ವಿಷಯ-ವಿಶೇಷ: ಇಲ್ಲಿ ಇಂಗ್ಲಿಷ್‌ ಮಾತನಾಡಿದರೆ ದಂಡ


Team Udayavani, Apr 16, 2023, 7:13 AM IST

no english

ಮಾನವ ಸಂಬಂಧಗಳ ಬೆಳವಣಿ ಗೆಗೆ ಸಂವಹನವೇ ಪ್ರಮುಖ. ಸಂವಹನದಲ್ಲಿ ಮುಖ್ಯ ಪಾತ್ರ ವಹಿಸುವುದು ಭಾಷೆ. ಪ್ರಪಂಚದಲ್ಲಿ ಸಾವಿರಾರು ಭಾಷೆಗಳಿವೆ. ಪ್ರತೀ ದೇಶಕ್ಕೊಂದು ಅಧಿಕೃತ ಭಾಷೆಯಿದೆ. ಆ ದೇಶದ ಸಂಸ್ಕೃತಿ, ಸೊಗಡನ್ನು ಭಾಷೆ ಹೊಂದಿರುತ್ತದೆ. ಇದು ಆಯಾ ದೇಶದ ಭಾಷೆಯ ವಿಚಾರವಾದರೆ, ಪ್ರಪಂಚದಾದ್ಯಂತ ಇಂಗ್ಲಿಷ್‌ ಸಾಮಾನ್ಯ ಸಂವಹನ ಭಾಷೆಯಾಗಿ ಹರಡಿಕೊಂಡಿದೆ. ಬೇರೆ ದೇಶಗಳಿಗೆ ಹೋದಾಗ ಆ ದೇಶದ ಭಾಷೆಗಳ ಅರಿವಿಲ್ಲದಿದ್ದರೂ ಇಂಗ್ಲಿಷ್‌ ವ್ಯಾವಹಾರಿಕ ಭಾಷೆಯಾಗಿ ಬಳಸಲ್ಪಡು ತ್ತದೆ. ಆದರೆ ಕೆಲವೆಡೆ ನೀವು ಇಂಗ್ಲಿಷ್‌ ಮಾತನಾಡುವಂತಿಲ್ಲ…!

ಹೌದು, ನೀವು ಇಟಲಿ ದೇಶದ ಪ್ರಜೆಯಾಗಿದ್ದರೆ ಆ ದೇಶದ ಭಾಷೆಯನ್ನೇ ಬಳಸಬೇಕೆ ಹೊರತು, ಇಂಗ್ಲಿಷ್‌ ಮಾತನಾಡಬಾರದು. ಯಾಕೆ ಎಂದರೆ ಇಟಲಿ ದೇಶ ಇಂಗ್ಲಿಷ್‌ ಭಾಷೆಯನ್ನು ನಿರ್ಬಂಧಿ ಸಿದೆ. ಇಟಲಿಯ ಸರಕಾರ ಅಲ್ಲಿನ ಆಡಳಿತ ಹಾಗೂ ಜನಜೀವನದಲ್ಲಿ ದೇಶದ ಭಾಷೆಯನ್ನೇ ಮಾತನಾಡಬೇಕು ಹೊರತು ಇಂಗ್ಲಿಷ್‌ ಭಾಷೆಯನ್ನು ಬಳಸಬಾರದು ಎಂಬ ನೀತಿಯನ್ನು ಜಾರಿಗೆ ತಂದಿದೆ.

ಇಂಗ್ಲಿಷ್‌ ಬಳಸಿದರೆ ದಂಡ
ಇಂಗ್ಲಿಷ್‌ ಭಾಷೆ ಬಳಕೆಯ ಮೇಲೆ ಇಟಲಿ ಸರಕಾರ ದಂಡವನ್ನು ಹೇರಲು ನಿರ್ಧರಿಸಿದೆ. ಒಂದು ವೇಳೆ ಯಾರಾದರೂ ತಿಳಿದೋ ತಿಳಿಯ ದೆಯೋ ಇಂಗ್ಲಿಷ್‌ ಪದಬಳಕೆ ಮಾಡಿದರೆ 82 ಲಕ್ಷ ರೂ. ದಂಡ ಕಟ್ಟಬೇಕಾಗುತ್ತದೆ. ಆಡಳಿತದಲ್ಲಿರು ವವರು ಇಟಲಿ ಭಾಷೆಯನ್ನು ಓದಲು, ಬರೆ ಯಲು ಕಡ್ಡಾಯವಾಗಿ ತಿಳಿದಿರಬೇಕು. ಜತೆಗೆ ಇಲಾಖೆ, ಖಾತೆಗಳ ಹೆಸರಿನಲ್ಲೂ ಇಟಾಲಿಯನ್‌ ಭಾಷೆಯನ್ನೇ ಬಳಸಬೇಕು ಎಂದು ನೀತಿಯಲ್ಲಿ ಸ್ಪಷ್ಟವಾಗಿ ನಿರ್ದೇಶನ ನೀಡಲಾಗಿದೆ.

ಇತರ ದೇಶಗಳಲ್ಲೂ ಇದೆ ಇಂಗ್ಲಿಷ್‌ಗೆ ನಿರ್ಬಂಧ
ಕೇವಲ ಇಟಲಿ ಮಾತ್ರವಲ್ಲ, 2018ರಲ್ಲಿ ಇರಾನ್‌ ತನ್ನ ಶಾಲೆಗಳಲ್ಲಿ ಇಂಗ್ಲಿಷ್‌ನ್ನು ನಿಷೇಧಿಸಿದೆ. ಚಿಕ್ಕ ವಯಸ್ಸಿನಲ್ಲೇ ಪಾಶ್ಚಾತ್ಯ ಸಂಸ್ಕೃತಿಗೆ ಮಕ್ಕಳು ಮರುಳಾಗುತ್ತಾರೆ ಎಂಬ ಭಯದಿಂದ ಇರಾನ್‌ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್‌ ಭಾಷೆ ಯನ್ನು ಕಲಿಸುವುದಿಲ್ಲ. ಇರಾನ್‌ ಜತೆಗೆ ಚೀನವೂ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್‌ ಕಲಿಸುವುದನ್ನು ವಿರೋಧಿಸಿದೆ. ಅದಲ್ಲದೇ ಚೀನ ವಿದೇಶಿ ಪಠ್ಯ ಪುಸ್ತಕಗಳನ್ನು ದೇಶದಲ್ಲಿ ನಿಷೇಧಿಸಿದೆ. ದೇಶದ ಸಂಸ್ಕೃತಿಯನ್ನು ಕಲಿಯಲು ಇಂಗ್ಲಿಷ್‌ ಕಲಿಕೆ ಅಡ್ಡಿ ಯಾಗುತ್ತದೆ ಎನ್ನುವ ಕಾರಣದಿಂದ ಚೀನ ಈ ನಿರ್ಧಾರವನ್ನು ಕೈಗೊಂಡಿತ್ತು. ಮಕ್ಕಳನ್ನು ಪಾಶ್ಚಾತ್ಯ ಸಂಸ್ಕೃತಿಯಿಂದ ದೂರವಿರಿಸುವ ಮೂಲಕ ಅವರಲ್ಲಿ ದೇಶೀಯತೆಯ ಭಾವವನ್ನು ಉದ್ದೀಪನಗೊಳಿಸುವ ಇರಾದೆ ಇಲ್ಲಿನ ಸರಕಾರಗಳದ್ದಾಗಿದೆ.

ಯಾಕೆ?
ಇಂಗ್ಲಿಷ್‌ ಜತೆಗೆ ಇತರ ವಿದೇಶಿ ಭಾಷೆಗಳ ಮೇಲೂ ಇಟಲಿ ನಿಷೇಧ ಹೇರಿದೆ. ಆದರೆ ಇಂಗ್ಲಿಷ್‌ ಭಾಷೆಯ ಬಳಕೆಯೂ ಇಟಲಿ ದೇಶದ ಭಾಷೆಯ ಬಳಕೆಯ ಮೇಲೆ ಅತಿಯಾದ ಪರಿಣಾಮ ಬೀರುತ್ತಿರುವುದರಿಂದ ಅದನ್ನೇ ಗುರಿಯಾಗಿರಿಸಿಕೊಂಡು ಈ ನೀತಿಯನ್ನು ಜಾರಿಗೊಳಿಸಿದೆ. ಯುರೋಪ್‌ ಒಕ್ಕೂಟದಿಂದ ಯುಕೆ ಹೊರಹೋದ ಅನಂತರ ಈ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು, ಆಂಗ್ಲೋಮೇನಿಯಾದ ಪ್ರಭಾವವನ್ನು ಕಡಿಮೆ ಮಾಡುವುದು ಇಟಲಿಯ ಪ್ರಯತ್ನ. ಆಂಗ್ಲೋಮೇನಿಯಾ ಎಂದರೆ ಆಂಗ್ಲ ಭಾಷೆ ಮತ್ತವರ ಜೀವನ ಕ್ರಮವನ್ನು ಅತಿಯಾಗಿ ಅಳವಡಿಸಿಕೊಳ್ಳುವುದು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.