![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Oct 20, 2022, 6:12 PM IST
ಕಾಸರಗೋಡು: ಪರಪ್ಪ ಕನಕವೆಳ್ಳಿಯಲ್ಲಿ ಲಾರಿ ಢಿಕ್ಕಿ ಬೈಕ್ ಸವಾರರಾದ ಹೊಸದುರ್ಗ ಸಮೀಪದ ಪರಪ್ಪ ತುಂಬ ಕಾಲನಿಯ ನಾರಾಯಣನ್ ಅವರ ಪುತ್ರ ಉಮೇಶ್(22) ಮತ್ತು ಅಂಬಾಡಿ ಅವರ ಪುತ್ರ ಮಣಿಕಂಠನ್(18) ಸಾವಿಗೀಡಾದರು.
ವೆಳ್ಳರಿಕುಂಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಢಿಕ್ಕಿ ಹೊಡೆದ ಲಾರಿ ಚಾಲಕನ ವಿರುದ್ಧ ಕೇಸು ದಾಖಲಿಸಿ ಲಾರಿಯನ್ನು ವಶಪಡಿಸಿದ್ದಾರೆ.
ಎಫ್ಬಿಯಲ್ಲಿ ಪೋಸ್ಟ್ ಹಾಕಿದ ಬಳಿಕ ಯುವಕ ಆತ್ಮಹತ್ಯೆ
ಕಾಸರಗೋಡು: ತನ್ನ ಸಾವಿಗೆ ಕಾರಣ ಯುವತಿ ಹಾಗೂ ಯುವಕನೆಂದು ಎಫ್ಬಿಯಲ್ಲಿ ಪೋಸ್ಟ್ ಹಾಕಿದ ಬಳಿಕ ಬಂದಡ್ಕ ಮೂನಾಡ್ ಜಯಪುರದ ಬೆಳ್ಳುಂಗನ್ ಅವರ ಪುತ್ರ ಅನೀಶ್(34) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಯುವತಿ ಹಾಗೂ ಯುವಕನ ಫೋಟೋಗಳನ್ನು ಸೇರಿಸಿಕೊಂಡು ಅ.19 ರಂದು ರಾತ್ರಿ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದರು. ಆ ಬಳಿಕ ಕುಂಡಂಗುಳಿಯ ನಿರ್ಮಾಣ ಹಂತದಲ್ಲಿರುವ ಮನೆಯೊಂದರ ಸಿಟೌಟ್ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಬೇಡಗಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.