ವಿಷಯ-ವಿಶೇಷ: ಇಲ್ಲಿ ಇಂಗ್ಲಿಷ್‌ ಮಾತನಾಡಿದರೆ ದಂಡ


Team Udayavani, Apr 16, 2023, 7:13 AM IST

no english

ಮಾನವ ಸಂಬಂಧಗಳ ಬೆಳವಣಿ ಗೆಗೆ ಸಂವಹನವೇ ಪ್ರಮುಖ. ಸಂವಹನದಲ್ಲಿ ಮುಖ್ಯ ಪಾತ್ರ ವಹಿಸುವುದು ಭಾಷೆ. ಪ್ರಪಂಚದಲ್ಲಿ ಸಾವಿರಾರು ಭಾಷೆಗಳಿವೆ. ಪ್ರತೀ ದೇಶಕ್ಕೊಂದು ಅಧಿಕೃತ ಭಾಷೆಯಿದೆ. ಆ ದೇಶದ ಸಂಸ್ಕೃತಿ, ಸೊಗಡನ್ನು ಭಾಷೆ ಹೊಂದಿರುತ್ತದೆ. ಇದು ಆಯಾ ದೇಶದ ಭಾಷೆಯ ವಿಚಾರವಾದರೆ, ಪ್ರಪಂಚದಾದ್ಯಂತ ಇಂಗ್ಲಿಷ್‌ ಸಾಮಾನ್ಯ ಸಂವಹನ ಭಾಷೆಯಾಗಿ ಹರಡಿಕೊಂಡಿದೆ. ಬೇರೆ ದೇಶಗಳಿಗೆ ಹೋದಾಗ ಆ ದೇಶದ ಭಾಷೆಗಳ ಅರಿವಿಲ್ಲದಿದ್ದರೂ ಇಂಗ್ಲಿಷ್‌ ವ್ಯಾವಹಾರಿಕ ಭಾಷೆಯಾಗಿ ಬಳಸಲ್ಪಡು ತ್ತದೆ. ಆದರೆ ಕೆಲವೆಡೆ ನೀವು ಇಂಗ್ಲಿಷ್‌ ಮಾತನಾಡುವಂತಿಲ್ಲ…!

ಹೌದು, ನೀವು ಇಟಲಿ ದೇಶದ ಪ್ರಜೆಯಾಗಿದ್ದರೆ ಆ ದೇಶದ ಭಾಷೆಯನ್ನೇ ಬಳಸಬೇಕೆ ಹೊರತು, ಇಂಗ್ಲಿಷ್‌ ಮಾತನಾಡಬಾರದು. ಯಾಕೆ ಎಂದರೆ ಇಟಲಿ ದೇಶ ಇಂಗ್ಲಿಷ್‌ ಭಾಷೆಯನ್ನು ನಿರ್ಬಂಧಿ ಸಿದೆ. ಇಟಲಿಯ ಸರಕಾರ ಅಲ್ಲಿನ ಆಡಳಿತ ಹಾಗೂ ಜನಜೀವನದಲ್ಲಿ ದೇಶದ ಭಾಷೆಯನ್ನೇ ಮಾತನಾಡಬೇಕು ಹೊರತು ಇಂಗ್ಲಿಷ್‌ ಭಾಷೆಯನ್ನು ಬಳಸಬಾರದು ಎಂಬ ನೀತಿಯನ್ನು ಜಾರಿಗೆ ತಂದಿದೆ.

ಇಂಗ್ಲಿಷ್‌ ಬಳಸಿದರೆ ದಂಡ
ಇಂಗ್ಲಿಷ್‌ ಭಾಷೆ ಬಳಕೆಯ ಮೇಲೆ ಇಟಲಿ ಸರಕಾರ ದಂಡವನ್ನು ಹೇರಲು ನಿರ್ಧರಿಸಿದೆ. ಒಂದು ವೇಳೆ ಯಾರಾದರೂ ತಿಳಿದೋ ತಿಳಿಯ ದೆಯೋ ಇಂಗ್ಲಿಷ್‌ ಪದಬಳಕೆ ಮಾಡಿದರೆ 82 ಲಕ್ಷ ರೂ. ದಂಡ ಕಟ್ಟಬೇಕಾಗುತ್ತದೆ. ಆಡಳಿತದಲ್ಲಿರು ವವರು ಇಟಲಿ ಭಾಷೆಯನ್ನು ಓದಲು, ಬರೆ ಯಲು ಕಡ್ಡಾಯವಾಗಿ ತಿಳಿದಿರಬೇಕು. ಜತೆಗೆ ಇಲಾಖೆ, ಖಾತೆಗಳ ಹೆಸರಿನಲ್ಲೂ ಇಟಾಲಿಯನ್‌ ಭಾಷೆಯನ್ನೇ ಬಳಸಬೇಕು ಎಂದು ನೀತಿಯಲ್ಲಿ ಸ್ಪಷ್ಟವಾಗಿ ನಿರ್ದೇಶನ ನೀಡಲಾಗಿದೆ.

ಇತರ ದೇಶಗಳಲ್ಲೂ ಇದೆ ಇಂಗ್ಲಿಷ್‌ಗೆ ನಿರ್ಬಂಧ
ಕೇವಲ ಇಟಲಿ ಮಾತ್ರವಲ್ಲ, 2018ರಲ್ಲಿ ಇರಾನ್‌ ತನ್ನ ಶಾಲೆಗಳಲ್ಲಿ ಇಂಗ್ಲಿಷ್‌ನ್ನು ನಿಷೇಧಿಸಿದೆ. ಚಿಕ್ಕ ವಯಸ್ಸಿನಲ್ಲೇ ಪಾಶ್ಚಾತ್ಯ ಸಂಸ್ಕೃತಿಗೆ ಮಕ್ಕಳು ಮರುಳಾಗುತ್ತಾರೆ ಎಂಬ ಭಯದಿಂದ ಇರಾನ್‌ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್‌ ಭಾಷೆ ಯನ್ನು ಕಲಿಸುವುದಿಲ್ಲ. ಇರಾನ್‌ ಜತೆಗೆ ಚೀನವೂ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್‌ ಕಲಿಸುವುದನ್ನು ವಿರೋಧಿಸಿದೆ. ಅದಲ್ಲದೇ ಚೀನ ವಿದೇಶಿ ಪಠ್ಯ ಪುಸ್ತಕಗಳನ್ನು ದೇಶದಲ್ಲಿ ನಿಷೇಧಿಸಿದೆ. ದೇಶದ ಸಂಸ್ಕೃತಿಯನ್ನು ಕಲಿಯಲು ಇಂಗ್ಲಿಷ್‌ ಕಲಿಕೆ ಅಡ್ಡಿ ಯಾಗುತ್ತದೆ ಎನ್ನುವ ಕಾರಣದಿಂದ ಚೀನ ಈ ನಿರ್ಧಾರವನ್ನು ಕೈಗೊಂಡಿತ್ತು. ಮಕ್ಕಳನ್ನು ಪಾಶ್ಚಾತ್ಯ ಸಂಸ್ಕೃತಿಯಿಂದ ದೂರವಿರಿಸುವ ಮೂಲಕ ಅವರಲ್ಲಿ ದೇಶೀಯತೆಯ ಭಾವವನ್ನು ಉದ್ದೀಪನಗೊಳಿಸುವ ಇರಾದೆ ಇಲ್ಲಿನ ಸರಕಾರಗಳದ್ದಾಗಿದೆ.

ಯಾಕೆ?
ಇಂಗ್ಲಿಷ್‌ ಜತೆಗೆ ಇತರ ವಿದೇಶಿ ಭಾಷೆಗಳ ಮೇಲೂ ಇಟಲಿ ನಿಷೇಧ ಹೇರಿದೆ. ಆದರೆ ಇಂಗ್ಲಿಷ್‌ ಭಾಷೆಯ ಬಳಕೆಯೂ ಇಟಲಿ ದೇಶದ ಭಾಷೆಯ ಬಳಕೆಯ ಮೇಲೆ ಅತಿಯಾದ ಪರಿಣಾಮ ಬೀರುತ್ತಿರುವುದರಿಂದ ಅದನ್ನೇ ಗುರಿಯಾಗಿರಿಸಿಕೊಂಡು ಈ ನೀತಿಯನ್ನು ಜಾರಿಗೊಳಿಸಿದೆ. ಯುರೋಪ್‌ ಒಕ್ಕೂಟದಿಂದ ಯುಕೆ ಹೊರಹೋದ ಅನಂತರ ಈ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು, ಆಂಗ್ಲೋಮೇನಿಯಾದ ಪ್ರಭಾವವನ್ನು ಕಡಿಮೆ ಮಾಡುವುದು ಇಟಲಿಯ ಪ್ರಯತ್ನ. ಆಂಗ್ಲೋಮೇನಿಯಾ ಎಂದರೆ ಆಂಗ್ಲ ಭಾಷೆ ಮತ್ತವರ ಜೀವನ ಕ್ರಮವನ್ನು ಅತಿಯಾಗಿ ಅಳವಡಿಸಿಕೊಳ್ಳುವುದು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

court

Painting; ಅಶ್ಲೀ*ಲತೆಗೆ ಸರಕಾರದ ವಿವರಣೆ ಏನು?: ಹೈಕೋರ್ಟ್‌ ತರಾಟೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kharge (2)

BJP ಟ್ರಿಪಲ್‌ ಎಂಜಿನ್‌ ಸರಕಾರ ಜನರ ಆಹಾರ ಕಸಿಯುತ್ತಿದೆ: ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತದಲ್ಲೂ ಹಿಜುಬ್‌ ಕರಿನೆರಳು!ಕೇಂದ್ರ ಸರಕಾರದಿಂದ ನಿಷೇಧ

ಭಾರತದಲ್ಲೂ ಹಿಜುಬ್‌ ಕರಿನೆರಳು!ಕೇಂದ್ರ ಸರಕಾರದಿಂದ ನಿಷೇಧ

ನಾಗಪುರದ ಬಾಂಬ್‌ ಬಜಾರ್‌; ಮೂರೇ ತಿಂಗಳಲ್ಲಿ 900 ಕೋಟಿ ರೂ. ಮೌಲ್ಯದ ಸ್ಫೋಟಕ ಮಾರಾಟ

ನಾಗಪುರದ ಬಾಂಬ್‌ ಬಜಾರ್‌; ಮೂರೇ ತಿಂಗಳಲ್ಲಿ 900 ಕೋಟಿ ರೂ. ಮೌಲ್ಯದ ಸ್ಫೋಟಕ ಮಾರಾಟ

Belagavi: ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

ಹೆಜ್ಬುಲ್ಲಾ ಮುಖ್ಯಸ್ಥ ಅಡಗಿದ್ದ ಬಂಕರ್‌ನೊಳಗೆ 500 ಮಿ. ಡಾಲರ್‌ ನಗದು, ಅಪಾರ ಚಿನ್ನ ಪತ್ತೆ! ಇಸ್ರೇಲ್

Hezbollah ಮುಖ್ಯಸ್ಥ ಅಡಗಿದ್ದ ಬಂಕರ್‌ನೊಳಗೆ 500 ಮಿ. ಡಾಲರ್‌ ನಗದು,ಚಿನ್ನ ಪತ್ತೆ! ಇಸ್ರೇಲ್

1-kittut

23 October 1824; ಕಿತ್ತೂರಿನ ಮೊದಲ ವಿಜಯೋತ್ಸವಕ್ಕೆ 200 ವರ್ಷ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

AATISHI (2)

Kejriwal ಮೇಲೆ ಹಲ್ಲೆ: ಆರೋಪ ತಿರಸ್ಕರಿಸಿದ ಬಿಜೆಪಿ

police crime

Dog ಕೊಂ*ದು ಮರಕ್ಕೆ ಕಟ್ಟಿದ ತಾಯಿ-ಮಗನ ಮೇಲೆ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.