Udupi krishna janmashtami; ಅಷ್ಟಮಿ ಪೇಟ್ಲದ ಸದ್ದು ಕಡಿಮೆಯಾಗುತ್ತಿದೆ!

ಕೃಷ್ಣಾಷ್ಟಮಿ  ಮೊದಲು ಹತ್ತಾರು ವ್ಯಾಪಾರಿಗಳಿದ್ದರೆ ಈಗ ಒಂದಿಬ್ಬರು!

Team Udayavani, Aug 28, 2024, 1:14 AM IST

ಅಷ್ಟಮಿ ಪೇಟ್ಲದ ಸದ್ದು ಕಡಿಮೆಯಾಗುತ್ತಿದೆ!ಅಷ್ಟಮಿ ಪೇಟ್ಲದ ಸದ್ದು ಕಡಿಮೆಯಾಗುತ್ತಿದೆ!ಅಷ್ಟಮಿ ಪೇಟ್ಲದ ಸದ್ದು ಕಡಿಮೆಯಾಗುತ್ತಿದೆ!

ಉಡುಪಿ: ಅದೆಷ್ಟೋ ಜನರ ಬಾಲ್ಯದ ಸಂಭ್ರಮದ ಆಟಿಕೆ, ಕೃಷ್ಣಾಷ್ಟಮಿಯ ವಿಶೇಷ ಆಕರ್ಷಣೆಯಾದ ಪೇಟ್ಲದ ಸದ್ದು ಈ ಬಾರಿ ಕಡಿಮೆಯಾಗಿದೆ. ಅಷ್ಟಮಿ ಎಂದರೆ ಪೇಟ್ಲ ಖರೀದಿ ಎಂಬಷ್ಟು ಖದರು ಹೊತ್ತಿದ್ದ ಪೇಟ್ಲ ರಥಬೀದಿಗೆ ಬರುವ ಮಕ್ಕಳ ಕೈಯಲ್ಲಿ ಹಿಂದೆ ರಾರಾಜಿಸುತ್ತಿತ್ತು. ಆದರೆ ಈ ಬಾರಿ ಕೇವಲ ಒಂದೆರಡು ವ್ಯಾಪಾರಿಗಳಷ್ಟೇ ಪೇಟ್ಲ ಮಾರಾಟ ಮಾಡಿದ್ದಾರೆ. ಹೆಚ್ಚು

ಆಕರ್ಷಣೆಯ ಬೇರೆ ಆಟಿಕೆಗಳ ನಡುವೆ ಪೇಟ್ಲ ತನ್ನ ಖದರನ್ನು ಕಳೆದುಕೊಂಡಿತೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಏನಿದು ಪೇಟ್ಲ ಆಟಿಕೆ?
ಸೀಮೆ ಕೋಲು, ಬಿದಿರಿನ ಕೋಲು ಮತ್ತು ತಗಡನ್ನು ಬಳಸಿ ಮಾಡುವ ಕೋವಿಯಂಥ ಆಟಿಕೆ ಇದು. ಬಿದಿರಿನ ರಂಧ್ರದೊಳಗೆ ಕಾಡಿನಲ್ಲಿ ಸಿಗುವ ಪೇಟ್ಲ ಕಾಯಿಯನ್ನು (ಕಮಟೆ ಕಾಯಿ) ಹಾಕಿ, ಇನ್ನೊಂದು ಕೋಲಿನಿಂದ ಬಿದಿರಿನ ರಂಧ್ರದೊಳಗೆ ಜೋರಾಗಿ ತಳ್ಳುವುದು. ಆಗ ಪೇಟ್ಲ ಕಾಯಿ ಅತ್ಯಂತ ರಭಸದಿಂದ ಹೊರಬಂದು ದೂರಕ್ಕೆ ಚಿಮ್ಮುತ್ತದೆ,  ಬುಲೆಟ್‌ನಂತೆ! ಹಿಂದೆ ಮನೆಗಳಲ್ಲೇ ಈ ಆಟಿಕೆ

ಯನ್ನು ಮಕ್ಕಳಿಗೆ ಮಾಡಿಕೊಡುತ್ತಿದ್ದರು. ಕಾಲಾಂತರದಲ್ಲಿ ಅದು ವಿಟ್ಲಪಿಂಡಿಯಂಥ ಜಾತ್ರೆಯಲ್ಲಿ ಸಿಗುವ ಆಟಿಕೆಯಾಯಿತು. ಈಗ ಅದೂ ಕಡಿಮೆಯಾಗಿ, ಒಂದೆರಡು ವ್ಯಾಪಾರಿಗಳಿಗೆ ಸೀಮಿತವಾಗುತ್ತಿದೆ.

ಈ ಹಿಂದೆ ಮಠದಲ್ಲಿ ಶ್ರೀ ಕೃಷ್ಣನಿಗೆ ಪೂಜೆ, ಮಂಗಳಾರತಿ ನಡೆಯುವ ಸಂದರ್ಭದಲ್ಲಿ, ಮನೆಯಲ್ಲಿ ಹಬ್ಟಾಚರಣೆ ಮಾಡಿದಾಗ ಪೇಟ್ಲ ಹೊಡೆಯುವುದು ರೂಢಿಯಾಗಿತ್ತು.

ಬಿದಿರು ಸಿಗುತ್ತಿಲ್ಲ, ಕಾಯಿ ಹುಡುಕಾಟ ಕಷ್ಟ
ಈ ಬಾರಿ ವಿಟ್ಲ ಪಿಂಡಿಯಲ್ಲಿ ಇಬ್ಬರು ವ್ಯಾಪಾರಿಗಳು ಸುಮಾರು 500ರಷ್ಟು ಪೇಟ್ಲ ಮಾರಾಟ ಮಾಡಿದ್ದಾರೆ. ಹಿಂದೆ ಪೇಟ್ಲಕ್ಕೆ ತಗಡನ್ನು ಬಳಸುತ್ತಿದ್ದರೆ ಈಗ ಪ್ಲಾಸ್ಟಿಕ್‌ ಬಾಟಲಿ ಮತ್ತು ಪೈಪ್‌ ಬಳಸಲಾಗುತ್ತಿದೆ. ಕಮಟೆ ಕಾಯಿಯನ್ನು ಗುಡ್ಡದಿಂದ ತರುವುದು ಕೂಡ ತ್ರಾಸದಾಯವಾಗಿದೆ, ಬಿದಿರೂ ಸಿಗುತ್ತಿಲ್ಲ. ಎಂದು ವ್ಯಾಪಾರಿಗಳು ಹೇಳುತ್ತಾರೆ. ಈ ಬಾರಿ ವಿಟ್ಲ ಪಿಂಡಿಯಲ್ಲಿ  ಪೇಟ್ಲ ಆಟಿಕೆ 200-250 ರೂ.ಗಳಿಗೆ ಮಾರಾಟವಾಗಿದೆ.

ಮೊದಲೆಲ್ಲ 15-20 ಜನ ಬರ್ತಾ ಇದ್ದರು
ಈ ಹಿಂದೆ ಅಷ್ಟಮಿ, ವಿಟ್ಲಪಿಂಡಿ ಸಂದರ್ಭದಲ್ಲಿ 15ರಿಂದ 20 ಮಾರಾಟಗಾರರು ಬರುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಇದರ ತಿಳುವಳಿಕೆ ಇಲ್ಲದೆ ವ್ಯಾಪಾರ ಕಡಿಮೆ. ಈ ಬಾರಿ ಒಂದಿಬ್ಬರಷ್ಟೇ ಮಾರಾಟಗಾರರು ಬಂದಿದ್ದರು.
– ಪ್ರಶಾಂತ್‌, ಪೇಟ್ಲ ವ್ಯಾಪಾರಿ

ನಮಗೆಲ್ಲ ಪೇಟ್ಲವೇ ಪ್ರಧಾನ ಆಟಿಕೆ ಆಗಿತ್ತು!
70 ವರ್ಷದ ಹಿಂದಿನಿಂದಲೂ ಪೇಟ್ಲ ನೋಡುತ್ತಾ, ಆಡುತ್ತಾ ಬಂದಿದ್ದೇನೆ. ನಮಗೆಲ್ಲ ಅದೇ ದೊಡ್ಡ ಆಟದ ವಸ್ತು ಆಗಿತ್ತು. ಈಗಿನ ಮಕ್ಕಳಿಗೆ ಪೇಟ್ಲ ಅಂದರೆ ಗೊತ್ತಿಲ್ಲ, ಬೇರೆ ಆಟಿಕೆಗಳು ಬೇಕಾದಷ್ಟಿವೆ. ಹಾಗಾಗಿ ಬೇಡಿಕೆ ಕಡಿಮೆಯಾಗಿದೆ.
– ಗೋಕುಲ್‌ ದಾಸ್‌ ನಾಯಕ್‌, ಸ್ಥಳೀಯರು, ಉಡುಪಿ

ಟಾಪ್ ನ್ಯೂಸ್

Mysore-Somanna

New Train: ಶೀಘ್ರವೇ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್‌ ರೈಲು: ಕೇಂದ್ರ ಸಚಿವ ಸೋಮಣ್ಣ

Sharana-Patil

Security: ಮಹಿಳಾ ಆರೋಗ್ಯ ಸಿಬ್ಬಂದಿ ಭದ್ರತೆಗೆ ಎಐ ವ್ಯವಸ್ಥೆ: ಸಚಿವ ಶರಣ ಪ್ರಕಾಶ ಪಾಟೀಲ್‌

-Hindu-yuvasene

Ganesh Procession: ಮಂಗಳೂರು ಗಣೇಶೋತ್ಸವ ಸಂಪನ್ನ

Udupi-Vidyesh

Udupi: ಶ್ರೀವಿದ್ಯೇಶತೀರ್ಥರ ಕೃತಿ ಕೃಷ್ಣನಿಗೆ ಅರ್ಪಣೆ ಐತಿಹಾಸಿಕ

Father-Muller

Father Muller: ಔಷಧ ವಿಜ್ಞಾನ ಮಹಾವಿದ್ಯಾಲಯ ಬಿ ಫಾರ್ಮ ಕೋರ್ಸ್‌ಗೆ ಅನುಮತಿ

Kaljiga-1

Film Release: ಬಹುನಿರೀಕ್ಷಿತ “ಕಲ್ಜಿಗ’ ಸಿನೆಮಾ ಬಿಡುಗಡೆ

Kateel

Temple: ಕೊನೆಯ ಶ್ರಾವಣ ಶುಕ್ರವಾರ ಕಟೀಲಿಗೆ ಅಪಾರ ಭಕ್ತರ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Katapadi

Katapadi: ಸ್ಟೀಲ್‌ ನಟ್‌ಗಳ‌ ಈಶ ವಿಶ್ವದಾಖಲೆಗೆ

Udupi-Vidyesh

Udupi: ಶ್ರೀವಿದ್ಯೇಶತೀರ್ಥರ ಕೃತಿ ಕೃಷ್ಣನಿಗೆ ಅರ್ಪಣೆ ಐತಿಹಾಸಿಕ

Udupi ಗೀತಾರ್ಥ ಚಿಂತನೆ-35; ಸ್ವಕರ್ಮ ಪಾಲನೆಯಿಂದ ಸಿದ್ಧಿಯೂ ಸಾಧ್ಯ

Udupi ಗೀತಾರ್ಥ ಚಿಂತನೆ-35; ಸ್ವಕರ್ಮ ಪಾಲನೆಯಿಂದ ಸಿದ್ಧಿಯೂ ಸಾಧ್ಯ

coart ಚೆಕ್‌ ಅಮಾನ್ಯ ಪ್ರಕರಣ: ಆರೋಪಿ ಖುಲಾಸೆ

Coart: ಚೆಕ್‌ ಅಮಾನ್ಯ ಪ್ರಕರಣ; ಆರೋಪಿ ಖುಲಾಸೆ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 9ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 9ನೇ ರೀಲ್ಸ್ ಪ್ರಸಾರ

MUST WATCH

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

ಹೊಸ ಸೇರ್ಪಡೆ

Mysore-Somanna

New Train: ಶೀಘ್ರವೇ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್‌ ರೈಲು: ಕೇಂದ್ರ ಸಚಿವ ಸೋಮಣ್ಣ

Sharana-Patil

Security: ಮಹಿಳಾ ಆರೋಗ್ಯ ಸಿಬ್ಬಂದಿ ಭದ್ರತೆಗೆ ಎಐ ವ್ಯವಸ್ಥೆ: ಸಚಿವ ಶರಣ ಪ್ರಕಾಶ ಪಾಟೀಲ್‌

Katapadi

Katapadi: ಸ್ಟೀಲ್‌ ನಟ್‌ಗಳ‌ ಈಶ ವಿಶ್ವದಾಖಲೆಗೆ

-Hindu-yuvasene

Ganesh Procession: ಮಂಗಳೂರು ಗಣೇಶೋತ್ಸವ ಸಂಪನ್ನ

Udupi-Vidyesh

Udupi: ಶ್ರೀವಿದ್ಯೇಶತೀರ್ಥರ ಕೃತಿ ಕೃಷ್ಣನಿಗೆ ಅರ್ಪಣೆ ಐತಿಹಾಸಿಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.