![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Aug 29, 2019, 7:43 PM IST
ಮಡಿಕೇರಿ: ಇತ್ತೀಚೆಗಷ್ಟೇ ಚೆನ್ನೈನ ಬೀದಿಗಳಲ್ಲಿ ಹರಿದ ಬಟ್ಟೆಯಲ್ಲಿ ಓಡಾಡುತ್ತಿದ್ದ ರೀತಿಯಲ್ಲಿ ಕನ್ನಡ ಚಿತ್ರ ತಂಡವೊಂದರ ಕಣ್ಣಿಗೆ ಬಿದ್ದಿದ್ದ ಕನ್ನಡದ ನಟ ಹುಚ್ಚ ವೆಂಕಟ್ ಅವರು ಇಂದು ಮತ್ತೆ ಮಡಿಕೇರಿಯಲ್ಲಿ ರಂಪಾಟ ಮಾಡಿ ಸುದ್ದಿಯಾಗಿದ್ದಾರೆ.
ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಡಿಪೋ ಬಳಿಯಲ್ಲಿ ಸ್ಥಳೀಯರೊಬ್ಬರ ಕಾರಿನ ಗಾಜನ್ನು ಹುಚ್ಚ ವೆಂಕಟ್ ಅವರು ಪುಡಿಗಟ್ಟಿದ್ದಾರೆ. ಮಾರುತಿ 800 ಕಾರಿನ ಗಾಜಿಗೆ ವೆಂಕಟ್ ಅವರು ಕಲ್ಲೆಸೆದು ಹಾನಿಗೊಳಿಸಿದ್ದಾರೆ. ಮತ್ತು ಬಹಳ ಹೊತ್ತು ಆ ಕಾರಿನ ಬಳಿಯಲ್ಲೇ ವಿಚಿತ್ರ ಹಾವ ಭಾವ ಪ್ರದರ್ಶಿಸುತ್ತಾ ನಿಂತಿದ್ದಾರೆ. ಈ ಎಲ್ಲಾ ಘಟನೆಗಳು ನಡೆಯುತ್ತಿದ್ದರೂ ಅಲ್ಲಿ ಹಾಜರಿದ್ದ ಸ್ಥಳೀಯರು ಮೂಕಪ್ರೇಕ್ಷಕರಾಗಿ ನೋಡುತ್ತಾ ನಿಂತಿದ್ದರು.
ಬಳಿಕ ಅಲ್ಲಿಗೆ ಆಗಮಿಸಿದ ಕಾರಿಗೆ ಸಂಬಂಧಪಟ್ಟವರು ವೆಂಕಟ್ ಗೆ ಥಳಿಸಿದ್ದಾರೆ. ಹುಚ್ಚ ವೆಂಕಟ್ ಅವರ ರಂಪಾಟದ ವಿಡಿಯೋ ಮತ್ತು ಅವರಿಗೆ ಥಳಿಸುತ್ತಿರುವ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಹುಚ್ಚ ವೆಂಕಟ್ ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ.
ಕಾರಿನ ಮಾಲಿಕ ದಿಲೀಪ್ ಎಂಬುವವರು ಹೆಳುವ ಪ್ರಕಾರ, ಅವರು ತಮ್ಮ ಕಾರನ್ನು ಎಟಿಎಂ ಹತ್ತಿರ ನಿಲ್ಲಿಸಿ ಹಣ ತೆಗೆಯಲೆಂದು ಒಳಗೆ ಹೋಗಿ ಹೊರಗೆ ಬರುವ ಸಂದರ್ಭದಲ್ಲಿ ವೆಂಕಟ್ ಅವರನ್ನು ನೋಡಿದ್ದಾರೆ. ಇದನ್ನು ತಪ್ಪಾಗಿ ಅರ್ಥಮಾಡಿಕೊಂಡ ವೆಂಕಟ್ ಅವರು ದಿಲೀಪ್ ಅವರ ಬಳಿಗೆ ಬಂದು ‘ನೀನ್ಯಾಕೆ ನನ್ನನ್ನು ಗುರಾಯಿಸಿ ನೋಡ್ತಾ ಇದ್ದೀಯಾ..? ನೀನೇನು ಮಡಿಕೇರಿಯ ಡಾನಾ?’ ಅಂತ ಕೇಳಿ ದಿಲೀಪ್ ಅವರ ಕೆನ್ನೆಗೆ ಬಾರಿಸಿದ್ದಾರೆ. ಆ ಬಳಿಕ ದಿಲೀಪ್ ಅವರ ಕಾರಿನ ಗಾಜುಗಳನ್ನು ಕಲ್ಲಿನಿಂದ ಪುಡಿ ಮಾಡಿದ್ದಾರೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.