ಟೈಟಾನಿಕ್‌ ಅವಶೇಷ ನೋಡಲು ಹೋದವರು ಜಲಸಮಾಧಿ?

ಜಲಾಂತರ್ಗಾಮಿಯಲ್ಲಿ ಆಮ್ಲಜನಕ ಮುಗಿದಿರುವ ಶಂಕೆ

Team Udayavani, Jun 23, 2023, 7:40 AM IST

SUBMARINE

ವಾಷಿಂಗ್ಟನ್‌: ಮುಳುಗಿರುವ ಟೈಟಾನಿಕ್‌ ನೋಡಲು ಹೋಗಿ, ಮುಳುಗಿ ಹೋದವರ ಕಥೆ ಇದು…! ಬರೋಬ್ಬರಿ ನೂರ ಹನ್ನೊಂದು ವರ್ಷಗಳ ಹಿಂದೆ (1912 ಏ.15) ಉತ್ತರ ಅಟ್ಲಾಂಟಿಕ್‌ ಸಾಗರದಲ್ಲಿ ಮುಳುಗಿದ್ದ ಟೈಟಾನಿಕ್‌ ಹಡಗಿನ ಅವಶೇಷಗಳ ವೀಕ್ಷಣೆಗೆಂದು ತೆರಳಿ ನಾಪತ್ತೆಯಾಗಿದ್ದ ಸಬ್‌ಮರ್ಸಿಬಲ್‌ (ಜಲಾಂತರ್ಗಾಮಿ) ಇನ್ನೂ ಪತ್ತೆಯಾಗಿಲ್ಲ. ಓಷನ್‌ಗೇಟ್‌ ಕಂಪನಿಯ ಮೂಲಗಳೇ ಹೇಳುವಂತೆ ಅದರಲ್ಲಿದ್ದ ಆಮ್ಲಜನಕ ಖಾಲಿಯಾಗಿದ್ದು, ಐವರೂ ಪ್ರವಾಸಿಗರು ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆಯಾಗಿದೆ.

ಇದೇ ವೇಳೆ, ಟೈಟಾನಿಕ್‌ ಹಡಗಿನ ಅವಶೇಷಗಳ ಸಮೀಪದಲ್ಲೇ ಗುರುವಾರ ರಾತ್ರಿ ನೌಕೆಯೊಂದರ ಅವಶೇಷವನ್ನು ರೊಬೊಟ್‌ವೊಂದು ಪತ್ತೆಹಚ್ಚಿದೆ. ಆದರೆ, ಇದು ಜಲಾಂತರ್ಗಾಮಿಯ ಅವಶೇಷವೇ ಎಂಬುದು ದೃಢಪಟ್ಟಿಲ್ಲ.

4 ದಿನಗಳ ಹಿಂದೆ ಸಾಹಸಯಾತ್ರೆಯ ಅಂಗವಾಗಿ ಫ್ರಾನ್ಸ್‌ನ ನಿವೃತ್ತ ನೌಕಾಪಡೆ ಅಧಿಕಾರಿ ಪೌಲ್‌ ಹೆನ್ರಿ ನಾರ್ಗೊಲೆಟ್‌, ಬ್ರಿಟನ್‌ನ ಸಿರಿವಂತ ಉದ್ಯಮಿ ಹಮೀಶ್‌ ಹಾರ್ಡಿಂಗ್‌, ಪಾಕ್‌ ಉದ್ಯಮಿ ಶೆಹಜಾದಾ ದಾವೂದ್‌ ಮತ್ತು ಅವರ ಪುತ್ರ ಸುಲೇ ಮಾನ್‌ ಮತ್ತು ಓಷನ್‌ಗೆàಟ್‌ ಕಂಪನಿಯ ಸಿಇಒ ಸ್ಟಾಕ್‌ಟನ್‌ ರಶ್‌ ಜಲಾಂತರ್ಗಾಮಿಯಲ್ಲಿ ತೆರಳಿದ್ದರು. ಅಂದೇ ನಾಪತ್ತೆಯಾಗಿದ್ದ ಈ ನೌಕೆಗಾಗಿ ಸತತ ಶೋಧ ಕಾರ್ಯ ನಡೆಯುತ್ತಲೇ ಇದೆ. ಇದುವರೆಗೂ ಈ ಜಲಾಂತರ್ಗಾಮಿ ಪತ್ತೆಯಾಗಿಲ್ಲ. ಅಲ್ಲದೆ, 92 ಗಂಟೆಗಳ ಕಾಲ ಆಗುವಷ್ಟಿದ್ದ ಆಮ್ಲಜನಕವೂ ಬುಧವಾರ ರಾತ್ರಿ 7.30ರ ವೇಳೆಗೆ ಮುಗಿದಿದೆ. ಹೀಗಾಗಿ ಅದರಲ್ಲಿರುವವರು ಸಾವನ್ನಪ್ಪಿರುವ ಸಾಧ್ಯತೆಗಳು ದಟ್ಟವಾಗಿವೆ ಎಂದೇ ಹೇಳಲಾಗುತ್ತಿದೆ.

ಮೂರು ದಿನಗಳಿಂದ ಆ ಸಬ್‌ಮರ್ಸಿಬಲ್‌ನಲ್ಲಿ ಇದ್ದವರು ಅನುಭವಿಸಿರಬಹುದಾದ ಕಣ್ಣೆದುರಿಗಿನ ಮರಣ ಆಹ್ವಾನದ ಭೀತಿಯನ್ನು ಊಹಿಸಿಯೇ ಜಗತ್ತು ಮರುಗುತ್ತಿದೆ.

ಹೇಗಿದೆ ಜಲಾಂತರ್ಗಾಮಿ?: 9 ಅಡಿ ಅಗಲ, 8 ಅಡಿ ಎತ್ತರವಿರುವ ಸಬ್‌ಮರ್ಸಿಬಲ್‌ನಲ್ಲಿ  ಪ್ರಯಾ­ಣಿಕರು ಓಡಾಡುವುದಿರಲಿ, ಆರಾಮವಾಗಿ ಕೂರುವುದಕ್ಕೂ ಜಾಗವಿಲ್ಲ. ಇದರ ಪ್ರಯಾಣ ವೆಚ್ಚ ಒಬ್ಬರಿಗೆ ಬರೋಬ್ಬರಿಗೆ 2 ಕೋಟಿ ರೂ.ಗಳು. ಸೀಟ್‌ಗಳು ಇಲ್ಲದೆ ಕಾಲು ಮಡಚಿಯೇ ಕೂರಬೇಕು. ಇಡೀ ಜಲಾಂತರ್ಗಾಮಿಗೆ ಒಂದೇ ಕಿಟಕಿಯಿದ್ದು, ಆ ಮೂಲಕವೇ ಟೈಟಾನಿಕ ಅವಶೇಷಗಳನ್ನು ನೋಡಲು ವ್ಯವಸ್ಥೆ ಮಾಡಲಾಗಿತ್ತು. ಇನ್ನು ಜಲಾಂತರ್ಗಾಮಿಯಲ್ಲಿ ಒಂದೇ ಒಂದು ಶೌಚಾಲಯವಿದೆ. ಊಟ, ನೀರು ಇಲ್ಲದೇ 3 ದಿನಗಳಿಂದ ಕಂಗೆಟ್ಟು, ಈಗ ಉಸಿರಾಟಕ್ಕೆ ಆಮ್ಲಜನಕವೂ ಸಿಗದೇ ಒದ್ದಾಡುವ ಪರಿಸ್ಥಿತಿಯನ್ನು ನೆನೆದೇ ಜಗತ್ತು ಕಣ್ಣೀರಾಗುತ್ತಿದೆ. ಆತಂಕದ ನಡುವೆಯೇ ನೌಕ್ತೆಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ.

ಟೈಟಾನಿಕ್‌ ದುರಂತದ ಕುಟುಂಬಸ್ಥನೇ ಪೈಲಟ್‌!

ಸ್ಟಾಕ್‌ಟನ್‌ ರಶ್‌ಎಂಬವರು ನಾಪತ್ತೆಯಾಗಿ­ರುವ ಜಲಾಂತರ್ಗಾಮಿಯ ಪೈಲಟ್‌.. ವಿಪರ್ಯಾಸವೆಂದರೆ ಟೈಟಾನಿಕ್‌ ಹಡಗಿನ ಅವಶೇಷಗಳನ್ನು ತೋರಿಸಲು ರಶ್‌ ಹೋಗಿದ್ದರೋ, ಅದೇ ಹಡಗಿನಲ್ಲಿ ಮುಳುಗಿ ಸತ್ತಂತ ಶ್ರೀಮಂತ ಕುಟುಂಬದವರೇ ರಶ್‌ ಪತ್ನಿ ವೆಂಡಿ ರಶ್‌.. ದುರಾದೃಷ್ಟವೆಂಬಂತೆ ಟೈಟಾನಿಕ್‌ ದುರಂತದಲ್ಲಿ ವೆಂಡಿ, ತಮ್ಮ ಪೂರ್ವಜರನ್ನ ಕಳೆದುಕೊಂಡಿದ್ದರು. ಈಗ ಅದರ ಅವಶೇಷಗಳನ್ನು ತೋರಿಸಲು ಹೋಗಿದ್ದ ಅವರ ಪತಿಯೂ ಅಪಾಯದಲ್ಲಿ ಸಿಲುಕುವಂತಾಗಿದೆ.

 

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್‌ ಗಂಡಸು: ಮಸ್ಕ್ ತಂದೆ

Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್‌ ಗಂಡಸು: ಮಸ್ಕ್ ತಂದೆ

Trump-musk

Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!

Mexico:ಯುರೋಪ್‌ ನ Most ವಾಂಟೆಡ್‌ ಕ್ರಿ*ಮಿನಲ್‌, ಡ್ರ*ಗ್‌ ಕಿಂಗ್‌ ಪಿನ್‌ ಮಾರ್ಕೋ ಹತ್ಯೆ

Mexico:ಯುರೋಪ್‌ ನ Most ವಾಂಟೆಡ್‌ ಕ್ರಿ*ಮಿನಲ್‌, ಡ್ರ*ಗ್‌ ಕಿಂಗ್‌ ಪಿನ್‌ ಮಾರ್ಕೋ ಹ*ತ್ಯೆ

India cuts import duty on American Bourbon Whiskey

Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.