![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Dec 14, 2018, 2:25 AM IST
ಕಾಸರಗೋಡು: 60ನೇ ರಾಜ್ಯಮಟ್ಟದ ಶಾಲಾ ಕಲೋತ್ಸವ ಮುಂದಿನ ವರ್ಷ ಜಿಲ್ಲೆಯಲ್ಲಿ ವೈಭವಯುತವಾಗಿ ನಡೆಯಲಿದೆ ಎಂದು ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಡಾ| ಗಿರೀಶ್ ಚೋಲಯಿಲ್ ಹೇಳಿದರು. ಮುಂದಿನ ವರ್ಷ ಕಲೋತ್ಸವ ನಡೆಸುವ ಜಿಲ್ಲೆಗೆ ಧ್ವಜ ಹಸ್ತಾಂತರಿಸುವ ಕಾರ್ಯಕ್ರಮ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದ್ದು, ಅವರು ಜಿ. ಪಂ. ಅಧ್ಯಕ್ಷ ಎ.ಜಿ.ಸಿ. ಬಶೀರ್ ಅವರಿಗೆ ಧ್ವಜ ಹಸ್ತಾಂತರಿಸಿದರು.
ಈ ವರ್ಷ ಸಂಭವಿಸಿದ ಜಲದುರಂತ ಹಿನ್ನೆಲೆಯಲ್ಲಿ ಸರಕಾರ ವೆಚ್ಚ ಕಡಿತ ನೀತಿ ಜಾರಿಗೊಳಿಸಿದ್ದ ಕಾರಣ ಹೆಚ್ಚುವರಿ ಗೌಜಿಗದ್ದಲಗಳಿಲ್ಲದೆ ರಾಜ್ಯ ಮಟ್ಟದ ಶಾಲಾ ಕಲೋತ್ಸವ ನಡೆಸಬೇಕಾಗಿ ಬಂದಿತ್ತು. 27 ವರ್ಷಗಳ ಬಳಿಕ ಕಲೋತ್ಸವವನ್ನು ವರ್ಣ ರಂಜಿತವಾಗಿ ನಡೆಸಲು ನಿರ್ಧರಿಸಲಾಗಿದೆ. ಶೀಘ್ರದಲ್ಲೇ ಸಂಘಟಕ ಸಮಿತಿ ಸಭೆಯನ್ನೂ ನಡೆಸಲಾಗುವುದು ಎಂದವರು ಹೇಳಿದರು. ಜಿಲ್ಲಾಧಿಕಾರಿ ಡಾ| ಡಿ.ಸಜಿತ್ ಬಾಬು ಅವರ ಸಮಕ್ಷದಲ್ಲಿ ಈ ಸಮಾರಂಭ ನಡೆಯಿತು. ಜಿಲ್ಲಾ ಮಾಹಿತಿ ಅಧಿಕಾರಿ ರಶೀದ್ಬಾಬು, ಸಹಾಯಕ ಮಾಹಿತಿ ಅಧಿಕಾರಿ ಸಿ.ಟಿ.ಜೋನ್, ವಿವಿಧ ಇಲಾಖೆಗಳ ಪ್ರತಿನಿಧಿಗಳು, ಸಿಬಂದಿ ಉಪಸ್ಥಿತರಿದ್ದರು.
You seem to have an Ad Blocker on.
To continue reading, please turn it off or whitelist Udayavani.