![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Jul 8, 2023, 6:07 AM IST
ಹರಾರೆ: ಶ್ರೀಲಂಕಾ ವಿರು ದ್ಧದ ಕೊನೆಯ ಸೂಪರ್-6 ಪಂದ್ಯ ದಲ್ಲೂ ಸೋತ ವೆಸ್ಟ್ ಇಂಡೀಸ್ ತೀವ್ರ ಮುಖಭಂಗದೊಂದಿಗೆ “ವಿಶ್ವಕಪ್ ಹೋರಾಟ”ವನ್ನು ಮುಗಿಸಿತು.
ಶುಕ್ರವಾರ ಹರಾರೆಯಲ್ಲಿ ನಡೆದ ಈ ಪಂದ್ಯ ವೆಸ್ಟ್ ಇಂಡೀಸ್ ಪಾಲಿಗೆ ಔಪಚಾರಿಕವಾಗಿದ್ದರೂ ಪ್ರತಿಷ್ಠೆಯದ್ದಾಗಿತ್ತು.
ವಿಶ್ವಕಪ್ ಪ್ರಧಾನ ಸುತ್ತು ತಲುಪಿದ ಶ್ರೀಲಂಕಾವನ್ನು ಮಣಿಸಿ ಅಷ್ಟರ ಮಟ್ಟಿಗೆ ಗೌರವ ಉಳಿಸಿ ಕೊಳ್ಳುವ ಅವಕಾಶ ಇಲ್ಲಿತ್ತು. ಆದರೆ ಹೋಪ್ ಬಳಗ ಇಲ್ಲಿಯೂ ಭರವಸೆ ಕಳೆದುಕೊಂಡಿತು. ಮೊದಲು ಬ್ಯಾಟಿಂಗ್ ನಡೆಸಿ 48.1 ಓವರ್ಗಳಲ್ಲಿ 243ಕ್ಕೆ ಆಲೌಟಾಯಿತು. ಲಂಕಾ 44.2 ಓವರ್ಗಳಲ್ಲಿ ಎರಡೇ ವಿಕೆಟಿಗೆ 244 ರನ್ ಬಾರಿಸಿತು; ಸೂಪರ್ ಸಿಕ್ಸ್ ವಿಭಾಗದ ಐದೂ ಪಂದ್ಯಗಳನ್ನು ಗೆದ್ದು ಮೆರೆದಾಡಿತು. ವಿಂಡೀಸ್ ಜಯಿ ಸಿದ್ದು ಒಂದರಲ್ಲಿ ಮಾತ್ರ. ರವಿವಾರ ಶ್ರೀಲಂಕಾ-ನೆದರ್ಲೆಂಡ್ಸ್ ಫೈನಲ್ನಲ್ಲಿ ಎದುರಾಗಲಿವೆ.
ನಿಸ್ಸಂಕ ಸೆಂಚುರಿ
ಆರಂಭಕಾರ ಪಥುಮ್ ನಿಸ್ಸಂಕ ಶತಕ ಬಾರಿಸಿ ಚೇಸಿಂಗ್ ಹೀರೋ ಎನಿಸಿದರು. ಅವರ ಕೊಡುಗೆ 104 ರನ್ (113 ಎಸೆತ, 14 ಬೌಂಡರಿ). ದಿಮುತ್ ಕರುಣಾರತ್ನೆ 83 ರನ್ ಮಾಡಿದರು. ಮೊದಲ ವಿಕೆಟಿಗೆ 33.3 ಓವರ್ಗಳಿಂದ 190 ರನ್ ಹರಿದು ಬಂತು. ಮಹೀಶ್ ತೀಕ್ಷಣ ಬೌಲಿಂಗ್ನಲ್ಲಿ ಮಿಂಚಿ 4 ವಿಕೆಟ್ ಕೆಡವಿದರು.
ತೀವ್ರ ಬ್ಯಾಟಿಂಗ್ ಕುಸಿತ ಅನುಭ ವಿಸಿದ ವೆಸ್ಟ್ ಇಂಡೀಸ್, ಕೇಸಿ ಕಾರ್ಟಿ ಅವರ 87 ರನ್ ಪ್ರಯತ್ನದಿಂದ ಗೌರವಯುತ ಮೊತ್ತ ದಾಖಲಿಸಿತು. ಆರಂಭಕಾರ ಜಾನ್ಸನ್ ಚಾರ್ಲ್ಸ್ 39, ಕೆಳ ಕ್ರಮಾಂಕದ ಆಟಗಾರರಾದ ರೊಮಾರಿಯೊ ಶೆಫರ್ಡ್ 26, ಕೆವಿನ್ ಸಿಂಕ್ಲೇರ್ 25 ರನ್ ಹೊಡೆದರು.
ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್-48.1 ಓವರ್ಗಳಲ್ಲಿ 243 (ಕಾರ್ಟಿ 87, ಚಾರ್ಲ್ಸ್ 39, ತೀಕ್ಷಣ 34ಕ್ಕೆ 4, ಹೇಮಂತ 49ಕ್ಕೆ 2). ಶ್ರೀಲಂಕಾ-44.2 ಓವರ್ಗಳಲ್ಲಿ 2 ವಿಕೆಟಿಗೆ 244 (ನಿಸ್ಸಂಕ 104, ಕರುಣಾರತ್ನೆ 83, ಮೆಂಡಿಸ್ ಔಟಾಗದೆ 34). ಪಂದ್ಯಶ್ರೇಷ್ಠ: ಮಹೀಶ್ ತೀಕ್ಷಣ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.