![Hamsa Moily](https://www.udayavani.com/wp-content/uploads/2024/06/hamsa-415x229.jpg)
Madikeri: ಕಾಫಿ ತೋಟದ ಕೆರೆಗೆ ಬಿದ್ದು ಕಾಡಾನೆ ಸಾವು
Team Udayavani, Jun 22, 2024, 5:29 PM IST
![8](https://www.udayavani.com/wp-content/uploads/2024/06/8-15-620x372.jpg)
ಮಡಿಕೇರಿ: ಆಹಾರ ಆರಿಸಿ ಕಾಡಿನಿಂದ ಕಾಫಿ ತೋಟಕ್ಕೆ ಬಂದ ಕಾಡಾನೆಗಳ ಗುಂಪಿನ ಪೈಕಿ 13 ವರ್ಷ ಪ್ರಾಯದ ಗಂಡಾನೆಯೊಂದು ಆಕಸ್ಮಿಕವಾಗಿ ಕೆರೆಯಲ್ಲಿ ಜಾರಿ ಬಿದ್ದು ಮೃತಪಟ್ಟ ಘಟನೆ ಅಮ್ಮತ್ತಿ ಸಮೀಪದ ಒಂಟಿಯಂಗಡಿಯ ಪಚ್ಚಾಟ್ ಎಂಬಲ್ಲಿ ನಡೆದಿದೆ.
ನಂದ ಎಂಬುವವರಿಗೆ ಸೇರಿದ ಕೆರೆಗೆ ಬಿದ್ದ ಕಾಡಾನೆ ಮೇಲೆ ಬರಲು ಸಾಧ್ಯವಾಗದೆ ನೀರಿನಲ್ಲಿ ಸಿಲುಕಿ ಮೃತಪಟ್ಟಿದೆ.
ಗುಯ್ಯ, ಹಚ್ಚಿನಾಡು, ಕಣ್ಣಂಗಾಲ ಸೇರಿದಂತೆ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಬಿಡು ಬಿಟ್ಟಿದ್ದ ಕಾಡಾನೆಗಳು ರಾತ್ರಿ ಪಚ್ಚಾಡ್ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಕಾಣಿಸಿಕೊಂಡಿವೆ.
ಆನೆಗಳ ಪೈಕಿ 13 ವರ್ಷ ಪ್ರಾಯದ ಗಂಡಾನೆಯೊಂದು ಕಾಫಿ ತೋಟದಲ್ಲಿದ್ದ ಕೆರೆಯ ನೀರಿನಲ್ಲಿ ಸಿಲುಕಿ ಮೃತಪಟ್ಟಿದೆ
ವಿಷಯ ತಿಳಿದ ತೋಟದ ಮಾಲೀಕರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆ ಡಿಎಫ್ ಓ ಜಗನ್ನಾಥ್ , ಎಸಿಎಫ್ ನೆಹರು, ಆರ್ಎಫ್ ಓ ಕಳ್ಳಿರ ಎಂ ದೇವಯ್ಯ ಸೇರಿದಂತೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೀರಿನಲ್ಲಿದ್ದ ಆನೆಯ ಮೃತ ದೇಹವನ್ನು ಜೆಸಿಬಿ ಮೂಲಕ ಹೊರ ತೆಗೆದ ನಂತರ ವನ್ಯಜೀವಿ ವೈದ್ಯರಾದ ಡಾ.ಚೆಟ್ಟಿಯಪ್ಪ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಗುಂಡಿ ತೆಗೆದು ಅಂತ್ಯಸಂಸ್ಕಾರ ಮಾಡಲಾಗಿದೆ.
ಉಪ ವಲಯ ಅರಣ್ಯ ಅಧಿಕಾರಿಗಳಾದ ಸಂಜಿತ್ ಸೋಮಯ್ಯ, ಪ್ರಶಾಂತ್ ಸೇರಿದಂತೆ ಆರ್ ಆರ್ ಟಿ ಹಾಗೂ ಕಾರ್ಯಪಡೆ ತಂಡದ ಸಿಬ್ಬಂದಿಗಳ ಹಾಜರಿದ್ದರು.
ಟಾಪ್ ನ್ಯೂಸ್
![Hamsa Moily](https://www.udayavani.com/wp-content/uploads/2024/06/hamsa-415x229.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.