![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Dec 12, 2021, 2:51 PM IST
ಕೋಲ್ಕತಾ: ಆರ್ ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರ ಕಿರಿಯ ಪುತ್ರ ತೇಜಸ್ವಿ ಅವರು ತರಾತುರಿಯಲ್ಲಿ ಮದುವೆ ಮಾಡಿಕೊಂಡಿದ್ದು, ಆಹ್ವಾನ ನೀಡಲಿಲ್ಲವೆಂದು ಅನೇಕ ಹತ್ತಿರದ ಸಂಬಂಧಿಕರು ಮತ್ತು ಆತ್ಮೀಯರು ಮುನಿಸಿಕೊಂಡಿದ್ದಾರೆ.
ಲಾಲು ಪ್ರಸಾದ್ ಅವರ ಪತ್ನಿ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿಯ ಪ್ರೀತಿಯ ಕಿರಿಯ ಸಹೋದರ ಸಾಧು ಯಾದವ್ ಅವರು ತಮ್ಮ ಸೋದರಳಿಯ ತೇಜಸ್ವಿ ಯಾದವ್ ಕ್ರಿಶ್ಚಿಯನ್ ಹುಡುಗಿಯನ್ನು ಮದುವೆಯಾಗಿರುವುದನ್ನು ವಿರೋಧಿಸಿದ್ದಾರೆ.
ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ರಾಜ್ಯ ವಕ್ತಾರ ನಿಖಿಲ್ ಆನಂದ್ ಅವರು ಟ್ವೀಟ್ ಮೂಲಕ, ”ತೇಜಸ್ವಿ ಅವರು ಇನ್ನಷ್ಟು ಧೈರ್ಯ ತೋರಿ ಅವರು ಪ್ರೀತಿಸಿದ ಹುಡುಗಿಯ ಧರ್ಮವನ್ನು ಬದಲಾಯಿಸಿ ಮದುವೆಯಾಗಬೇಕಿತ್ತು ಎಂದು ಹೇಳಿದ್ದಾರೆ. ತೇಜಸ್ವಿ ಅವರ ಪತ್ನಿ ರೇಚೆಲ್ ಐರಿಸ್ ಮದುವೆಗೂ ಮುನ್ನ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಪ್ರಸಾದ್ ಕುಟುಂಬದ ಯಾರೂ ಹೇಳಿಲ್ಲ” ಎಂದು ಬರೆದಿದ್ದಾರೆ.
32 ರ ಹರೆಯದ ತೇಜಸ್ವಿ ಪ್ರಸಾದ್ ಬಿಹಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ, ದೇಶದ ಅತ್ಯಂತ ಕಿರಿಯ ವಿರೋಧ ಪಕ್ಷದ ನಾಯಕರಾಗಿದ್ದಾರೆ.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.