ಅತಿರುದ್ರ ಮಹಾಯಾಗ: ಯಾಗದ ಹವಿಸ್ಸು ಭತ್ತ ನಾಟಿ ಮಹೋತ್ಸವ


Team Udayavani, Aug 6, 2019, 6:19 AM IST

mahayaga

ಕಾಸರಗೋಡು: ಅನನ್ಯ ಭಕ್ತಿಭಾವಗಳೊಂದಿಗೆ ಭತ್ತದ ನೇಜಿಯನ್ನು ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ದೇವರಗುಡ್ಡೆ ಶ್ರೀಶೈಲ ಮಹಾದೇವ ಕ್ಷೇತ್ರದಲ್ಲಿ ನಡೆಯಲಿರುವ ಅತಿರುದ್ರ ಮಹಾಯಾಗಕ್ಕೆ ಯಾಗದ ಹವಿಸ್ಸು ಭತ್ತ ನಾಟಿ ಮಹೋತ್ಸವವು ಬೇಳ ಚೌಕ್ಕಾರು ಕರ್ಪಿತ್ತಿಲು ಅರಿಕ್ಕೆಲ್ ಮರಾಟಿಕೆರೆಯಲ್ಲಿ ರವಿವಾರ ಜರಗಿತು.

2020 ಫೆಬ್ರವರಿ 26ರಿಂದ ಮಾರ್ಚ್‌ 2ರ ತನಕ ಅತಿ ವಿಶಿಷ್ಟವಾದ ಅತಿರುದ್ರ ಮಹಾಯಾಗವು ನಡೆಯಲಿರುವುದು. ಯಾಗದ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿದ್ದು, ಆಹುತಿ ಯನ್ನು ನೀಡಲಿರುವ ಹವಿಸ್ಸುಗಳೆಲ್ಲವನ್ನೂ ವಿಷಮುಕ್ತವಾಗಿ ಸಾವಯವ ಕೃಷಿಯ ಮೂಲಕ ನಡೆಸಲಾಗುವುದು.

ಸಿದ್ಧತೆಯ ಭಾಗವಾಗಿ ವಿವಿಧೆಡೆ ಈಗಾಗಲೇ ಸಮಿತಿಗಳನ್ನು ರೂಪಿಸಲಾಗಿದ್ದು, ನೀರ್ಚಾಲು ಸಮಿತಿಯ ನೇತೃತ್ವದಲ್ಲಿ ಚೌಕ್ಕಾರು ಕರ್ಪಿತ್ತಿಲು ನಾರಾಯಣ ರೈ ಹಾಗೂ ದೂಮಣ್ಣ ರೈಗಳ ಗದ್ದೆಯಲ್ಲಿ ನಡೆದ ಭತ್ತ ನಾಟಿ ಮಹೋತ್ಸವಕ್ಕೆ ಹರ ಹರ ಮಹಾದೇವ್‌ ದೇವನಾಮದೊಂದಿಗೆ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ ಭತ್ತದ ನೇಜಿಯನ್ನು ಭಕ್ತರಿಗೆ ಹಸ್ತಾಂತರಿಸಿ ಅನುಗ್ರಹಿಸಿದರು. ದೇವರ ನಾಮಸ್ಮರಣೆಯೊಂದಿಗೆ ನಮ್ಮ ಪಾಲಿಗೊದಗಿದ ದೇವರ ಸೇವೆಯನ್ನು ಕೈಗೊಳ್ಳಲು ನೂರಾರು ಭಕ್ತಾದಿಗಳು ಒಂದುಗೂಡಿದ್ದರು. ಪುಟ್ಟ ಮಕ್ಕಳು, ಮಾತೆಯರು, ಮಹನೀಯರು ಒಟ್ಟು ಸೇರಿ ಶೀಘ್ರದಲ್ಲಿ ನಾಟಿ ಕಾರ್ಯವನ್ನು ಮುಗಿಸಿದರು. ಈ ಸಂದರ್ಭದಲ್ಲಿ ಊರಪರವೂರ ಅನೇಕ ಮಂದಿ ಗಣ್ಯರು ಪಾಲ್ಗೊಂಡಿದ್ದರು.

ಕಾಸರಗೋಡು ಆ. 5: ಯಜ್ಞದಿಂದ ಪ್ರಕೃತಿ ಸಮೃದ್ಧವಾ ಗುತ್ತದೆ. ಭೂಮಿಗೆ ಮಳೆ ಬರಬೇಕಾದರೆ ಯಜ್ಞವನ್ನು ನಡೆಸಬೇಕು. ಮಳೆಯಿಂದ ನಮಗೆ ಬೆಳೆ ಲಭಿಸುತ್ತದೆ. ತನ್ಮೂಲಕ ಮನುಷ್ಯನಿಗೆ ಅತೀ ಅಗತ್ಯವಾದ ಆಹಾರ ಲಭಿಸುತ್ತದೆ. ಪ್ರಕೃತಿಯಲ್ಲಿ ಇವತ್ತು ನಮಗೆ ಧಾನ್ಯ ದೊರಕಬೇಕಾದರೆ ದೇವರ ಅನುಗ್ರಹವಿರಬೇಕು ಎಂದು ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ ತಿಳಿಸಿದರು.

ಬೇಳ ಗ್ರಾಮದ ಚೌಕ್ಕಾರು ಕರ್ಪಿತ್ತಿಲು ಅರಿಕ್ಕೆಲ್ ಮರಾಟಿಕೆರೆಯಲ್ಲಿ ದೇವರಗುಡ್ಡೆ ಶ್ರೀ ಶೈಲ ಮಹಾದೇವ ಕ್ಷೇತ್ರದಲ್ಲಿ 2020ರ ಫೆಬ್ರವರಿ 26ರಿಂದ ಮಾರ್ಚ್‌ 2ರ ತನಕ ನಡೆಯಲಿರುವ ಅತಿರುದ್ರ ಮಹಾಯಾಗಕ್ಕೆ ಹವಿಸ್ಸು ಭತ್ತ ಕೃಷಿ ನಾಟಿ ಮಹೋತ್ಸವದ ಸಭಾಕಾರ್ಯಕ್ರಮದಲ್ಲಿ ಅವರು ದೀಪಬೆಳಗಿಸಿ ಅನುಗ್ರಹ ಭಾಷಣ ಮಾಡಿದರು. ದೇವರೆನ್ನುವುದು ನಿಷೇಧಿಸಲು ಸಾಧ್ಯವಿಲ್ಲದಂತಹ ಪರಮಸತ್ಯವಾಗಿದೆ. ಸನಾತನ ಆಚಾರ ವಿಚಾರಗಳು ನಮ್ಮೆಲ್ಲರ ರಕ್ಷಣೆಗಿದೆ. ಕೃಷಿಯ ಮೂಲಕ ದೇವರ ಸೇವೆಯೆಂಬ ಪ್ರಯತ್ನ ಸಾರ್ಥಕ್ಯವನ್ನು ಪಡೆಯಲಿ. ಮನುಷ್ಯನ ಪ್ರಯತ್ನ ಎಂಬುದು ಶ್ರೇಷ್ಠವಾಗಿದೆ.

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.