![Surat; ಐದಂತಸ್ತಿನ ಕಟ್ಟಡ ಕುಸಿತ ಪ್ರಕರಣ; 7ಮಂದಿ ಸಾವು, ಇನ್ನೂ ಸಿಕ್ಕಿಬಿದ್ದಿದ್ದಾರೆ ಹಲವರು](https://www.udayavani.com/wp-content/uploads/2024/07/surta-415x229.jpg)
World Cup; ನೆದರ್ಲೆಂಡ್ಸ್ ವಿರುದ್ಧವೂ ಇಂಗ್ಲೆಂಡ್ ಫೇವರಿಟ್ ಅಲ್ಲ!
ಅಂತಿಮ ಸ್ಥಾನದಿಂದ ಮೇಲೇರೀತೇ "ಮಾಜಿ' ಚಾಂಪಿಯನ್?
Team Udayavani, Nov 8, 2023, 6:30 AM IST
![1-sadsad](https://www.udayavani.com/wp-content/uploads/2023/11/1-sadsad-5-620x395.jpg)
ಪುಣೆ: ಕಳೆದ ಬಾರಿಯ ಚಾಂಪಿಯನ್ ಇಂಗ್ಲೆಂಡ್ ತಂಡದ ವಿಶ್ವಕಪ್ ಅಭಿಯಾನ ಅತ್ಯಂತ ಶೋಚನೀಯ ಹಾಗೂ ಆಘಾತಕಾರಿ ಯಾಗಿ ಮುಗಿದಿದೆ. ವಿಶ್ವಕಪ್ ಪಂದ್ಯಾ ವಳಿಯೊಂದರಲ್ಲೇ ಅತ್ಯಧಿಕ 6 ಸೋಲನುಭವಿಸಿದ ಕಹಿಯನ್ನು ಕ್ರಿಕೆಟ್ ಜನಕರೆಂಬ ಖ್ಯಾತಿಯ ಆಂಗ್ಲರು ಅರಗಿಸಿಕೊಳ್ಳುವುದು, ಮರೆಯುವುದು ಅಷ್ಟು ಸುಲಭವಲ್ಲ.
ಜಾಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ಕಟ್ಟಕಡೆಯ ಸ್ಥಾನಕ್ಕೆ ಕುಸಿದಿದೆ ಎಂಬು ದನ್ನು ಅಷ್ಟು ಸುಲಭದಲ್ಲಿ ನಂಬ ಲಾಗದು, ಒಪ್ಪಲಿಕ್ಕೂ ಆಗದು. ಆದರೆ ಇದು ವಾಸ್ತವ. ಇಂಥ ಸ್ಥಿತಿಯಲ್ಲಿ ಅದು ಮಂಗಳವಾರ ಪುಣೆಯಲ್ಲಿ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ.
ಡಚ್ಚರ ಪಡೆ ಕೂಡ ಇಂಗ್ಲೆಂಡನ್ನು ಅಪ್ಪಚ್ಚಿ ಮಾಡಿದರೆ ಅಚ್ಚರಿ ಇಲ್ಲ.
ನೆದರ್ಲೆಂಡ್ಸ್ ಬಳಿಕ ಇಂಗ್ಲೆಂಡ್ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಪಾಕಿಸ್ಥಾನವನ್ನು ಎದುರಿಸಲಿದೆ. ಇವೆ ರಡನ್ನೂ ಗೆದ್ದು ಈಗಾಗಲೇ ಉಲ್ಬಣಿಸಿರುವ ಗಾಯಕ್ಕೆ ಒಂದಿಷ್ಟು ಮುಲಾಮು ಹಚ್ಚಿಕೊಳ್ಳುವ ಪ್ರಯತ್ನ ವನ್ನು ಮಾಡಬೇಕಿದೆ. 10ರಿಂದ ಕನಿಷ್ಠ 7ನೇ ಸ್ಥಾನಕ್ಕಾದರೂ ಏರಿದರೆ ಇಂಗ್ಲೆಂಡ್ ಪ್ರತಿಷ್ಠೆ ಸ್ವಲ್ಪವಾದರೂ ಉಳಿದೀತು. ಏಕೆಂದರೆ, ಆಗ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾ ವಳಿಯಲ್ಲಿ ಆಡುವ ಅವಕಾಶವೊಂದು ಲಭಿಸಲಿದೆ. ಇಂಗ್ಲೆಂಡ್ ಪ್ರಯತ್ನವಿನ್ನು ಈ ನಿಟ್ಟಿನಲ್ಲಿ ಸಾಗಬೇಕಿದೆ.
ಬಲವಾಗಿ ಬಿತ್ತು ಆರಂಭಿಕ ಏಟು
ಉದ್ಘಾಟನ ಪಂದ್ಯದಲ್ಲಿ ನ್ಯೂಜಿ ಲ್ಯಾಂಡ್ ಕೈಯಲ್ಲಿ ಎದ್ದೇಳಲಾಗದ ಏಟು ತಿಂದ ಇಂಗ್ಲೆಂಡ್, ತನ್ನ 7ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಕ್ಕೆ 33 ರನ್ನುಗಳಿಂದ ಸೋತ ಬಳಿಕ ಸೆಮಿಫೈನಲ್ ಪ್ರವೇಶದ ಕ್ಷೀಣ ಆಸೆಯನ್ನೂ ಕಳೆದುಕೊಂಡಿತು.
ಇಂಗ್ಲೆಂಡ್ನ ಈಗಿನ ಅವಸ್ಥೆ ಯನ್ನು ಕಂಡಾಗ ಅದು ನೆದರ್ಲೆಂಡ್ಸ್ ವಿರುದ್ಧವೂ ನೆಚ್ಚಿನ ತಂಡವಾಗಿ ಉಳಿದಿಲ್ಲ. ನೆದರ್ಲೆಂಡ್ಸ್ ಏಳರಲ್ಲಿ 2 ಪಂದ್ಯಗಳನ್ನು ಗೆದ್ದಿದೆ. ಮಳೆ ಪಂದ್ಯದಲ್ಲಿ ಪ್ರಬಲ ದಕ್ಷಿಣ ಆಫ್ರಿಕಾವನ್ನು ಬುಡ ಮೇಲು ಮಾಡಿದ ಹೆಗ್ಗಳಿಕೆ ಸ್ಕಾಟ್ ಎಡ್ವರ್ಡ್ಸ್ ಪಡೆಯದ್ದು. ಬಳಿಕ ಬಾಂಗ್ಲಾದೇಶವನ್ನೂ ಮಣಿಸಿತು. ಇಂಗ್ಲೆಂಡ್ ಈವರೆಗೆ ಸೋಲಿಸಲು ಯಶಸ್ವಿಯಾದದ್ದು ಬಾಂಗ್ಲಾವನ್ನು ಮಾತ್ರ.
ಇಂಗ್ಲೆಂಡ್ ಎಲ್ಲ ವಿಭಾಗಗಳಲ್ಲೂ ಘೋರ ವೈಫಲ್ಯ ಅನುಭವಿಸಿದ ತಂಡ. ಆಂಗ್ಲರ ಬ್ಯಾಟಿಂಗ್ ಕೂಟದಲ್ಲೇ ಅತ್ಯಂತ ಬಲಿಷ್ಠ ಎಂಬುದು ಸುಳ್ಳಾಗುತ್ತಲೇ ಹೋಯಿತು. ಬೇರ್ಸ್ಟೊ, ಮಲಾನ್, ರೂಟ್, ಸ್ಟೋಕ್ಸ್, ಬ್ರೂಕ್, ಲಿವಿಂಗ್ಸ್ಟೋನ್, ಬಟ್ಲರ್, ಅಲಿ, ಕರನ್… ಹೀಗೆ ಎಲ್ಲರೂ ಇಲ್ಲಿ ಸ್ಟಾರ್ ಬ್ಯಾಟರ್ಗಳೇ. ಆದರೆ ಇವರ ತಾಕತ್ತು ಕಾಗದದಲ್ಲಿ ಮಾತ್ರ ಎಂಬುದು ಸಾಬೀತಾಗಲು ಹೆಚ್ಚು ವೇಳೆ ಹಿಡಿಯಲಿಲ್ಲ. ಇಂಗ್ಲೆಂಡ್ ಬೌಲಿಂಗ್ ವಿಭಾಗದ ವೈಫಲ್ಯ ಇನ್ನಷ್ಟು ಘೋರ. ಇವರ ದಾಳಿಯನ್ನು ಎಲ್ಲರೂ ಕಣ್ಮುಚ್ಚಿಕೊಂಡೇ ಎದುರಿಸಿದರು. ರೀಸ್ ಟಾಪ್ಲೀ ಒಂದಿಷ್ಟು ಪರಿಣಾಮ ಬೀರತೊಡ ಗಿದರು ಎನ್ನುವಾಗಲೇ ಕೂಟದಿಂದ ಹೊರಬಿದ್ದರು.
ಇಂಗ್ಲೆಂಡ್ ವಿರುದ್ಧ ಗೆದ್ದಿಲ್ಲ
“ಆರೇಂಜ್ ಆರ್ಮಿ’ ನೆದರ್ಲೆಂಡ್ಸ್ಗೂ ಚಾಂಪಿಯನ್ಸ್ ಟ್ರೋಫಿ ಪಂದ್ಯಾ ವಳಿಗೆ ಅರ್ಹತೆ ಸಂಪಾದಿಸುವ ಸುವರ್ಣಾವಕಾಶವೊಂದು ಇಲ್ಲಿ ಎದು ರಾಗಿದೆ. ಇಂಗ್ಲೆಂಡ್ ವಿರುದ್ಧ ಗೆದ್ದರೆ ಈ ಅವಕಾಶ ಹತ್ತಿರವಾಗುವುದರ ಜತೆಗೆ ಇತಿಹಾಸವನ್ನೂ ನಿರ್ಮಿಸಿ ದಂತಾಗುತ್ತದೆ. ಅದು ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ ಈವರೆಗೆ ಗೆದ್ದಿಲ್ಲ. ಆಡಿದ ಮೂರರಲ್ಲೂ ಸೋತಿದೆ. ಕೊನೆಯ ಸಲ ಎದುರಾದದ್ದು 2011ರ ವಿಶ್ವಕಪ್ನಲ್ಲಿ. ಅಂದಹಾಗೆ, ನೆದರ್ಲೆಂಡ್ಸ್ ತಂಡದ ಕೊನೆಯ ಎದುರಾಳಿ ಆತಿಥೇಯ ಭಾರತ!
ನೆದರ್ಲೆಂಡ್ಸ್ ಆಲ್ರೌಂಡರ್ಗಳ ಪಡೆ. ಆದರೆ ಕೂಟದುದ್ದಕ್ಕೂ ಓಪನಿಂಗ್ ವೈಫಲ್ಯ ಎದುರಿಸುತ್ತ ಬಂದಿದೆ. ಆಗೆಲ್ಲ ಮಧ್ಯಮ ಕ್ರಮಾಂಕದ ಆಟಗಾರರು ತಂಡದ ರಕ್ಷಣೆಗೆ ನಿಂತಿದ್ದಾರೆ. ಬೌಲಿಂಗ್ ವಿಭಾಗ ಇನ್ನಷ್ಟು ಘಾತಕಗೊಳ್ಳಬೇಕಿದೆ. ಡಚ್ಚರ ಪಡೆ ಈ ಕೂಟದಲ್ಲಿ ಕಳೆದುಕೊಳ್ಳುವಂಥದ್ದೇನಿಲ್ಲ. ಒತ್ತಡವೂ ಇಲ್ಲ. ಹೀಗಾಗಿ ದಿಟ್ಟ ಪ್ರದರ್ಶನ ನೀಡಿ ಇಂಗ್ಲೆಂಡನ್ನು ಮಣಿಸಿದರೆ ಅದೊಂದು ಮಹಾನ್ ವಿಜಯವಾಗಿ ದಾಖಲಾಗಲಿದೆ.
ಟಾಪ್ ನ್ಯೂಸ್
![Surat; ಐದಂತಸ್ತಿನ ಕಟ್ಟಡ ಕುಸಿತ ಪ್ರಕರಣ; 7ಮಂದಿ ಸಾವು, ಇನ್ನೂ ಸಿಕ್ಕಿಬಿದ್ದಿದ್ದಾರೆ ಹಲವರು](https://www.udayavani.com/wp-content/uploads/2024/07/surta-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Potchefstroom ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ಬೋಳ ಅಕ್ಷತಾ ಪೂಜಾರಿ](https://www.udayavani.com/wp-content/uploads/2024/07/akshata-150x83.jpg)
Potchefstroom ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ಬೋಳ ಅಕ್ಷತಾ ಪೂಜಾರಿ
![john-cena](https://www.udayavani.com/wp-content/uploads/2024/07/john-cena-150x83.jpg)
John Cena; ರಸ್ಲಿಂಗ್ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ WWE ಸೂಪರ್ ಸ್ಟಾರ್ ಜಾನ್ ಸೀನ
![India W vs Sa W: ಗೆಲ್ಲಬೇಕಾದ ಒತ್ತಡದಲ್ಲಿ ಕೌರ್ ಬಳಗ](https://www.udayavani.com/wp-content/uploads/2024/07/18-1-150x90.jpg)
India W vs Sa W: ಗೆಲ್ಲಬೇಕಾದ ಒತ್ತಡದಲ್ಲಿ ಕೌರ್ ಬಳಗ
![Champions Trophy: ಚಾಂಪಿಯನ್ಸ್ ಟ್ರೋಫಿಗಾಗಿ ಪಾಕ್ಗೆ ಭಾರತ ಹೋಗಲ್ಲ; ವರದಿ](https://www.udayavani.com/wp-content/uploads/2024/07/16-2-150x90.jpg)
Champions Trophy: ಚಾಂಪಿಯನ್ಸ್ ಟ್ರೋಫಿಗಾಗಿ ಪಾಕ್ಗೆ ಭಾರತ ಹೋಗಲ್ಲ; ವರದಿ
![Wimbledon: ಜ್ವೆರೇವ್, ಶೆಲ್ಟನ್ ಮುನ್ನಡೆ](https://www.udayavani.com/wp-content/uploads/2024/07/20-150x90.jpg)
Wimbledon: ಜ್ವೆರೇವ್, ಶೆಲ್ಟನ್ ಮುನ್ನಡೆ
MUST WATCH
ಹೊಸ ಸೇರ್ಪಡೆ
![Surat; ಐದಂತಸ್ತಿನ ಕಟ್ಟಡ ಕುಸಿತ ಪ್ರಕರಣ; 7ಮಂದಿ ಸಾವು, ಇನ್ನೂ ಸಿಕ್ಕಿಬಿದ್ದಿದ್ದಾರೆ ಹಲವರು](https://www.udayavani.com/wp-content/uploads/2024/07/surta-150x83.jpg)
Surat; ಐದಂತಸ್ತಿನ ಕಟ್ಟಡ ಕುಸಿತ ಪ್ರಕರಣ; 7ಮಂದಿ ಸಾವು, ಇನ್ನೂ ಸಿಕ್ಕಿಬಿದ್ದಿದ್ದಾರೆ ಹಲವರು
![ದೇವರಮನೆ ಗುಡ್ಡದಲ್ಲಿ ಪ್ರವಾಸಿಗರ ದಂಡು; ಟ್ರಾಫಿಕ್ ನಲ್ಲಿ ಸಿಲುಕಿದ ಟೂರಿಸ್ಟ್](https://www.udayavani.com/wp-content/uploads/2024/07/dev-150x83.jpg)
Chikmagalur; ದೇವರಮನೆ ಗುಡ್ಡದಲ್ಲಿ ಪ್ರವಾಸಿಗರ ದಂಡು; ಟ್ರಾಫಿಕ್ ನಲ್ಲಿ ಸಿಲುಕಿದ ಟೂರಿಸ್ಟ್
![Jaipur: ರಸ್ತೆ ಮಧ್ಯೆ ಕಾರು ಅಡ್ಡಗಟ್ಟಿ ಮೂವರು ಯೂಟ್ಯೂಬರ್ಗಳ ಅಪಹರಣ](https://www.udayavani.com/wp-content/uploads/2024/07/5-7-150x90.jpg)
Jaipur: ರಸ್ತೆ ಮಧ್ಯೆ ಕಾರು ಅಡ್ಡಗಟ್ಟಿ ಮೂವರು ಯೂಟ್ಯೂಬರ್ಗಳ ಅಪಹರಣ
![7-yellapura](https://www.udayavani.com/wp-content/uploads/2024/07/7-yellapura-150x90.jpg)
Yellapura: ನಿಯಂತ್ರಣ ತಪ್ಪಿದ ಕಂಟೈನರ್ ಲಾರಿ; ತಪ್ಪಿದ ಅನಾಹುತ
![belagavi](https://www.udayavani.com/wp-content/uploads/2024/07/belagavi-150x90.jpg)
Belagavi; ಮಳೆಯ ನಡುವೆಯೂ ವಿವಾದಿತ ಕಳಸಾ ನಾಲಾ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.