ಕೈಕಂಬ ಬಸ್ ತಂಗುದಾಣದಲ್ಲಿ ಕಸದ ರಾಶಿ
Team Udayavani, Apr 15, 2018, 7:05 AM IST
ಕಾಸರಗೋಡು: ಇದು ರಾಷ್ಟ್ರೀಯ ಹೆದ್ದಾರಿ 66ರ ಕೈಕಂಬದ ಬಸ್ ತಂಗುದಾಣದ ದುರವಸ್ಥೆ. ಕೈಕಂಬಕ್ಕೆ ಬಾಯಾರು, ಕುರುಡಪದವು, ಬಳ್ಳೂರು ಕಡೆಯಿಂದ ಮಂಗಳೂರಿಗೆ ದಿನನಿತ್ಯ ನೂರಾರು ಪ್ರಯಾಣಿಕರು ಇದೇ ಬಸ್ ನಿಲ್ದಾಣದಿಂದಲೇ ಮಂಗಳೂರಿನ ಬಸ್ಸಿಗೆ ಕಾಯಬೇಕಿದೆ. ಇಲ್ಲಿ ಅಕ್ಷರಶ: ಕಸದ ತೊಟ್ಟಿಯ ಮಧ್ಯೆ ಕುಳಿತಂತೆ ನಿಮಗೆ ಅನಿಸದೆ ಇರದು.
ಅಕಸ್ಮತ್ತಾಗಿ ನಿಮ್ಮಲ್ಲಿದ್ದ ಕಸವನ್ನು ಹಾಕಬೇಕೆಂದು ಕಸದ ತೊಟ್ಟಿಯನ್ನು ನೀವೇನಾದರು ಹುಡುಕಿದರೆ ದುರ್ಬೀನು ಬಳಸಿ
ದರೂ ಕಸದ ತೊಟ್ಟಿ ಇಲ್ಲಿ ಕಾಣಸಿಗದು. ಮಳೆಗಾಲದಲ್ಲಿ ಈ ಕಸಗಳ ಜೊತೆ ಮರದ ಎಲೆಗಳು ಸೇರಿ ಕೊಳೆತು ಬಸ್ ತಂಗು
ದಾಣವನ್ನು ದುರ್ಗಂಧಮಯವಾಗಿಸುತ್ತದೆ. ಈ ಮೊದಲೇ ಹೇಳಿದಂತೆ ಸಾಕಷ್ಟು ಮಹಿಳೆಯರು, ಮಕ್ಕಳು ಬರುವ ಈ ತಂಗುದಾಣದ ಸ್ವತ್ಛತೆಯ ಜೊತೆ ಒಂದು ಸಾರ್ವಜನಿಕ ಶೌಚಾಲಯ ನಿರ್ಮಾಣ ಕೂಡ ಆಗಬೇಕೆಂದು ಸಾರ್ವಜನಿಕರು ವ್ಯಾಪಕವಾಗಿ ಆಗ್ರಹಿಸುತ್ತಿದ್ದಾರೆ.
ದೇಶದ ಪ್ರಧಾನಿ ಸ್ವಚ್ಛ ಭಾರತ ನಿರ್ಮಾಣದ ಕರೆ ಕೊಟ್ಟಾಗ ಅದನ್ನು ಸ್ಥಳೀಯ ಆಡಳಿತ ನಿರ್ಲಕ್ಷಿಸುವುದು ಸರಿಯಲ್ಲ. ಆದ್ದರಿಂದ ಕೂಡಲೇ ಸ್ಥಳೀಯ ಆಡಳಿತ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.