55 ಕೇಂದ್ರಗಳಲ್ಲಿ ಹಸುರು ಯೋಜನೆ: ಸಚಿವ

ಹಸುರು ಉದ್ಯಾನ ಕಾರ್ಯಕ್ರಮ ಉದ್ಘಾಟನೆ

Team Udayavani, Jun 8, 2019, 6:00 AM IST

07-BDK-01

ಬದಿಯಡ್ಕ: ಹಸಿರು ಮಿಷನ್‌ ಆಶ್ರಯದಲ್ಲಿ ಸಿದ್ಧಪಡಿಸುವ ಹಸುರು ಉದ್ಯಾನದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಕಾಞರಪಳ್ಳಿ ಜಿಎಚ್‌ಎಸ್‌ನಲ್ಲಿ ರಾಜ್ಯ ಕಂದಾಯ ಮತ್ತು ಭವನ ನಿರ್ಮಾಣ ಖಾತೆ ಸಚಿವ ಇ. ಚಂದ್ರಶೇಖರನ್‌ ಉದ್ಘಾಟಿಸಿದರು.

ಮಡಿಕೈ ಗ್ರಾ.ಪಂ., ಜಿಲ್ಲಾ ಸಾಮಾ ಜಿಕ ಅರಣ್ಯೀಕರಣ ವಿಭಾಗ, ಹಸಿರು ಕೇರಳ ಮಿಷನ್‌, ಜೀವ ವೈವಿಧ್ಯ ಮಂಡಳಿ, ಎಂ.ಜಿ.ಎನ್‌.ಆರ್‌.ಇ.ಜಿ., ಕುಟುಂಬಶ್ರೀ ಮೊದಲಾದವುಗಳ ಆಶ್ರಯದಲ್ಲಿ ಕಾರ್ಯಕ್ರಮ ನಡೆ ಯಿತು. ಬರಿದಾಗುತ್ತಿರುವ ಗ್ರಾಮೀಣ ಸ್ವರೂಪವನ್ನು ಪುನಃ ಸ್ಥಾಪಿಸಲು ಮತ್ತು ನಗರ ಪ್ರದೇಶಗಳಲ್ಲಿ ಹಸುರೀಕರಣದ ಜೀವ ವೈವಿಧ್ಯವನ್ನು ಪುನಃ ಸ್ಥಾಪಿಸುವುದೇ ಇದರ ಉದ್ದೇಶವಾಗಿದೆ. ಮೊದಲ ಹಂತದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 20 ಪಂಚಾಯತ್‌ಗಳಲ್ಲಿ ಆಯ್ಕೆ ಮಾಡಿದ 55 ಕೇಂದ್ರಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗುವುದು.

ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಸೂಕ್ತ ಸ್ಥಳಗಳನ್ನು ಪತ್ತೆ ಹಚ್ಚಿ ಉದ್ಯಾನ ಸೃಷ್ಟಿಸುವುದು. ಅರಣ್ಯ ಮಾದರಿಯಲ್ಲಿ ಸಸಿ ನೆಟ್ಟು ರಕ್ಷಿಸುವುದು. ಈ ರೀತಿ ಯಲ್ಲಿ ಅರಣ್ಯವನ್ನು ಸೃಷ್ಟಿಸುವ ಮೂಲಕ ವಾತಾವರಣದ ತಾಪವನ್ನು ನಿಯಂತ್ರಿಸುವುದರೊಂದಿಗೆ ಪಕ್ಷಿಗಳ ಸಹಿತ ಇತರ ವನ್ಯಜೀವಿಗಳಿಗೆ ಆವಾಸ ಸ್ಥಾನವನ್ನು ಒದಗಿಸಿದಂತಾಗುವುದು. ಜೀವ ವೈವಿಧ್ಯ ಉದ್ಯಾನಗಳು, ಕಾಡುಗಳ ಸಂರಕ್ಷಣೆ, ಪುನರ್‌ಜೀವ, ಜಲಸಂರಕ್ಷಣೆ ಮೊದಲಾದವುಗಳು ಯೋಜನೆಯ ಪ್ರಧಾನ ಅಂಶಗಳಾಗಿವೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಞಂಗಾಡು ಬ್ಲಾಕ್‌ ಪಂಚಾಯತಿ ಅದ್ಯಕ್ಷ ಎಂ. ಗೌರಿ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ನಡೆದ ಹಲಸು ಫೆಸ್ಟ್‌ ಉದ್ಘಾಟನೆಯನ್ನು ಮಾಜಿ ಸಂಸದ ಪಿ. ಕರುಣಾಕರನ್‌ ನಿರ್ವಹಿಸಿದರು.

ನಕ್ಷತ್ರ ಅರಣ್ಯೀಕರಣ ಸಾರ್ವಜನಿಕ ಬನ ಸಂರಕ್ಷಣೆಯ ಉದ್ಘಾಟನೆಯನ್ನು ಎಂ.ಗೌರಿ, ಔಷಧ ಸಸ್ಯ ತೋಟವನ್ನು, ಫೋಟೋ ಸಿನಿಮಾ ಪ್ರದರ್ಶನವನ್ನು ಮಡಿಕೈ ಗ್ರಾ.ಪಂ. ಅಧ್ಯಕ್ಷ ಸಿ. ಪ್ರಭಾ ಕರನ್‌ ನಿರ್ವಹಿಸಿದರು. ಕೆ. ಪ್ರಮೀಳಾ, ಎಂ. ಕುಂಞಂಬು, ಶಶೀಂದ್ರನ್‌ ಮಡಿಕೈ, ಎಂ.ಅಬ್ದುಲ್‌ ರಹಮಾನ್‌, ಸಿ. ಇಂದಿರಾ, ಓಮನಾ, ಪಿ.ಕೆ. ಅನೂಪ್‌, ವಿ.ಕೆ. ದಿಲೀಪ್‌, ಎಂ.ಪಿ. ಸುಬ್ರಹ್ಮಣ್ಯನ್‌, ಟಿ.ಟಿ. ಸುರೇಂದ್ರನ್‌, ಪಿ. ಕೃಷ್ಣನ್‌, ಪಿ. ಪ್ರಸೀತಾ, ಬೇಬಿ ಬಾಲಕೃಷ್ಣನ್‌, ಎಂ. ರಾಜನ್‌ ಮತ್ತಿತರರು ಭಾಗವಹಿಸಿದ್ದರು.

ಕಾಸರಗೋಡು ಫಾರೆಸ್ಟ್‌ ಸಹಾಯಕ ಅಧಿಕಾರಿ ಪಿ. ಬಿಜು ಸ್ವಾಗತಿಸಿ, ಸಂಘಟಕ ಸಮಿತಿ ಸಂಚಾಲಕ ಸನಲ್‌ ಷಾ ಮಾಸ್ಟರ್‌ ವಂದಿಸಿದರು.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.