Kasaragod: ಹನಿಟ್ರ್ಯಾಪ್, ನಕಲಿ ಅಧಿಕಾರಿಯ ಸೋಗಿನಲ್ಲಿ ವಂಚನೆ
Team Udayavani, Aug 8, 2024, 8:38 PM IST
ಕಾಸರಗೋಡು: ಐಎಸ್ಆರ್ಒ ಟೆಕ್ನಿಕಲ್ ಅಸಿಸ್ಟೆಂಟ್ ಎಂಬ ನಕಲಿ ಅಧಿಕಾರಿಯ ಸೋಗಿನಲ್ಲಿ ಹಣ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತಳಾಗಿರುವ ಚೆಮ್ನಾಡ್ ಕೊಂಬನಡ್ಕ ನಿವಾಸಿ ಶ್ರುತಿ ಚಂದ್ರಶೇಖರನ್(34) ವಿರುದ್ಧ ಮತ್ತೆ ಮೂರು ಹೊಸ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ.
ಪುಲ್ಲೂರು ಪೆರಿಯಾ ಪಂಚಾಯತ್ನ ಯುವಕನೋರ್ವ ನೀಡಿದ ದೂರಿನಂತೆ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿದ್ದಾರೆ. ತಾನು ಇಸ್ರೋದ ಅಧಿಕಾರಿಯಾಗಿದ್ದೇನೆಂದು ಹೇಳಿ ಆರೋಪಿ ಶ್ರುತಿ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಆ ಹೆಸರಿನಲ್ಲಿ ಮೊದಲು ನನ್ನಿಂದ 14000 ರೂ. ಪಡೆದುಕೊಂಡು, ಆ ಬಳಿಕ ಮಾರ್ಚ್ 31 ರಂದು ನಕಲಿ ಫೋಟೋ ಮತ್ತು ವೀಡಿಯೋವನ್ನು ತೋರಿಸಿ ಮತ್ತೆ ಐವತ್ತು ಸಾವಿರ ರೂ.ಕೇಳಿ ಪಡೆದುಕೊಂಡಳೆಂದೂ, ಎಪ್ರಿಲ್ 29 ರಂದು ಮತ್ತೆ ಐವತ್ತು ಸಾವಿರ ರೂ. ಪಡೆದ ಬಳಿಕ ವಂಚಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಕಾಸರಗೋಡು ನಗರದ ಲ್ಯಾಬೊಂದರ ಸಿಬ್ಬಂದಿ ಉದುಮದ 42 ವರ್ಷದ ಯುವಕನೋರ್ವ ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಶ್ರುತಿ ವಿರುದ್ಧ ಕೇಸು ದಾಖಲಿಸಿದ್ದಾರೆ. ನಾನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಯಾಗಿರುವುದಾಗಿ ನಂಬಿಸಿ 2019 ರಿಂದ 2021ರ ಅವಧಿಯಲ್ಲಿ ಶ್ರುತಿ ತನ್ನ ಬ್ಯಾಂಕ್ ಖಾತೆಯಿಂದ 73000 ರೂ. ಪಡೆದುಕೊಂಡಿದ್ದಳು. ಇದಲ್ಲದೆ ಬ್ಯಾಂಕ್ನಲ್ಲಿ ಅಡ ಇರಿಸಿದ 83.81 ಗ್ರಾಂ ಚಿನ್ನ ಪಡೆದು ಅದನ್ನೂ ಹಿಂತಿರುಗಿಸದೆ ವಂಚಿಸಿದ್ದಾಗಿ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ.
ನಾನು ಫೆಡರಲ್ ಬ್ಯಾಂಕ್ನ ಮೆನೇಜರ್ ಎಂದು ನಂಬಿಸಿ ಶ್ರುತಿ ತನ್ನಿಂದ 1,23,750 ರೂ. ಪಡೆದು ವಂಚಿಸಿದಾಗಿ ಕೊಲ್ಲಂ ಕರುನಾಗಪಳ್ಳಿಯ 33 ರ ಹರೆಯದ ಯುವತಿ ನೀಡಿದ ದೂರಿನಂತೆ ಕೊಲ್ಲಂ ಈಸ್ಟ್ ಪೊಲೀಸ್ ಠಾಣೆಯಲ್ಲಿ ಶ್ರುತಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.