Supreme court: ಅಸ್ಸಾಂ ವಲಸಿಗರ ಪೌರತ್ವ ಕಾಯ್ದೆ 6ಎ ಸಿಂಧು: ಸುಪ್ರೀಂಕೋರ್ಟ್

ಜಸ್ಟೀಸ್‌ ಪರ್ಡಿವಾಲಾ ಅವರು ಭಿನ್ನ ತೀರ್ಪು ನೀಡಿರುವುದಾಗಿ ವರದಿ ತಿಳಿಸಿದೆ.

Team Udayavani, Oct 17, 2024, 1:43 PM IST

Supreme court: ಅಸ್ಸಾಂ ವಲಸಿಗರ ಪೌರತ್ವ ಕಾಯ್ದೆ 6ಎ ಸಿಂಧು: ಸುಪ್ರೀಂಕೋರ್ಟ್

ನವದೆಹಲಿ: ಅಸ್ಸಾಂ ಒಪ್ಪಂದದ ಪ್ರಕಾರ 1955ರ ಪೌರತ್ವ ಕಾಯ್ದೆ 6ಎ ಅನ್ವಯ ವಲಸಿಗರಿಗೆ ಪೌರತ್ವ ನೀಡುವ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂಕೋರ್ಟ್‌ (Supreme court) ಸಾಂವಿಧಾನಿಕ ಪೀಠ ಗುರುವಾರ (ಅ.17) ಎತ್ತಿಹಿಡಿದಿದೆ.

1966ರ ಜನವರಿ 1ರಿಂದ 1971ರ ಮಾರ್ಚ್‌ 25ರ ನಡುವೆ ಅಸ್ಸಾಂ ಪ್ರವೇಶಿಸಿದ್ದ ವಲಸಿಗರಿಗೆ ಪೌರತ್ವ ನೀಡುವ 1955ರ ಪೌರತ್ವ ಕಾಯ್ದೆ 6ಎ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂಕೋರ್ಟ್‌ ಪೀಠ 4:1ರ ಅನುಪಾತದಲ್ಲಿ ಎತ್ತಿಹಿಡಿದಿದೆ.

ಸುಪ್ರೀಂಕೋರ್ಟ್‌ ಸಿಜೆಐ ಡಿ.ವೈ.ಚಂದ್ರಚೂಡ್‌ ಮತ್ತು ಇತರ ಮೂವರು ಜಡ್ಜ್‌ ಗಳು ಪೌರತ್ವ ಕಾಯ್ದೆಯ ಸಿಂಧುತ್ವ ಎತ್ತಿಹಿಡಿದಿದ್ದು, ಜಸ್ಟೀಸ್‌ ಪರ್ಡಿವಾಲಾ ಅವರು ಭಿನ್ನ ತೀರ್ಪು ನೀಡಿರುವುದಾಗಿ ವರದಿ ತಿಳಿಸಿದೆ.

“ಸ್ವತಂತ್ರ ಬಾಂಗ್ಲಾದೇಶ ರಚನೆಯ ನಂತರ ಅಕ್ರಮ ವಲಸಿಗರ ಸಮಸ್ಯೆಗೆ ಅಸ್ಸಾಂ ಒಪ್ಪಂದವು ರಾಜಕೀಯ ಪರಿಹಾರವಾಗಿದೆ. ಅದೇ ರೀತಿ ಸೆಕ್ಷನ್‌ 6ಎ ಶಾಸಕಾಂಗ ಪರಿಹಾರವಾಗಿದೆ ಎಂದು” ಸಿಜೆಐ ಚಂದ್ರಚೂಡ್‌ ಅವರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

1971ರ ಮಾರ್ಚ್‌ 25ರ Cut Off ದಿನಾಂಕವು ತರ್ಕಬದ್ಧವಾಗಿದೆ. ಯಾಕೆಂದರೆ ಬಾಂಗ್ಲಾದೇಶ ವಿಮೋಚನಾ ಯುದ್ಧ ಕೊನೆಗೊಂಡ ದಿನಾಂಕವಾಗಿದೆ ಎಂದು ಬಹುಮತದ ತೀರ್ಪು ನೀಡಿದೆ.

1966ರ ಜನವರಿ 1ಕ್ಕಿಂತ ಮೊದಲು ಅಸ್ಸಾಂ ರಾಜ್ಯ ಪ್ರವೇಶಿಸಿದ್ದ ವಲಸಿಗರನ್ನು ಭಾರತೀಯ ಪ್ರಜೆಗಳೆಂದು ಪರಿಗಣಿಸಲಾಗುತ್ತದೆ. ಆದರೆ 1966ರ ಜನವರಿ 1ರಿಂದ 1971ರ ಮಾರ್ಚ್‌ 25ರ ನಡುವೆ ಅಸ್ಸಾಂ ಪ್ರವೇಶಿಸಿದ್ದ ವಲಸಿಗರು ಅರ್ಹತೆಯ ಆಧಾರದ ಮೇಲೆ ಭಾರತೀಯ ಪೌರತ್ವ ಪಡೆಯಲು ಅರ್ಹರಾಗಿರುತ್ತಾರೆ ಎಂದು ಜಸ್ಟೀಸ್‌ ಕಾಂತ್‌ ತೀರ್ಪಿನಲ್ಲಿ ತಿಳಿಸಿದ್ದಾರೆ.

1971ರ ಮಾರ್ಚ್‌ 25ರ ನಂತರ ಅಸ್ಸಾಂ ಪ್ರವೇಶಿಸಿದ್ದ ವಲಸಿಗರನ್ನು ಪತ್ತೆಹಚ್ಚಿ ವಶಕ್ಕೆ ಪಡೆದು, ಗಡಿಪಾರು ಮಾಡಲು ಹೊಣೆಗಾರರಾಗಿರುತ್ತಾರೆ ಎಂದು ಸುಪ್ರೀಂ ಪೀಠ ಸ್ಪಷ್ಟಪಡಿಸಿದೆ.

ಜಸ್ಟೀಸ್‌ ಪರ್ಡಿವಾಲಾ ಭಿನ್ನ ತೀರ್ಪು:

1955ರ ಪೌರತ್ವ ಕಾಯ್ದೆಯ ಸೆಕ್ಷನ್‌ 6ಎ ಸಂವಿಧಾನಬಾಹಿರವಾಗಿದೆ. ಸೆಕ್ಷನ್‌ 6ಎ ದೀರ್ಘ ಸಮಯಾವಕಾಶದೊಂದಿಗೆ ಅಸಾಂವಿಧಾನಿಕತೆ ಹೊಂದಿದೆ ಎಂದು ಜಸ್ಟೀಸ್‌ ಪರ್ಡಿವಾಲಾ ಭಿನ್ನ ತೀರ್ಪು ನೀಡಿದ್ದಾರೆ.

1971ರ ಮೊದಲು ಅಸ್ಸಾಂ ಪ್ರವೇಶಿಸಿದ್ದ ಯಾವ ವಲಸಿಗರಿಗೂ ಶಾಸಕಾಂಗವು ಸರಳವಾಗಿ ಪೌರತ್ವ ನೀಡಬಹುದಾಗಿತ್ತು. 1966ರಿಂದ 1971ರವರೆಗೆ ಎಂದು ಶಾಸನಬದ್ಧ ವರ್ಗ ರಚಿಸಿರುವುದು ರಾಜ್ಯದಲ್ಲಿನ ಮುಂಬರುವ ಚುನಾವಣೆ ಮೇಲಿನ ದೃಷ್ಟಿಕೋನದಿಂದ ಕೂಡಿರುವುದಾಗಿ ಜಸ್ಟೀಸ್‌ ಪರ್ಡಿವಾಲಾ ತೀರ್ಪಿನಲ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

11

Somy Ali: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ನಂಬರ್‌ ಕೇಳಿದ ಸಲ್ಮಾನ್‌ ಖಾನ್ ಮಾಜಿ ಗೆಳತಿ

Kalaburagi; ಕಾರು-ಬೈಕ್-ಲಾರಿ ನಡುವೆ ಡಿಕ್ಕಿ: ನಾಲ್ವರ ಸಾವು

Kalaburagi; ಕಾರು-ಬೈಕ್-ಲಾರಿ ನಡುವೆ ಡಿಕ್ಕಿ: ನಾಲ್ವರ ಸಾವು

7–ullala

Ullala: ಇನ್ಸ್‌ಪೆಕ್ಟರ್ ಕೊಠಡಿಯೊಳಗೆಯೇ ಹಿಂದೂ ಸಂಘಟನೆ ಮುಖಂಡನಿಗೆ ಮುಸ್ಲಿಂ ಯುವಕ ಹಲ್ಲೆ

Tollywood: ʼಬಾಹುಬಲಿʼ ಮೂರನೇ ಪಾರ್ಟ್‌ ಬರುತ್ತಾ?; ಖ್ಯಾತ ನಿರ್ಮಾಪಕ ಹೇಳಿದ್ದೇನು?

Tollywood: ʼಬಾಹುಬಲಿʼ ಮೂರನೇ ಪಾರ್ಟ್‌ ಬರುತ್ತಾ?; ಖ್ಯಾತ ನಿರ್ಮಾಪಕ ಹೇಳಿದ್ದೇನು?

B Nagendra reacts to Janardhana Reddy’s statement

Bellary: ರೆಡ್ಡಿ ಸಂಡೂರಲ್ಲಿ ಅರಮನೆ ಕಟ್ಟಿದರೂ ಗೆಲುವು ಕಾಂಗ್ರೆಸ್ ಪಕ್ಷದ್ದೇ: ನಾಗೇಂದ್ರ

6-katapady

Katapady: ಟ್ಯಾಂಕರ್‌, ಕಾರು, ದ್ವಿಚಕ್ರ ವಾಹನಗಳ ನಡುವೆ ಸರಣಿ ಅಪಘಾತ

Haryana: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಯಾಬ್ ಸಿಂಗ್ ಸೈನಿ… ಪ್ರಧಾನಿ ಭಾಗಿ

Haryana: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಯಾಬ್ ಸಿಂಗ್ ಸೈನಿ… ಪ್ರಧಾನಿ ಭಾಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Haryana: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಯಾಬ್ ಸಿಂಗ್ ಸೈನಿ… ಪ್ರಧಾನಿ ಭಾಗಿ

Haryana: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಯಾಬ್ ಸಿಂಗ್ ಸೈನಿ… ಪ್ರಧಾನಿ ಭಾಗಿ

ಪಾಕ್ ಪರ ಘೋಷಣೆ: ಆರೋಪಿಗೆ ಭಾರತ್ ಮಾತಾ ಕೀ ಜೈ ಎಂದು ರಾಷ್ಟ್ರಧ್ವಜಕ್ಕೆ ಸುತ್ತು ಬರುವ ಶಿಕ್ಷೆ

ಪಾಕ್ ಪರ ಘೋಷಣೆ: ಆರೋಪಿಗೆ ಭಾರತ್ ಮಾತಾ ಕೀ ಜೈ ಎಂದು ರಾಷ್ಟ್ರಧ್ವಜಕ್ಕೆ ನಮಸ್ಕರಿಸುವ ಶಿಕ್ಷೆ

Punjab: ಶಿವಸೇನಾ ಮುಖಂಡನ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ…

Punjab: ಶಿವಸೇನಾ ಮುಖಂಡನ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ…

Supreme Court ಮುಂದಿನ ಮುಖ್ಯ ನ್ಯಾಯಾಧೀಶರಾಗಿ ನ್ಯಾ. ಸಂಜೀವ್ ಖನ್ನಾ ಹೆಸರು ಶಿಫಾರಸು

Supreme Court ಮುಂದಿನ ಸಿಜೆಐ ನ್ಯಾ. ಸಂಜೀವ್ ಖನ್ನಾ ಹೆಸರು ಶಿಫಾರಸು

Tragedy: ಕಾರು ಪಲ್ಟಿಯಾಗಿ ಮಕ್ಕಳು ಸೇರಿದಂತೆ ಒಂದೇ ಕುಟುಂಬದ 7 ಮಂದಿ ಮೃತ್ಯು, ಸಿಎಂ ಸಂತಾಪ

Tragedy: ಕಾರು ಪಲ್ಟಿಯಾಗಿ ಮಕ್ಕಳು ಸೇರಿದಂತೆ ಒಂದೇ ಕುಟುಂಬದ 7 ಮಂದಿ ಮೃತ್ಯು, ಸಿಎಂ ಸಂತಾಪ

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

10

Lalbagh: ಪಾಲಿಕೆ ಚುನಾವಣೆ ಸನ್ನಿಹಿತ; ಮೀಸಲಾತಿಯದೇ ಆತಂಕ!

Arjun Sarja announces new film Seetha Payana

Seetha Payana: ಅರ್ಜುನ್‌ ಸರ್ಜಾ ನಿರ್ದೇಶನದಲ್ಲಿ ʼಸೀತಾ ಪಯಣʼ; ನಿರಂಜನ್‌ ಹೀರೋ

9

Karkala: ಶಿರ್ಲಾಲು ಕಾಡಿನಲ್ಲಿದೆ ಪ್ರಾಚೀನ ಹೆರಿಗೆ ಕಲ್ಲು!

11

Somy Ali: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ನಂಬರ್‌ ಕೇಳಿದ ಸಲ್ಮಾನ್‌ ಖಾನ್ ಮಾಜಿ ಗೆಳತಿ

Contempt case: ಬಸನಗೌಡ ಯತ್ನಾಳ್‌ ವಿರುದ್ಧ ಜಾಮೀನು ರಹಿತ ವಾರಂಟ್‌

Contempt case: ಬಸನಗೌಡ ಯತ್ನಾಳ್‌ ವಿರುದ್ಧ ಜಾಮೀನು ರಹಿತ ವಾರಂಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.