![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jul 6, 2023, 5:48 AM IST
ಪಡುಬಿದ್ರಿ : ಹೆಜಮಾಡಿಯ ನವಯುಗ ಟೋಲ್ ಪ್ಲಾಝಾದ ಕ್ಯಾಂಟೀನ್ನಲ್ಲಿ ಮಂಗಳವಾರ ಮಧ್ಯರಾತ್ರಿಯ ಬಳಿಕ 1.30ರ ವೇಳೆಗೆ ಕ್ಷುಲ್ಲಕ ಕಾರಣಗಳಿಗಾಗಿ ಮಾತಿಗೆ ಮಾತು ಬೆಳೆಸಿ ಕಾಪು ಚಂದ್ರನಗರದ ಮೂವರ ಗುಂಪೊಂದು ಕ್ಯಾಂಟೀನ್ ಕೆಲಸಗಾರ ಸಂತೋಷ್ ಕುಮಾರ್ ಮೇಲೆ ಕೈಯಿಂದ ಹಲ್ಲೆ ನಡೆಸಿ, ತಿಂಡಿಯ ಡಬ್ಬಗಳನ್ನೆಸೆದು, ಕತ್ತಿಯನ್ನು ಝಳಪಿಸಿ ಕೊಲ್ಲದೇ ಬಿಡುವುದಿಲ್ಲವೆಂದು ಜೀವಬೆದರಿಕೆಯನ್ನು ಹಾಕಿದ್ದಾರೆ.
ಇಬ್ಬರು ಆರೋಪಿಗಳ ಹೆಸರನ್ನು ಸಂತೋಷ್ ಕುಮಾರ್ ಅವರು ರಜಿನ್ ಹಾಗೂ ಜಕ್ರಿಯ ಎಂದು ದೂರಿನಲ್ಲಿ ಹೆಸರಿಸಿದ್ದು ಮೂರನೇ ಆರೋಪಿಯ ಹೆಸರು ತಿಳಿದಿಲ್ಲ. ಉಡುಪಿ ಮಂಗಳೂರು ಕಡೆಗೆ ಹೋಗುವ ಏಕಮುಖ ರಸ್ತೆಯ ಎಡಬದಿಯಲ್ಲಿನ ಕ್ಯಾಂಟೀನ್ನಲ್ಲಿ ಈ ಘಟನೆ ನಡೆದಿದ್ದು ಆರೋಪಿಗಳು ಬಂದಿದ್ದ ಕಾರಲ್ಲಿ ಐವರು ಇದ್ದರೂ ಕೇವಲ ಮೂವರ ಗುಂಪು ಈ ಕೃತ್ಯವನ್ನು ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.