ನಾವ್ ಕೇಳಿದ್ದು…ಇನ್ನೂ ಈಡೇರದ್ದು: ಮುತ್ತಾತನ ಕಾಲದಿಂದಲೂ `ಮತ್ತಾವ’ನ್ನೇ ಮರೆತರು!
ಕಾಲು ಸಂಕ ಕೊಚ್ಚಿ ಹೋದರೆ ಮನೆ ಬಿಟ್ಟು ಕದಲುವಂತಿಲ್ಲ
Team Udayavani, Mar 10, 2023, 7:28 AM IST
ಕಾರ್ಕಳ: ಮುತ್ತಾತನ ಕಾಲದಿಂದಲೂ ಅರಣ್ಯದ ನಡುವೆ ಬದುಕುತ್ತಿರುವ ಮತ್ತಾವು ಭಾಗದ ಜನವಸತಿ ಪ್ರದೇಶಕ್ಕೆ ತೆರಳಲು ಇನ್ನೂ ಸೇತುವೆ ನಿರ್ಮಾಣಗೊಂಡಿಲ್ಲ.
ಈ ಪರಿಸರಕ್ಕೆ ತೆರಳಬೇಕಿದ್ದರೆ ತಾತ್ಕಾಲಿಕ ಸೇತುವೆಯೇ ಗತಿ. ದಶಕಗಳಿಂದಲೂ ಈ ತಾತ್ಕಾಲಿಕ ಸೇತುವೆ ಹೊರತುಪಡಿಸಿ ಶಾಶ್ವತ ಸೇತುವೆಯ ಬೇಡಿಕೆ ಈಡೇರಿಲ್ಲ. ಕೇಳುವಷ್ಟು ಕೇಳಿಯಾಗಿದೆ, ಇನ್ನೂ ಈಡೇರಿಲ್ಲ.
ಮಳೆಗಾಲದಲ್ಲಿ 6 ತಿಂಗಳು ಕೃತಕ ಕಾಲು ಸಂಕವನ್ನೇ ಆಶ್ರಯಿಸಬೇಕು. ಇಲ್ಲಿ ವೃದ್ಧರು, ಮಹಿಳೆಯರು, ಮಕ್ಕಳು ಸೇರಿ 170ರಷ್ಟು ಮಂದಿ ಇದೇ ಅಪಾಯಕಾರಿ ಸೇತುವೆ ಬಳಸಿ ನಿತ್ಯ ಶಾಲೆಗೆ, ಕಾರ್ಖಾನೆಗಳಿಗೆ ಕೆಲಸಕ್ಕೆ ತೆರಳುತ್ತಿದ್ದಾರೆ. ಪ್ರತೀ ಬಾರಿ ಈ ತಾತ್ಕಾಲಿಕ ಸೇತುವೆಯನ್ನು (ಸಂಕ) ನಿರ್ಮಿಸಿಕೊಳ್ಳುವುದು ಇವರೇ.
ಕೆಲವೊಮ್ಮೆ ನೆರೆಗೆ ಸಂಕ ಕೊಚ್ಚಿಕೊಂಡು ಹೋದದ್ದಿದೆ. ಆಗ ಹೊಸ ಸಂಕ ಕಟ್ಟುವ ತನಕ ಮನೆ ಬಿಟ್ಟು ಕದಲುವಂತಿಲ್ಲ. ಹೊರಗಿನ ಸಂಪರ್ಕ ಸಂಪೂರ್ಣ ಬಂದ್. ಮಕ್ಕಳು ಶಾಲೆಗೆ ರಜೆ ಹಾಕಿ ಪಾಠ ಕಳೆದುಕೊಂಡು ಮನೆಯಲ್ಲೇ ಕುಳಿತುಕೊಳ್ಳಬೇಕು. ಜತೆಗೆ ಯುವಜನರು ಮಳೆಗಾಲದ ಮುನ್ನವೇ ಇನ್ನೊಂದು ಬದಿಗೆ ದ್ವಿಚಕ್ರ ವಾಹನ ದಾಟಿಸಿ ತಂದಿಟ್ಟುಕೊಳ್ಳುತ್ತಾರೆ.
ತುರ್ತು ಪರಿಸ್ಥಿತಿಗೆ ಸಿದ್ಧತೆ. ಮಳೆಗಾಲಕ್ಕೆ ಬೇಕಾದ ಅಕ್ಕಿ, ಆಹಾರಗಳನ್ನು ಮೊದಲೇ ಸಂಗ್ರಹಿಸಿಟ್ಟುಕೊಳ್ಳಬೇಕು. ಯಾವಾಗ ಏನಾದರೂ ಆಗಬಹುದು ಎಂಬ ಭೀತಿಯಲ್ಲೇ ಮಳೆಗಾಲವನ್ನು ಕಳೆಯುವ ಪರಿಸ್ಥಿತಿ ಈ ನಿವಾಸಿಗಳದ್ದು.
ಪ್ರತೀ ಚುನಾವಣೆ ಬಂದಾಗಲೂ ಹೊಸಬರು ಬಂದಾರು, ಸೇತುವೆ ಆದೀತು ಎಂದುಕೊಳ್ಳುತ್ತಾರೆ. ಆದರೆ ಅವಧಿ ಮುಗಿದಾಗ ಗೆದ್ದ ಜನಪ್ರತಿನಿಧಿಗಳು ಹಳಬರಾಗುತ್ತಾರೆ, ಇವರ ಬೇಡಿಕೆ ಇನ್ನೂ ಹಳತಾಗುತ್ತದೆ !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup LaxmiJanardhana Temple: ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಮನೋಹರ್ ಶೆಟ್ಟಿ ಆಯ್ಕೆ
Goodudeepa Competition: ಪರ್ಯಾಯ ಶ್ರೀಕೃಷ್ಣ ಮಠ… ಗೂಡುದೀಪ ಸ್ಪರ್ಧೆ ಉದ್ಘಾಟನೆ
ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘ: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ
Ajekar Case Follow Up: ನಿಧಾನಗತಿಯ ಸಾವಿಗೆ ಎರಡು ವಿಷದ ಬಾಟಲಿ ಖರೀದಿಸಿದ್ದ ದಿಲೀಪ್
Udupi: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ: ಡಾ.ಎಂ.ಎನ್.ರಾಜೇಂದ್ರ ಕುಮಾರ್
MUST WATCH
ಹೊಸ ಸೇರ್ಪಡೆ
Kaup LaxmiJanardhana Temple: ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಮನೋಹರ್ ಶೆಟ್ಟಿ ಆಯ್ಕೆ
Hosapete: ಜ್ವರದಿಂದ ಮಗು ಸಾವು; ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಪಾಲಕರ ಆಕ್ರೋಶ
BJP: ವಿಜಯೇಂದ್ರ ನಾಯಕತ್ವವನ್ನು ನಾನು ಒಪ್ಪುವುದಿಲ್ಲ: ರಮೇಶ ಜಾರಕಿಹೊಳಿ
Kerala: ವಿಡಿಯೋ ಅಪ್ಲೋಡ್ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ
Explainer: ವಯನಾಡ್ ಲೋಕಸಮರ-ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್ ಅಖಾಡಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.