![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 11, 2023, 11:58 PM IST
ಕಾಸರಗೋಡು: ಡಿಆರ್ಐ ನೀಡಿದ ರಹಸ್ಯ ಮಾಹಿತಿಯಿಂತೆ ಕಣ್ಣೂರು ವಿಮಾನ ನಿಲ್ದಾಣದಿಂದ 1.8 ಕೋಟಿ ರೂ. ಮೌಲ್ಯದ ಅಕ್ರಮ ಚಿನ್ನವನ್ನು ಕಸ್ಟಂಸ್ ದಳ ವಶಪಡಿಸಿಕೊಂಡಿದೆ.
ಆರೋಪಿಗಳಾದ ಕಾಸರಗೋಡು ನಿವಾಸಿ ಅಬ್ದುಲ್ ನಿಶಾರ್, ಬಡಗರ ನಿವಾಸಿ ಮುಹಮ್ಮದ್ನನ್ನು ಬಂಧಿಸಲಾಗಿದೆ.
ಶಾರ್ಜಾದಿಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಬಂದಿಳಿದ ಅಬ್ದುಲ್ ನಿಶಾರ್ನಿಂದ 63.39 ಲಕ್ಷ ರೂ. ಮೌಲ್ಯದ 1080 ಗ್ರಾಂ ಚಿನ್ನವನ್ನು, ಅಬುಧಾಬಿಯಿಂದ ಬಂದ ಮಹಮೂದ್ನಿಂದ 37.49 ಲಕ್ಷ ರೂ. ಮೌಲ್ಯದ 739 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇವರಿಬ್ಬರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ.
ವೀಸಾ ಭರವಸೆ ನೀಡಿ ವಂಚನೆ
ಲಕ್ಷಾಂತರ ರೂ. ಪಡೆದು ಪರಾರಿ
ಕಾಸರಗೋಡು: ವೀಸಾ ಭರವಸೆ ನೀಡಿ ಹಲವರಿಂದ ಲಕ್ಷಾಂತರ ರೂ. ಹಾಗೂ ಪಾಸ್ಪೋರ್ಟ್ ಲಪಟಾಯಿಸಿ ಪರಾರಿಯಾದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಈ ಸಂಬಂಧ ಹಣ ಕಳೆದುಕೊಂಡ ಪರಪ್ಪ ಕ್ಲಾಯಿಕ್ಕೋಡ್ನ ಜಮೀಲ ಅವರು ನೀಡಿದ ದೂರಿನಂತೆ ಕ್ಲಾಯಿಕ್ಕೋಡ್ನ ಅಬ್ದುಲ್ ರೌಫ್ ವಿರುದ್ಧ ವೆಳ್ಳರಿಕುಂಡ್ ಪೊಲೀಸರು ಕೇಸು ದಾಖಲಿಸಿದ್ದಾರೆ.
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.