ತೆಂಗಿನ ಮರದಿಂದ ಬಿದ್ದ “ಬಪ್ಪೇರಿಯನ್ ತೆಯ್ಯಂ’
Team Udayavani, Feb 24, 2017, 11:40 AM IST
ಕಾಸರಗೋಡು: ಸಂಪ್ರದಾಯದಂತೆ ತೆಂಗಿನ ಮರ ವೇರಿದ್ದ “ಬಪ್ಪೇರಿಯನ್’ ಎನ್ನುವ ತೆಯ್ಯಂ (ದೈವ) ಬಿದ್ದು ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.
ಕಣ್ಣೂರು ಜಿಲ್ಲೆಯ ಅಯಿಕೋಡ್ನಲ್ಲಿ ಪಾರಂಪರಿಕವಾಗಿ ನಡೆಯುತ್ತಿರುವ ತೆಯ್ಯಂ ಉತ್ಸವದ ಸಂದರ್ಭದಲ್ಲಿ ಬಪ್ಪೇರಿಯನ್ ತೆಯ್ಯಂ ಧರಿಸಿದ್ದ ಸುಮೇಶ್ ಪಣಿಕ್ಕರ್ ಆಯತಪ್ಪಿ ತೆಂಗಿನ ಮರದಿಂದ ಬಿದ್ದು, ಗಂಭೀರ ಗಾಯಗೊಂಡಿದ್ದಾರೆ.
ಮಿನ್ಕುನ್ನು ಮುಪೆ#àರಿಯನ್ ವಯನಾಟು ಕುಲವನ್ ದೈವಸ್ಥಾನದಲ್ಲಿ ನಡೆದ ಭೂತ ಕೋಲ ಪ್ರದರ್ಶನದ ವೇಳೆ ಕೆಳಗೆ ಬಿದ್ದಿದ್ದಾರೆ. ತೆಂಗಿನ ಮರದ ಬುಡದಲ್ಲಿ ಹಾಕಲಾಗಿದ್ದ ಬೆಂಕಿಯ ಕೆಂಡದ ಮೇಲೆ ಬಿದ್ದು ಮೈಕೈ ಸುಟ್ಟ ಗಾಯಗಳಾಗಿವೆ. ಅಲ್ಲದೆ ಕಾಲಿನ ಮೂಳೆ ಮುರಿದಿದೆ. ಗಂಭೀರ ಗಾಯಗೊಂಡ ಅವರನ್ನು ಕಣ್ಣೂರಿನ ಆಸ್ಪತ್ರೆಗೆ ಕೊಂಡೊಯ್ದು ಆ ಬಳಿಕ ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಯಿತು. ಬಪ್ಪೇರಿಯನ್ ಭೂತ ಕೋಲದ ಸಂದರ್ಭದಲ್ಲಿ ತೆಂಗಿನ ಮರವೇರಿ ಆವೇಶ ಪ್ರದರ್ಶಿಸುವುದು ರೂಢಿ. ಇದೇ ಸಂದರ್ಭದಲ್ಲಿ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಸುಮಾರು 10 ಮೀಟರ್ ಎತ್ತರದ ತೆಂಗಿನ ಮರ ವೇರಿದ್ದು ಕೆಳಗ್ಗೆ ಬಿದ್ದ ಸುಮೇಶ್ ಅವರನ್ನು ಪೊಲೀಸರು ಮತ್ತು ಸ್ಥಳೀಯರು ಬೆಂಕಿಯ ಕೆಂಡದಿಂದ ರಕ್ಷಿಸಿ ಆಸ್ಪತ್ರೆಗೆ ಕೊಂಡೊಯ್ದರು. ಸುಮೇಶ್ ಕಳೆದ 20 ವರ್ಷಗಳಿಂದ ದೈವ ಕಟ್ಟುತ್ತಿದ್ದು ಇದು ಪ್ರಥಮವಾಗಿ ಅವಘಡ ಸಂಭವಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿತನ; ಮೊಟ್ಟೆಗಾಗಿ ತಟ್ಟೆ ಹಿಡಿದು ಕುಳಿತ ವಿದ್ಯಾರ್ಥಿಗಳು!
Shiroor landslide: ಕೊನೆಗೂ 71 ದಿನಗಳ ಬಳಿಕ ಅರ್ಜುನ್ ಲಾರಿ ಹಾಗೂ ಮೃತದೇಹ ಪತ್ತೆ
Surathkal: ಹೊಸ ಆಕರ್ಷಣೆಗಳಿಲ್ಲದೆ ಸೊರಗುತ್ತಿವೆ ಬೀಚುಗಳು!
Siddaramaiah ಪತ್ನಿ ಮುಗ್ದ, ಸಾತ್ವಿಕ ಹೆಣ್ಣು ಮಗಳು; ಅನ್ಯಾಯವಾಗಬಾರದು: ಈಶ್ವರಪ್ಪ
Kota: ನೈಲಾಡಿಯಲ್ಲಿ ಹೊಂಚು ಹಾಕಿ ಸಾಕು ನಾಯಿಯನ್ನು ಬೇಟೆಯಾಡಿದ ಚಿರತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.