ಗಾಳಿ, ಭೋರ್ಗರೆಯುವ ಕಡಲು-ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಹಿನ್ನಡೆ


Team Udayavani, Jul 3, 2023, 5:24 AM IST

FISHERMAN

ಮಲ್ಪೆ : ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಆರಂಭ ವಾಗಿ ಸುಮಾರು 20 ದಿನ ಕಳೆದರೂ ಹೇಳಿಕೊಳ್ಳುವಂತಹ ಮೀನುಗಾರಿಕೆ ನಡೆಯದಿರುವುದು ಮೀನುಗಾರರಿಗೆ ಆತಂಕ ತಂದಿದೆ.

ಮಳೆಗಾಲದ ಅವಧಿಯಲ್ಲಿ ಔಟ್‌ಬೋರ್ಡ್‌ ಎಂಜಿನ್‌ ಅಳವಡಿಸಿದ ನಾಡ ದೋಣಿಗಳಲ್ಲಿ ಸೀಮಿತ ದೂರದವರೆಗೆ ಸಮುದ್ರದಲ್ಲಿ ಸಾಗಿ ಪಟ್ಟೆಬಲೆ, ಮಾಟುಬಲೆ, ಕಂತುಬಲೆಯಂತಹ ರಿಸ್ಕ್ನ ಮೀನುಗಾರಿಕೆ ನಡೆಯುತ್ತದೆ.

30-35 ಮಂದಿ ಮೀನುಗಾರರು ಸಹಕಾರ ತಣ್ತೀದಡಿ ನಡೆಸುವ ನಾಡದೋಣಿಗಳಿಗೆ (ಡಿಸ್ಕೋ) ಇದುವರೆಗೂ ಸಂಪಾದನೆ ಇಲ್ಲದೆ ನಷ್ಟದ ಹಾದಿಯಲ್ಲಿದೆ. ಮುಖ್ಯ ಕಾರಣ ಸಮುದ್ರದಲ್ಲಿ ಮೀನುಗಾರಿಕೆಗೆ ಪೂರಕ ವಾತಾವರಣ ಇಲ್ಲದಿರುವುದು. ಹಾಗಾಗಿ ಕಳೆದ ನಾಲ್ಕೈದು ದಿನಗಳಿಂದ ಇತರ ವರ್ಗದ ದೋಣಿಗಳೂ ಮೀನುಗಾರಿಕೆ ತೆರಳಿಲ್ಲ.
ಜೋರಾದ ಮಳೆಗೆ ಕಡಲಾಳದಲ್ಲಿ ತೂಫಾನ್‌ ಎದ್ದರೆ ಆಳದಲ್ಲಿರುವ ಮೀನುಗಳು ತೀರ ಪ್ರದೇಶದತ್ತ ಧಾವಿಸುವುದು ಸಾಮಾನ್ಯ. ದುರದೃಷ್ಟವೆಂದರೆ ಈ ಬಾರಿ ಅಂತಹ ತೂಫಾನ್‌ ಏಳದೆ ನಾಡದೋಣಿ ಮೀನುಗಾರರಿಗೆ ಭಾರೀ ನಿರಾಶೆ ಮೂಡಿಸಿದೆ. ಈ ಬಾರಿ ಆರಂಭದಲ್ಲಿ ಕಂತುಬಲೆ, ಪಟ್ಟಬಲೆಗೆ ಅಲ್ಪಸ್ವಲ್ಪ ಮೀನು ಮಾತ್ರ ಲಭಿಸಿದ್ದರೂ ಕಡಲಿನ ಅಬ್ಬರವೂ ಬಡ ಮೀನುಗಾರರನ್ನು ಕಂಗೆಡಿಸಿದೆ.

ತಾಜಾ ಮೀನು, ಸವಿರುಚಿ
ನಾಡದೋಣಿ ಮೀನುಗಾರಿಕೆಯಲ್ಲಿ ಸಿಗುವ ಮೀನುಗಳು ಶೀಘ್ರವಾಗಿ ದಡ ಸೇರುವುದರಿಂದ ತಾಜಾವಾಗಿದ್ದು, ಬಹುರುಚಿಕರವಾಗಿರುತ್ತವೆ. ಸಿಗಡಿ, ಬಂಗುಡೆ, ಬೂತಾಯಿ, ಮಣಂಗ್‌, ಬೊಳೆಂಜಿರ್‌ ಸಹಿತ ಕೊಡ್ಡೆಯಿ, ಅಡೆಮೀನು, ಖುರ್ಚಿ, ಸ್ವಾಡಿ ಇತ್ಯಾದಿ ಒಳಗೊಂಡ ಬೆರಕೆ ಮೀನುಗಳು ಮಳೆಗಾಲದಲ್ಲಿ ಇಂತಹ ಪಾರ್ಟ್‌ಟೈಮ್‌ ಮೀನು ಶಿಕಾರಿಯಲ್ಲಿ ಸಾಮಾನ್ಯವಾಗಿ ದೊರೆಯುತ್ತವೆ.

ಕುಂದಾಪುರದಲ್ಲೂ ಅದೇ ಸ್ಥಿತಿ
ಸಮುದ್ರದಲ್ಲಿ ತೂಫಾನ್‌ ಏಳದೇ ಇರುವುದರಿಂದ ಗಂಗೊಳ್ಳಿ, ಕೋಡಿ, ಮರವಂತೆ, ಕೊಡೇರಿ, ಮಡಿಕಲ್‌, ಅಳ್ವೆಗದ್ದೆ ಭಾಗದಲ್ಲಿ ಈ ಬಾರಿ ನಾಡದೋಣಿ ಮೀನುಗಾರಿಕೆ ಆರಂಭ ವಿಳಂಬವಾಗಲಿದೆ. ಜು. 6ರ ಅನಂತರ ಕೆಲವೆಡೆಗಳಲ್ಲಿ ಸಮುದ್ರ ಪೂಜೆ ನಡೆಯಲಿದ್ದು, ಆ ಬಳಿಕ ಪರಿಸ್ಥಿತಿ ನೋಡಿಕೊಂಡು ಮೀನುಗಾರರು ಕಡಲಿಗಿಳಿಯುವ ಬಗ್ಗೆ ನಿರ್ಧಾರ ಮಾಡಲಿದ್ದಾರೆ.

ವಾರದ ಹಿಂದೆ ಕೋಡಿ, ಗಂಗೊಳ್ಳಿ ಭಾಗದಲ್ಲಿ ಕಂಟಲೆ ದೋಣಿ (ಬೀಣಿ ಬಲೆ ದೋಣಿ)ಯವರು ಕಡಲಿಗಿಳಿದ್ದು, ಸಮುದ್ರ ಸ್ವಲ್ಪ ರಫ್‌ ಇದ್ದರೂ 2 ದಿನ ಬೂತಾಯಿ ಮೀನು ಹೇರಳವಾಗಿ ಸಿಕ್ಕಿತು. ಆ ಬಳಿಕ ಕಡಲಬ್ಬರ ಜೋರಾಗಿದ್ದರಿಂದ ಸ್ಥಗಿತಗೊಳಿಸಬೇಕಾಯಿತು. ಎರಡು ದಿನದ ಹಿಂದೆ ಮತ್ತೆ ಕಡಲಿಗಿಳಿದಿದ್ದು ಬಂಗುಡೆ ಸ್ವಲ್ಪ ಮಟ್ಟಿಗೆ ಸಿಕ್ಕಿತು. ಈಗ ಮತ್ತೆ ಕಡಲು ರಫ್‌ ಇರುವುದರಿಂದ ಇಳಿಯುವುದು ಕಷ್ಟ ಎನ್ನುವುದಾಗಿ ಕೋಡಿ ಭಾಗದ ನಾಡದೋಣಿ ಮೀನುಗಾರರು ಹೇಳುತ್ತಾರೆ.

ಚಂಡಮಾರುತದ ಪರಿಣಾಮ
ಕಡಲಾಳದಲ್ಲಿ ತೂಫಾನ್‌ ಎದ್ದ ಬಳಿಕ ಕಡಲು ಪ್ರಕ್ಷುಬ್ಧಗೊಳ್ಳುತ್ತವೆ. ಆಗ ನದಿ, ಹೊಳೆಗಳ ನೀರು, ಅದರೊಂದಿಗೆ ತ್ಯಾಜ್ಯವೆಲ್ಲ ಸಮುದ್ರಕ್ಕೆ ಸೇರುವುದರಿಂದ ಆಹಾರಕ್ಕಾಗಿ ವಿವಿಧ ಜಾತಿಯ ಮೀನುಗಳು ಕಡಲ ತೀರದತ್ತ ಧಾವಿಸುತ್ತವೆ.
ಆದರೆ ಈ ಬಾರಿ ಬಿಪರ್‌ ಜಾಯ್‌ ಚಂಡಮಾರುತದ ರೂಪದಲ್ಲಿ ಆರಂಭದಲ್ಲೇ ತೂಫಾನ್‌ ಆಗಿದೆ. ಈಗ ತೂಫಾನ್‌ ಏಳದೇ ಮೀನುಗಾರರು ಕಡಲಿಗಿಳಿದರೂ ಹೇರಳವಾಗಿ ಮೀನುಗಳು ಸಿಗುವುದಿಲ್ಲ.

ಈ ಬಾರಿ ಆರಂಭದಿಂದಲೂ ಸಮುದ್ರ ಬಿರುಸಾಗಿದ್ದು ನೀರಿನ ಒತ್ತಡದಿಂದ ಮೀನುಗಾರಿಕೆ ಸಾಧ್ಯವಾಗುತ್ತಿಲ್ಲ. ಪ್ರತೀದಿನ ಮೀನಿಲ್ಲದೆ ದೋಣಿಗಳು ವಾಪಸಾಗುತ್ತಿರುವುದರಿಂದ ಮೀನುಗಾರರು ನಷ್ಟಕ್ಕೀಡಾಗುತ್ತಿದ್ದಾರೆ. ಮಂದಿನ ದಿನಗಳಲ್ಲಿ ಉತ್ತಮ ಮೀನುಗಾರಿಕೆ ಆಗಬಹುದೆಂಬ ನಿರೀಕ್ಷೆಯಲ್ಲಿದ್ದೇವೆ.
– ಸುಂದರ ಪಿ. ಸಾಲ್ಯಾನ್‌, ಅಧ್ಯಕ್ಷರು, ಮಲ್ಪೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ

ಈ ಬಾರಿ ಮುಂಗಾರು ಕಡಿಮೆ. ಜತೆಗೆ ತೂಫಾನ್‌ ಇಲ್ಲದೆ ನಾಡದೋಣಿಗಳಿಗೆ ಯಾವುದೇ ಪ್ರಯೋಜನ ಆಗಿಲ್ಲ. ಮುಂದೆ ಉತ್ತಮ ಗಾಳಿ ಮಳೆಯಾಗಿ ತೂಫಾನ್‌ ಉಂಟಾದರೆ ಮಾತ್ರ ನಮಗೆ ಲಾಭವಾದೀತು.
– ವಾಸುದೇವ ಬಿ. ಕರ್ಕೇರ, ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ನವಮಂಗಳೂರು ವಲಯ ಅಧ್ಯಕ್ಷ

ಜು. 5: ಬೊಬ್ಬರ್ಯ ದರ್ಶನ
ಮಲ್ಪೆಯ ಸಾಂಪ್ರದಾಯಿಕ ನಾಡದೋಣಿ, ನಾಡ ಟ್ರಾಲ್‌ದೋಣಿ, ನಾಡ ಕಂತುಬಲೆ ದೋಣಿ ಸಂಘಗಳ ಅಶ್ರಯದಲ್ಲಿ ಮತ್ಸéಸಂಪತ್ತಿಗಾಗಿ ಮೀನುಗಾರರ ಆರಾಧ್ಯ ದೈವ ಬೊಬ್ಬರ್ಯನನ್ನು ಜು. 5ರಂದು ಬೆಳಗ್ಗೆ ದರ್ಶನ ಸೇವೆ ನಡೆಸಿ ಪ್ರಾರ್ಥಿಸಲಾಗುವುದು. ಅಂದು ಮೀನುಗಾರಿಕೆಗೆ ಕಡ್ಡಾಯ
ರಜೆ ಸಾರಲಾಗಿದ್ದು ಬೊಬ್ಬರ್ಯ ದೈವದ ಅಭಯದ ನುಡಿಗಾಗಿ ಮೀನುಗಾರರು ಕಾತರದಲ್ಲಿದ್ದಾರೆ.

 

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-kota-pammu

Pramod Madhwaraj ಅವರದ್ದು ಯಾರನ್ನೂ ದ್ವೇಷಿಸದ ಅಪರೂಪದ ವ್ಯಕ್ತಿತ್ವ: ಕೋಟ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

4

Malpe: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

1

Udupi: ಅಡ್ಡಗಟ್ಟಿ ಹಲ್ಲೆ, ಜೀವಬೆದರಿಕೆ; ದೂರು

13(1)

Udupi: ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿ ಚುರುಕು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.