3 ನೇ ಅಲೆ ಎರಡೇ ದಿನಕ್ಕೆ ಡಬಲ್ ಆಗುತ್ತಿದೆ : ಡಾ. ಸುಧಾಕರ್ ಎಚ್ಚರಿಕೆ


Team Udayavani, Jan 13, 2022, 2:29 PM IST

1-ddsa

ಬೆಂಗಳೂರು : ಕೋವಿಡ್ ಮೊದಲನೆ ಅಲೆಯಲ್ಲಿ ಡಬ್ಲಿಂಗ್ ರೇಟ್ 10-12 ದಿನಕ್ಕೆ ಆಗುತ್ತಿತ್ತು, ಎರಡನೇ ಅಲೆಯಲ್ಲಿ 8 ದಿನಕ್ಕೆ ಆದರೆ 3 ನೇ ಅಲೆಯಲ್ಲಿ ಎರಡು ದಿನದಲ್ಲಿ ಡಬಲ್ ಆಗುತ್ತಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಗುರುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಮಿಕ್ರಾನ್ ಬಂದ ಮೇಲೆ, 3 ನೇ ಅಲೆ ಬಂದ ಮೇಲೆ ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮಗಳು ಹಾಗು ರಾಜ್ಯದ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದರು.

ಡಿಸೆಂಬರ್ 3 ನೇ ವಾರದವರೆಗೂ ಕೊವಿಡ್ ಪ್ರಕರಣ.ಕಡಿಮೆ.ಇದ್ದವು. ಪಾಸಿಟಿವಿಟಿ ಜನವರಿ 11 ಕ್ಕೆ 10.03 % ಬಂದಿದೆ. 28 ಡಿಸೆಂಬರ್ 269 ಪ್ರಕರಣಗಳು ಬೆಂಗಳೂರಿನಲ್ಲಿದ್ದವು ಉಳಿದ ಭಾಗದಲ್ಲಿ 87 ಪ್ರಕರಣ ಇದ್ದವು. ಜನವರಿ 5. ಕ್ಕೆ ಬೆಂಗಳೂರಿನಲ್ಲಿ 3006 ಕರ್ನಾಟಕದಲ್ಲಿ 501 ಪ್ರಕರಣ ಆಗಿದೆ. ಜನವರಿ 11 ಕ್ಕೆ ಬೆಂಗಳೂರಿನಲ್ಲಿ 10800 ಆದರೆ ರಾಜ್ಯದ ಇತರ ಭಾಗದಲ್ಲಿ 3673 ಪ್ರಕರಣಗಳು ಪತ್ತೆಯಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 32.6% ರಷ್ಟು ವೇಗವಾಗಿದೆ. ರಾಜ್ಯದಲ್ಲಿ 36.44 % ರಷ್ಟಾಗಿದೆ ಎಂದರು.

ಡಿಸೆಂಬರ್ 28 ರಿಂದ ಜನವರಿ 11 ರ ವರೆಗೆ ವೇಗವಾಗಿ ಹೆಚ್ಚಳವಾಗಿದೆ. ಸಕ್ರೀಯ ಪ್ರಕರಣಗಳು ಶೇ 75% ರಷ್ಟು ಬೆಂಗಳೂರಿನಲ್ಲಿದೆ. ಬಹಳ ವೇಗವಾಗಿ ಹರಡುವ ರೋಗ ಎಂದು ಡಬ್ಲೂ ಎಚ್ ಒ ಹೇಳಿದೆ. ಇದು ನೆಗಡಿ,ಕೆಮ್ಮು,ಜ್ವರ ಲಕ್ಷಣಗಳು ಆದರೆ ಇದು ಲಸಿಕೆ ಪಡೆಯದವರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿದೆ ಎಂದರು.

45 ಲಕ್ಷ ಜನರು ಇನ್ನು ಎರಡನೇ.ಡೋಸ್ ತೆಗೆದುಕೊಳ್ಳುವ ಅವಧಿ ಮುಗಿದಿದೆ. ಹೀಗಾಗಿ ಆದಷ್ಟು ಬೇಗ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ 32. ಲಕ್ಷ 15-18 ವರ್ಷದ ಮಕ್ಕಳಲ್ಲಿ ಶೇ 53 ರಷ್ಟು ಮಕ್ಕಳಿಗೆ ನೀಡಲಾಗಿದೆ. ಒಂದು ತಿಂಗಳಲ್ಲಿ ಎರಡನೇ ಡೋಸ್ ಕೊಡಲಾಗುವುದು. 15 ವರ್ಷದ ಒಳಗಿನ ಮಕ್ಕಳಿಗೂ ಸೋಂಕಿನ ಲಕ್ಷಣ ಬರುತ್ತದೆ. ಅವರೂ ಎಚ್ಚರಿಕೆಯಿಂದ ಇರಬೇಕು ಎಂದರು.

2 ನೇ ಡೋಸ್ ಪಡೆದ ಕೊರೊನಾ ವಾರಿಯರ್ಸ್ ಗಳಿಗೆ 3 ನೇ ಡೋಸ್ ಕೊಡಲು ಆರಂಭಿಸಲಾಗಿದೆ. ಸುಮಾರು 65 ಲಕ್ಷ ಡೋಸ್ ಲಸಿಕೆ ಇದೆ. ಹೀಗಾಗಿ ಕೊರೊನಾ ವಾರಿಯರ್ಸ್ ಗಳು ಆದ್ಯತೆ ಮೇಲೆ.ತೆಗೆದುಕೊಳ್ಳಬೇಕು. ರಾಜ್ಯಕ್ಕೆ ಲಸಿಕೆ ಸಮಸ್ಯೆ ಇಲ್ಲ, ವಿಶ್ವದ 37 ದೇಶಗಳಲ್ಲಿ ಇನ್ನೂ ಶೆ 10 ರಷ್ಟು ಲಸಿಕೆ ನೀಡಿಲ್ಲ ಎಂದರು.

ಡಿಸೆಂಬರ್ 1 ರ ಮೊದಲೆ ವಾರ 23% ಜನರು ಆಸ್ಪತ್ರೆಯಲ್ಲಿದ್ದರು,73% ಮನೆಯಲ್ಲಿದ್ದರು. ಜನವರಿ 11 ದಿನದಲ್ಲಿ 6% ಆಸ್ಪತ್ರೆ ಸೇರಿದ್ದಾರೆ. ಹೋಮ್ ಐಸೋಲೇಷನ್ ಜನರು 93% ಇದ್ದಾರೆ.ಪ್ರತಿ ದಿನ 2 ಲಕ್ಷ ಜನರ ತಪಾಸಣೆ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ 1ಲಕ್ಷ ತಪಾಸಣೆ ಮಾಡಲಾಗುತ್ತಿದೆ ಎಂದರು.

ಐದು ಟಿ ಸೂತ್ರ
ಟೆಸ್ಟಿಂಗ್
265 ಟೆಸ್ಟಿಂಗ್ ಲ್ಯಾಬ್ ಕರ್ನಾಟಕದಲ್ಲಿವೆ. ನಿತ್ಯ 2.5. ಲಕ್ಷ ಪರೀಕ್ಷೆ ನಡೆಸಲು ತೀರ್ಮಾನ ಮಾಡಲಾಗಿದ್ದು, ಒಟ್ಟು 5 ಜಿನೋಮಿಕ್ ಸಿಕ್ವೆನ್ಸ್ ಲ್ಯಾಬ್ ತೆರೆಯಲಾಗಿದ್ದು , 2. ಬೆಂಗಳೂರು,1.ಮೈಸೂರು,ಮಂಗಳೂರುಮತ್ತು ಬೆಳಗಾವಿಯಲ್ಲಿ 1. ಹುಬ್ಬಳ್ಳಿ, ಬಳ್ಳಾರಿಯಲ್ಲೂ ತೆರೆಯಲು ತೀರ್ಮಾನ ಮಾಡಲಾಗಿದೆ.

ಯಾವುದೇ ರಾಜ್ಯ ಹಾಗೂ ಹೊರದೇಶದಿಂದ ಬರುವವರು 72 ಗಂಟೆ ಮುಂಚೆ ಟೆಸ್ಟ್ ರಿಪೋರ್ಟ್ ತರುವುದು ಕಡ್ಡಾಯ ಮಾಡಲಾಗಿದೆ. 14410 ಕೊವಿಡ್ ಹೋಮ್ ಐಸೋಲೇಷನ್ ನಲ್ಲಿ ಇರುವವರಿಗೆ ಮಾಹಿತಿ ನೀಡಲು ಟೋಲ್ ನಂಬರ್ ನೀಡಲಾಗಿದೆ.1533 ಸಂಖ್ಯೆ ಬೆಂಗಳೂರಿಗೆ ನೀಡಲಾಗಿದೆ.

ಬೆಂಗಳೂರು ನಗರದಲ್ಲಿ 8 ಝೊನ್ ವಾರ್ ರೂಮ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಕಂಟೇನ್ಮೆಮೆಂಟ್ ಝೊನ್.ಮಾಡಲಾಗುವುದು. 5 ಪ್ರಕರಣಗಳಿದ್ದರೆ, ಮೈಕ್ರೊ.ಕಂಟೆನ್ ಮೆಂಟ್, 15 ಪ್ರಕರಣ.ಇದ್ದರೆ ಕಂಟೈನ್ ಮೆಂಟ್ ಝೋನ್ ಮಾಡಲಾಗುವುದು ಎಂದರು.

84 ಸಾವಿರ ಮೆಡಿಕಲ್ ಸ್ಟಾಫ್ ಇದ್ದಾರೆ, 4 ಸಾವಿರ ವೈದ್ಯರ ನೇಮಕ.ಮಾಡಿಕೊಂಡಿದ್ದೇವೆ. 3 ನೇ ಅಲೆಗೆ 6386 ಬೆಡ್ 147 ತಾಲುಕು ಆಸ್ಪತ್ರೆಗಳಲ್ಲಿ 2928 ಐಸಿಯು ಬೆಡ್ 127 ತಾಲೂಕು ಆಸ್ಪತ್ರೆಗಳು. 665 ಜಿಲ್ಲಾಸ್ಪತ್ರೆಗಳಲ್ಲಿ ಆಕ್ಸಿನೆಟೆಡ್ ಬೆಡ್ 223 ಐಸಿಯು ಬೆಡ್ ಸಿದ್ಧತೆ ಮಾಡಲಾಗಿದೆ. 266 ಪಿಎಚ್ ಎ ಪ್ಲಾಂಟ್ಸ್ ಅಲಾಟ್ ಆಗಿದ್ದು, 235 ಪ್ರಾರಂಭಿಸಲಾಗಿದೆ. 3460 ವೆಂಟಿಲೇಟರ್ ಇವೆ. 8003 ಅಕ್ಷಿಜನ್ ಕಾನ್ಸಂಟ್ರೇಟರ್ ಇವೆ. ಕೇಂದ್ರ ಸರ್ಕಾರ 831 ಕೋಟಿ ರೂ ನೀಡಿದೆ.ಮಕ್ಕಳಿಗೆ ಜಿಲ್ಲಾಸ್ಪತ್ರೆಗಳಲ್ಲಿ ವಿಶೇಷ ವಾರ್ಡ್ ತೆರೆಯಲಾಗಿದೆ. ರಾಜೀವ್ ಗಾಂಧಿ ಆರೋಗ್ಯ ಕೇಂದ್ರದಲ್ಲಿ ಶೇ 70 ರಷ್ಟು ಮಕ್ಕಳ ಕೊವಿಡ್ ಪ್ರಕರಣಕ್ಕೆ ಮೀಸಲಿಡಲಾಗಿದೆ ಎಂದರು.

4.89 ಕೋಟಿ ಮೊದಲ ಡೋಸ್, 2ನೇ ಡೋಸ್ 3.98 ಕೋಟಿ, 3 ನೇ ಡೋಸ್ 1,81,981 ಜನರು ಪಡೆದುಕೊಂಡಿದ್ದಾರೆ.3 ನೇ ಅಲೆಯಲ್ಲಿ ಆಕ್ಷಿಜನ್ ಕೊರತೆಯ ಲಕ್ಷಣ ಇಲ್ಲ. ಸಾವಿನ ಪ್ರಕರಣ 0.003. ಇದೆ ಎಂದು ತಿಳಿಸಿದರು.

ಕಾಂಗ್ರೆಸ್ ಜನರ ಭಾವನೆ ಅರ್ಥ ಮಾಡಿಕೊಂಡಿದೆ

ಕಾಂಗ್ರೆಸ್ ಪಕ್ಷದ.ನಾಯಕರು ಪಾದಯಾತ್ರೆ ಸ್ಥಗಿತ ಮಾಡಿದ್ದು, ರಾಜ್ಯದ ಜನರ ಭಾವನೆ ಅರ್ಥ ಮಾಡಿಕೊಂಡಿದ್ದಾರೆ.ಇದು ಸ್ವಾಗತಾರ್ಹ ವಿಷಯ. ಅನೇಕ.ಕಾಂಗ್ರೆಸ್ ನಾಯಕರಿಗೆ ಕೊರೊನಾ ಬಂದಿದೆ. ಸಾಕಷ್ಟು ಜನರಿಗೆ ಬಂದಿರೋದು ಗೊತ್ತಿಲ್ಲ. ಕೊವಿಡ್ ಸಮಯದಲ್ಲಿ ಪ್ರತಿಭಟನೆ ಮಾಡೊದು ಸರಿಯಲ್ಲ ಅಂತ ಹೇಳಿದ್ದೆವು. ನೀರಾವರಿ ವಿಚಾರಕ್ಕೆ ಬಿಜೆಪಿ ಯಾವತ್ತೂ ಆದ್ಯತೆ ನೀಡುತ್ತದೆ. ಬೊಮ್ಮಾಯಿ ಅವರು ನೀರಾವರಿ ವಿಚಾರದಲ್ಲಿ ಆಳವಾದ ಅಧ್ಯಯನ ನಡೆಸಿದ್ದಾರೆ. ಸರ್ಕಾರ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬದ್ದವಾಗಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ರ್ಯಾಲಿ ಮಾಡದೆ ಕೊವಿಡ್ ನಿಯಮ ಪಾಲನೆ ಮಾಡಿದ್ದಾರೆ..ರಾಹುಲ್ ಗಾಂಧಿಕೂಡ ಕೊವಿಡ್ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಆದರೆ, ಇಲ್ಲಿನ ಕಾಂಗ್ರೆಸ್ ಬೇರೆಯೇ. ಸರ್ಕಾರಕ್ಕೆ ಅವರನ್ನು ಬಂಧಿಸಿ ಲಾಠಿಚಾರ್ಜ್ ಮಾಡುವುದು ದೊಡ್ಡ ವಿಷಯವಲ್ಲ. ನಮ್ಮ ಸಿಎಂ ಡಿಪ್ಲೊಮೆಟಿಕ್ ಆಗಿ ಮಾಡಿದ್ದಾರೆ. ಇದು ನಮ್ಮ ಸರ್ಕಾರದ ಜಯ, ರಾಜ್ಯದ ಜನರ ಜಯ ಎಂದರು.

ಕೊವಿಡ್ ಬಗ್ಗೆ ಡಿ. ಕೆ. ಶಿವಕುಮಾರ್ ಅನುಮಾನ ವ್ಯಕ್ತಪಡಿಸುವುದರ ಬಗ್ಗೆ ಮರುಕ ಬರುತ್ತದೆ. ಅವರು ಮೂರ್ನಾಲ್ಕು ಬಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರು ಅಧಿಕಾರಿಗಳ ನೈತಿಕ ಶಕ್ತಿ ಕುಂದಿಸುವ ಕೆಲಸ ಮಾಡಬಾರದು. ಮೊಯಿಲಿ ಖರ್ಗೆಯವರಿಗೆ ನಾವು ಪೊಸಿಟಿವ್ ಬರುವಂತೆ ಮಾಡಿದ್ದೇವಾ ಎಂದು ಪ್ರಶ್ನಿಸಿದರು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.