ಇನ್ನು ಪಕ್ಷದ ಸಭೆಗಳಲ್ಲಿ ಪಾಲ್ಗೊಳ್ಳುವೆ: ಸ್ಪೀಕರ್ ಕಾಗೇರಿ
ಪಕ್ಷಾತೀತವಾಗಿ ಸ್ಪೀಕರ್ ಕಾರ್ಯ ಪೂರ್ಣಗೊಳಿಸಿದ್ದೇನೆ...
Team Udayavani, Mar 13, 2023, 6:38 PM IST
ಶಿರಸಿ: ಚುನಾವಣೆ ಸಮೀಪ ಆಗುತ್ತಿರುವದರಿಂದ ಇನ್ನು ಮುಂದೆ ಪಕ್ಷದ ಸಭೆ ಸಮಾರಂಭದಲ್ಲಿ ಪಾಲ್ಗೊಳ್ಳುವದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಸೋಮವಾರ ಸುದ್ದಿಗಾರರ ಜೊತೆ ಅನೌಪಚಾರಿಕವಾಗಿ ಮಾತನಾಡಿ, ಈವರೆಗೆ ಹಾಗೂ ಮುಂದಿನ ವಿಧಾನ ಸಭೆಯ ಅಸ್ತಿತ್ವದ ತನಕ ಸ್ಪೀಕರ್ ಜವಬ್ದಾರಿ ನಿರ್ವಹಿಸಬೇಕು. ಆದರೆ, ಚುನಾವಣೆ ಬಂದ ಕಾರಣದಿಂದ ಎಲ್ಲ ಹಿರಿಯರ ಹಾಗೂ ಸಂವಿಧಾನದ ತಜ್ಞರ, ಎಲ್ಲ ಹಿರಿಯ ಜನಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಿ ವಿಧಾನ ಮಂಡಳದ ಕೊನೇಯ ಅಧಿವೇಶನ ಮುಗಿದ ಬಳಿಕ ಚುನಾವಣೆ ಅಖಾಡದ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಮಾತನಾಡಿದ್ದೆ. ಈಗ ಆ ಕಾಲ ಸಮೀಪವಾಗಿದೆ ಎಂದರು.
ಪಕ್ಷಾತೀತವಾಗಿ ಸ್ಪೀಕರ್ ಕಾರ್ಯ ಪೂರ್ಣಗೊಳಿಸಿದ್ದೇನೆ.ಇನ್ನು ಕಾರ್ಯಾಲಯದ ಸಿಬಂದಿ ಸಂಬಳದಿಂದ ಹಿಡಿದು ಉಳಿದ ಜವಬ್ದಾರಿ ಇವೆ. ಅವನ್ನು ಮುಂದಿನ ಜವಬ್ದಾರಿ ತನಕ ನಿಭಾಯಿಸುವೆ. ಆದರೆ, ಪಕ್ಷದ ಸಭೆಗಳಲ್ಲಿ ಭಾಗವಹಿಸುವದಾಗಿ ತಿಳಿಸಿದರು.
ಶಿರಸಿ-ಸಿದ್ದಾಪುರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವಲ್ಲಿ ಗೊಂದಲ ಬೇಡ ಎಂದೂ ಹೇಳಿದ ಕಾಗೇರಿ, ಕ್ಷೇತ್ರದ ಮತದಾರರ ಒಡನಾಟ ಇದೆ. ಆದರೆ, ಪಕ್ಷದ ರ್ಯಾಲಿ, ಸಭೆ ಹಾಗೂ ಇತರ ಸಂದರ್ಭದಲ್ಲಿ ಭಾಗವಹಿಸಲು ಆಗಿರಲಿಲ್ಲ ಎಂದೂ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಬಸ್ – ಕಾರು ಮುಖಾಮುಖಿ ಢಿಕ್ಕಿ; ಚಾಲಕ ಮೃತ್ಯು
Dandeli: ಮಾರುತಿ ನಗರದಲ್ಲಿ ಬಾಲಕನ ಮೇಲೆ ಬೀದಿ ನಾಯಿಗಳಿಂದ ದಾಳಿ
Kumata: ಅಕ್ರಮವಾಗಿ ಸಾಗಿಸುತ್ತಿದ್ದ 27 ಎಮ್ಮೆಗಳ ರಕ್ಷಣೆ; ನಾಲ್ವರ ಬಂಧನ
Sirsi: ದೇಶಾಪಂಡೆ, ಕಾಗೇರಿ ಅವರ ಭಾಷಣ ಶೈಲಿ ಬದಲಾಗಿದೆ ಅಂದಿದ್ದು ಯಾಕೆ?
Dandeli: ಬೀದಿನಾಯಿ ದಾಳಿ.. ಬಾಲಕನಿಗೆ ಗಾಯ: ಬೀದಿನಾಯಿಗಳ ನಿಯಂತ್ರಣಕ್ಕೆ ಸಾರ್ವಜನಿಕರ ಆಗ್ರಹ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.