೆಟಿಗೆ 10.1 ಓವರ್ಗಳಿಂದ 84 ರನ್ ಒಟ್ಟುಗೂಡಿತು.
ಸಂಕ್ಷಿಪ್ತ ಸ್ಕೋರ್: ಅಫ್ಘಾನಿಸ್ತಾನ-22.2 ಓವರ್ಗಳಲ್ಲಿ 116 (ಮೊಹಮ್ಮದ್ ನಬಿ 23, ಇಬ್ರಾಹಿಂ ಜದ್ರಾನ್ 22, ಗುಲ್ಬದಿನ್ ನೈಬ್ 20, ಚಮೀರ 63ಕ್ಕೆ 4, ಹಸರಂಗ 7ಕ್ಕೆ 3, ಕುಮಾರು 29ಕ್ಕೆ 2, ತೀಕ್ಷಣ 16ಕ್ಕೆ 1). ಶ್ರೀಲಂಕಾ-16 ಓವರ್ಗಳಲ್ಲಿ ಒಂದು ವಿಕೆಟಿಗೆ 120 (ಕರುಣಾರತ್ನೆ ಔಟಾಗದೆ 56, ನಿಸ್ಸಂಕ 51, ಮೆಂಡಿಸ್ ಔಟಾಗದೆ 11, ನೈಬ್ 19ಕ್ಕೆ 1).
ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ದುಷ್ಮಂತ ಚಮೀರ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.