ರುಡ್‌ಸೆಟ್ ನಿಂದ ಯುವಕರಿಗೆ ನವಜೀವನ: ಹರೀಶ್‌ ಪೂಂಜ

ಆಸರೆ ರುಡ್‌ಸೆಟ್ ಯಶಸ್ವಿ ಉದ್ಯಮಿಗಳ ಸಂಘ: ಉದ್ಯಮಿಗಳ ಸಮಾವೇಶ

Team Udayavani, Aug 5, 2019, 3:14 PM IST

5-AGUST-30

ಉದ್ಯಮಿಗಳ ಸಮಾವೇಶ ಹಾಗೂ ಪದಗ್ರಹಣ ಕಾರ್ಯಕ್ರಮವನ್ನು ಶಾಸಕ ಹರೀಶ್‌ ಪೂಂಜ ಉದ್ಘಾಟಿಸಿದರು.

ಬೆಳ್ತಂಗಡಿ : ಧೈರ್ಯ ಮತ್ತು ವಿಶ್ವಾಸವಿದ್ದಲ್ಲಿ ಉದ್ಯಮ ಕ್ಷೇತ್ರ ಯಶಸ್ವಿ ಯಾಗಲು ಸಾಧ್ಯ. ಇಂತಹ ಉದ್ಯಮ ಸೃಷ್ಟಿಸುವ ಕನಸು ಹೊತ್ತು ಬಂದ ಸಾವಿರಾರು ಯುವಕರಿಗೆ ರುಡ್‌ಸೆಟ್ ಸಂಸ್ಥೆ ನವಜೀವನ ರೂಪಿಸಿದೆ ಎಂದು ಶಾಸಕ ಹರೀಶ್‌ ಪೂಂಜ ಶ್ಲಾಘಿಸಿದರು.

ಉಜಿರೆ ರುಡ್‌ಸೆಟ್ ಸಭಾಂಗಣದಲ್ಲಿ ಆಸರೆ ರುಡ್‌ಸೆಟ್ ಯಶಸ್ವಿ ಉದ್ಯಮಿಗಳ ಸಂಘದ ಪದಗ್ರಹಣ ಹಾಗೂ ಉದ್ಯಮಿಗಳ ಸಮಾವೇಶವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಂಜುನಾಥ ಸ್ವಾಮಿ ಹಾಗೂ ಡಾ| ಹೆಗ್ಗಡೆಯವರ ಆಶೀರ್ವಾದವಿರುವ ರುಡ್‌ಸೆಟ್ ಸಂಸ್ಥೆಯಲ್ಲಿ ಉದ್ಯಮ ತರಬೇತಿ ಸಿಗುತ್ತಿದೆ. ಸ್ಥಳೀಯರಿಗೆ ಈ ಮೂಲಕ ಸ್ವ ಉದ್ಯೋಗದ ಕಲ್ಪನೆ ಸಾಕಾರ ವಾಗಿದೆ ಎಂದರು.

ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ವಿಧಾನಪರಿಷತ್‌ ಸದಸ್ಯ ಕೆ. ಹರೀಶ್‌ ಕುಮಾರ್‌ ಮಾತನಾಡಿ, ಜೀವನದಲ್ಲಿ ಹೆತ್ತವರು, ಶಿಕ್ಷಕರು ಬಳಿಕ ಉದ್ಯಮಕ್ಕೆ ಬ್ಯಾಂಕ್‌ಗಳು ಆಸರೆಯಾಗುತ್ತಾರೆ. 28 ವರ್ಷಗಳ ಹಿಂದೆ ಡಾ| ಹೆಗ್ಗಡೆಯವರ ದೂರದೃಷ್ಟಿ ಕಲ್ಪನೆಯಲ್ಲಿ ಆರಂಭಿಸಿದ ಸಂಸ್ಥೆ ಇಂದು ದೇಶಾದ್ಯಂತ ಸಾವಿರಾರು ಮಂದಿಯ ಸ್ವಂತ ಉದ್ದಿಮೆ ಕನಸು ಈಡೇರಿಸುವುದರೊಂದಿಗೆ ಕುಟುಂಬ ನಿರ್ವಹಿಸಲು ಆಸರೆಯಾಗಿದೆ ಎಂದರು.

ರುಡ್‌ಸೆಟ್ ಸಂಸ್ಥೆಯ ಉಪನ್ಯಾಸಕ ಜೇಮ್ಸ್‌ ಅಬ್ರಾಹಂ ಪ್ರಸ್ತಾವಿಸಿ, ರುಡ್‌ಸೆಟ್ ಸಂಸ್ಥೆ ದೇಶದ 586 ಜಿಲ್ಲೆಗಳಲ್ಲಿದ್ದು, ಉಜಿರೆ ಮಾತೃಸಂಸ್ಥೆಯಾಗಿದೆ. ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಕಲ್ಪನೆ ಕೂಸು ಈ ರುಡ್‌ಸೆಟ್ ಸಂಸ್ಥೆಯಾಗಿದೆ. ಕೌಶಲದ ಜತೆಗೆ ಜೀವನವೃತ್ತಿ ನೀಡುವ ಸಂಸ್ಥೆಯಾಗಿದ್ದು, ಯಶಸ್ವಿ ಉದ್ಯಮಿಗಳಾಗಿ, ಅವರದ್ದೇ ಸಂಘಟನೆ ಆಸರೆ 2010ರಲ್ಲಿ ರೂಪು ಗೊಂಡು ಹಲವಾರು ಸಾಮಾಜಿಕ ಸೇವೆಯಲ್ಲಿ ಭಾಗವಹಿಸುತ್ತಿದೆ ಎಂದರು.

ಸಿಂಡಿಕೇಟ್ ಬ್ಯಾಂಕ್‌ನ ಪುತ್ತೂರು ಪ್ರಾಂತೀಯ ಪ್ರಬಂಧಕ ಆರ್‌.ರಾಘವೇಂದ್ರ ಶುಭ ಹಾರೈಸಿದರು. ಪ್ರಬಂಧಕ ಕುಮಾರ್‌, ಆಸರೆ ಸಂಘದ ಸ್ಥಾಪಕಾಧ್ಯಕ್ಷ ಸುನೀಲ್ ರೈ ಬೆಳ್ಳಾರೆ, ರುಡ್‌ಸೆಟ್ ಉಪನ್ಯಾಸಕಿ ಅನುಸೂಯಾ ಉಪಸ್ಥಿತ ರಿದ್ದರು. ಸಂಘದ ಅಧ್ಯಕ್ಷ ವೆಂಕಟರಮಣ ಪುಣಚ ಸ್ವಾಗತಿಸಿ, ಕಾರ್ಯದರ್ಶಿ ಪ್ರಶಾಂತ್‌ ಎಚ್. ಕುದ್ಯಾಡಿ ವಂದಿಸಿ, ಸದಸ್ಯರಾದ ನಾಗರಾಜ್‌ ಕಡಬ ಹಾಗೂ ಪ್ರಶಾಂತ್‌ ಲಾೖಲ ನಿರೂಪಿಸಿದರು.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

8-kukke

Subrahmanya: ಮುಜರಾಯಿ ಸಚಿವರ ನೇತೃತ್ವದಲ್ಲಿ ಕುಕ್ಕೆ ದೇಗುಲದ ಅಭಿವೃದ್ಧಿ ಸಭೆ

3(1

Sullia: ಜಳಕದಹೊಳೆ ಸೇತುವೆ; ಸಂಚಾರ ನಿಷೇಧ

2(1

Uppinangady: ಕಾಂಕ್ರೀಟ್‌ ರಸ್ತೆಯೇ ಕಿತ್ತೋಗಿದೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.