ಸುರತ್ಕಲ್‌ ಮಾರುಕಟ್ಟೆ ಕೆಲಸ ಅರ್ಧಕ್ಕೆ ಸ್ಥಗಿತ : ಕೋವಿಡ್ ಗ್ರಹಣ ಇದಕ್ಕಿನ್ನೂ ಬಿಡಲೇ ಇಲ್ಲ!


Team Udayavani, Apr 22, 2021, 6:10 AM IST

ಸುರತ್ಕಲ್‌ ಮಾರುಕಟ್ಟೆ ಕೆಲಸ ಅರ್ಧಕ್ಕೆ ಸ್ಥಗಿತ : ಕೋವಿಡ್ ಗ್ರಹಣ ಇದಕ್ಕಿನ್ನೂ ಬಿಡಲೇ ಇಲ್ಲ!

ಸುರತ್ಕಲ್‌: ರಾಜ್ಯದಲ್ಲಿಯೇ ಸರಕಾರಿ ಸ್ವಾಮ್ಯದ ದೊಡ್ಡ ಮಾರ್ಕೆಟ್‌ ಎಂದು ಹೆಗ್ಗಳಿಕೆ ಪಾತ್ರವಾಗಿದ್ದು ಸುರತ್ಕಲ್‌ ಮಾರುಕಟ್ಟೆ. ಆದರೆ ಕೊರೊನಾ ಹೊಡೆತದಿಂದ ಇನ್ನೂ ಹೊರಗೆ ಬಂದಿಲ್ಲ.

ಕಾಮಗಾರಿ ಎಷ್ಟರಮಟ್ಟಿಗೆ ಮುಗಿದಿದೆ ಎಂದು ಕೇಳಿದರೆ ಸಿಗುವ ಉತ್ತರ “ಪ್ರಗತಿಯಲ್ಲಿದೆ!’. ಎರಡು ವರ್ಷಗಳ ಹಿಂದೆ ಕಾಮಗಾರಿ ಆರಂಭವಾಗಿತ್ತಾದರೂ ಕಳೆದ ಕೊರೊನಾ ಸಂದರ್ಭದಲ್ಲಿ ಸ್ಥಗಿತಗೊಂಡಿತ್ತು. ಇನ್ನೂ ಪೂರ್ಣಗೊಳ್ಳಲಿಕ್ಕೆ ಒಂದೂವರೆ ವರ್ಷ ಹಿಡಿಯಬಹುದು.

ಪ್ರಥಮ ಹಂತದಲ್ಲಿ ನಾಲ್ಕು ಅಂತಸ್ತುಗಳ ಈ ಮಾರ್ಕೆಟ್‌ಗೆ ಮಂಗಳೂರು ಮಹಾನಗರ ಪಾಲಿಕೆ 10 ಕೋಟಿ ರೂ.ಹಾಗೂ ರಾಜ್ಯ ಸರಕಾರ 51 ಕೋಟಿ ರೂ. ಬಿಡುಗಡೆ ಮಾಡಿದೆ. ಮಾರುಕಟ್ಟೆಯ ಸ್ಲಾಬ್, ಗೋಡೆ ಬಹುತೇಕ ಪೂರ್ಣಗೊಂಡಿವೆ. ಕಾಮಗಾರಿ ವೇಗವಾಗಿ ನಡೆಯುತ್ತಿದ್ದಾಗಲೇ ಕೊರೊನಾದಿಂದ ಲಾಕ್‌ಡೌನ್‌ ಮಾಡುವ ಸಂದರ್ಭ ಕಾರ್ಮಿಕರು ಊರಿಗೆ ಮರಳಿದ್ದರು. ಬಳಿಕ ಕಾಮಗಾರಿ ಕುಂಟುತ್ತಾ ಸಾಗಿತು. ಈಗ ಕಾಮಗಾರಿಗೆ ಬೇಕಾದ ಸರಕುಗಳ ಬೆಲೆ ಏರಿದ್ದರಿಂದ 61 ಕೋ.ರೂ. ಬದಲಿಗೆ 76 ಕೋಟಿ ರೂ.ಗಳ ಅಗತ್ಯವಿದೆ ಎಂದು ಗುತ್ತಿಗೆದಾರರು ಸರಕಾರಕ್ಕೆ ಮನವಿ ಮಾಡಿದ್ದು, ಪಾಲಿಕೆ ಹೊಸ ಪ್ರಸ್ತಾವನೆ ಕಳಿಸಲು ಸಿದ್ಧತೆ ಮಾಡಿದೆ. ಹೀಗಾಗಿ ಕೊರೊನಾ ಹೊಡೆತದಿಂದ ಅಂದಾಜು ಮೊತ್ತ 15 ಕೋಟಿ ರೂ. ಹೆಚ್ಚಾಗಿದೆ. ಈಗಿನ ಸಂಕಷ್ಟದ ಸಮಯದಲ್ಲಿ ಹೆಚ್ಚುವರಿ ಮೊತ್ತ ಸಿಗುತ್ತದೆಯೇ ಎಂಬುದಿನ್ನೂ ಸ್ಪಷ್ಟವಾಗಿಲ್ಲ.

ಮಾರುಕಟ್ಟೆಯ ಇನ್ನೊಂದು ಭಾಗದಲ್ಲಿ ರೈತ ಕೇಂದ್ರ, ಹಳೆಯ ಮುಡಾ ಮಾರ್ಕೆಟ್‌ ಕೆಡವಲಾಗುತ್ತಿದ್ದು, ಇಲ್ಲಿನ ವ್ಯಾಪಾರಿಗಳಿಗೆ ತಾತ್ಕಾಲಿಕ ವ್ಯವಸ್ಥೆಯನ್ನು ಕಾಮಗಾರಿ ನಡೆಯುತ್ತಿರುವ ಪ್ರಾಂಗಣದಲ್ಲೇ ನಿರ್ಮಿಸಲಾಗುತ್ತಿದೆ. ಹೊಸ ಕಟ್ಟಡದಲ್ಲಿ ಅಂದಾಜು ಐದು ನೂರು ಮಳಿಗೆಗಳು ತಲೆ ಎತ್ತಲಿವೆ. ತರಕಾರಿ, ಮೀನು, ಹೊಟೇಲ್‌, ಕಿರಾಣಿ ಅಂಗಡಿಗಳು, ಬಸ್‌ ನಿಲ್ದಾಣವೂ ಇರಲಿದೆ.

ಈಜುಕೊಳ
ಸುರತ್ಕಲ್‌ನ ಎತ್ತರದ ಪ್ರದೇಶದಿಂದ ನೇರವಾಗಿ ನೀರು ಇಲ್ಲಿನ ಮಾರ್ಕೆಟ್‌ ತಳ ಅಂತಸ್ತಿಗೆ ಬಂದು ಸೇರು ತ್ತಿದ್ದು, ಸುಮಾರು ಎಂಟು ಅಡಿಗಳಷ್ಟು ನೀರು ಕಳೆದ ಮಳೆಗಾಲದಲ್ಲಿ ನಿಂತಿತ್ತು. ಇದನ್ನು ಖಾಲಿ ಮಾಡಲೇ ಮಹಾನಗರ ಪಾಲಿಕೆ ಲಕ್ಷಾಂತರ ರೂ. ವ್ಯಯಿಸಬೇಕಾದ ಕಾರಣ ಸುಮ್ಮನಾಯಿತು. ಸುರತ್ಕಲ್‌ನ ವಿವಿಧ ಪ್ರದೇಶಗಳ ಚರಂಡಿ ನೀರು ಕೂಡ ಮಳೆಗಾಲದಲ್ಲಿ ಒಟ್ಟಿಗೆ ಸಾಗುತ್ತಿದ್ದ ಕಾರಣ ಮಾರ್ಕೆಟ್‌ ಸುತ್ತಮುತ್ತ ಸ್ವತ್ಛತೆಯ ಸಮಸ್ಯೆ ಎದು ರಾಗಿತ್ತು. ಈಗಿನ ತಾತ್ಕಾಲಿಕ ಮಾರ್ಕೆಟ್‌, ಮುಡಾ ಮಾರ್ಕೆಟ್‌ ಸಹಿತ ವಿವಿಧೆಡೆ ಅಲೆಮಾರಿ ಕುಟುಂಬಗಳು ಬೀಡು ಬಿಟ್ಟಿದ್ದು, ಸ್ವಲ್ಪ ಹೆಚ್ಚು ಕಡಿಮೆಯಾದರೂ ಈ ಮಳೆಗಾಲದಲ್ಲಿ ಪ್ರಾಣಕ್ಕೆ ಕಂಟಕ ಬರುವ ಅಪಾಯ ವಿದೆ. ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಮಲೇ ರಿಯಾ ಹೆಚ್ಚಳ ಅಂಕಿ ಅಂಶಗಳಿಂದ ಸಾಬೀತಾಗಿದೆ.

ಅತ್ಯಾಧುನಿಕ ಕಾಂಪ್ಲೆಕ್ಸ್‌ ಮಾದರಿ ಮಾರ್ಕೆಟ್‌
ಸುರತ್ಕಲ್‌ನ ಈ ಮಾರ್ಕೆಟ್‌ ಜಿಲ್ಲೆ ಮಾತ್ರವಲ್ಲ ರಾಜ್ಯದಲ್ಲಿಯೇ ಸರಕಾರಿ ಸ್ವಾಮ್ಯದ ದೊಡ್ಡ ಮಾರ್ಕೆಟ್‌ ಆಗಿದೆ. 200ರಿಂದ 250 ಚದರ ಅಡಿ ಅಂಗಡಿಗಳು ಜತೆಗೆ ಹೊಟೇಲ್‌ಗ‌ಳು, ಫ್ಯಾನ್ಸಿ, ಪ್ಲಾಸ್ಟಿಕ್‌ ವಸ್ತುಗಳ ಮಾರಾಟ ಮಳಿಗೆ ಹೀಗೆ ಎಲ್ಲದಕ್ಕೂ ಅನುವು ಮಾಡಿಕೊಡುವ ಯೋಜನೆ ಇದರಲ್ಲಿದೆ. ಅತ್ಯಾಧುನಿಕ ಫ್ಲೋರಿಂಗ್‌, ಆಕರ್ಷಕ ವಿನ್ಯಾಸ ಹೊಂದಿರಲಿದೆ. ತಾತ್ಕಾಲಿಕ ಮಾರುಕಟ್ಟೆಯಲ್ಲಿ ಇದೀಗ 250ಕ್ಕೂ ಮಿಕ್ಕಿ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಿದ್ದು, 70 ಕ್ಕೂ ಅಧಿ ಕ ತರಕಾರಿ,ಹಣ್ಣ ಹಂಪಲು, ವ್ಯಾಪಾರಿಗಳಿದ್ದಾರೆ. ಮೀನು, ಮಾಂಸ ಮಾರಾಟಕ್ಕೂ ಅವಕಾಶ ಇರಲಿದೆ. ಪಾರ್ಕಿಂಗ್‌ ಆದ್ಯತೆ ನೀಡಲಾಗಿದ್ದು ಕಾರು, ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

2 ವರ್ಷ ಬದಲು 4 ವರ್ಷ?
ಮಾರುಕಟ್ಟೆಯನ್ನು 2018ರಲ್ಲಿ ತೆರವು ಮಾಡುವ ಸಂದರ್ಭ ಅಂದಾಜು 2 ವರ್ಷಗಳಲ್ಲಿ ಪೂರ್ಣಗೊಳಿ ಸುವ ಭರವಸೆ ನೀಡಲಾಗಿತ್ತು. 2019ರ ವರೆಗೆ ಎಣಿಸಿದಂತೆಯೆ ಕಾಮಗಾರಿ ವೇಗವಾಗಿ ನಡೆದರೂ ಕೊರೊನಾ ಸಂಕಷ್ಟ ಎದುರಾಯಿತು. ಇದೀಗ ತಾತ್ಕಾಲಿಕ ಮಾರುಕಟ್ಟೆಯ ಸಣ್ಣ ಗೂಡಿನಂತಹ ಅಂಗಡಿಗಳಲ್ಲಿದ್ದು, ಜಾಗ ಸಾಕಾಗದೆ ಜನರು ನಡೆದಾಡುವ ದಾರಿಯಲ್ಲೂ ವಹಿವಾಟು ವಿಸ್ತರಿಸಲಾಗಿದೆ.

- ಲಕ್ಷ್ಮೀನಾರಾಯಣ ರಾವ್‌

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Dinesh-Gundurao

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.