Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು


Team Udayavani, Jul 5, 2024, 10:13 PM IST

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ನ್ಯುಮೋನಿಯಾ : ಬಾಲಕಿ ಸಾವು

ಬದಿಯಡ್ಕ: ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದ ನೀರ್ಚಾಲು ಸಮೀಪದ ಪುದುಕೋಳಿ ನಿವಾಸಿ, ಕಾಸರಗೋಡಿನಲ್ಲಿ ಕೆನರಾ ಬ್ಯಾಂಕ್‌ ಸಿಬಂದಿ ಹರೀಶ್‌ ಅವರ ಪುತ್ರಿ ಭೂಮಿಕಾ (4) ಸಾವಿಗೀಡಾದ ಘಟನೆ ನಡೆದಿದೆ.

ಜ್ವರದಿಂದ ಬಳಲುತ್ತಿದ್ದ ಭೂಮಿಕಾಳನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವು ಸಂಭವಿಸಿತು.

ಘರ್ಷಣೆ: ಮೂವರಿಗೆ ಗಾಯ
ಕಾಸರಗೋಡು: ಕಾಂಞಂಗಾಡ್‌ ಅಲಾಮಿಪಳ್ಳಿಯ ಬಾರ್‌ನಲ್ಲಿ ನಡೆದ ಘರ್ಷಣೆಯಲ್ಲಿ ಅರಯಿ ಕಾರ್ತಿಕ್‌ ಪಿಲಿಕುನ್ನಿಲ್‌ನ ಅಮಲ್‌ ಕೃಷ್ಣ (23), ಅರಯಿ ಕಂಡಂಕುಟ್ಟಿಚ್ಚಾಲ್‌ ಪಳ್ಳಿಯ ಪಿ.ಪಿ. ವಿಷ್ಣು ಪ್ರಭಾತ್‌(26) ಮತ್ತು ಅರಯಿಯ ವಿಷ್ಣು ಪಿ.ಪಿ.(26) ಗಾಯಗೊಂಡಿದ್ದಾರೆ.

ಗಾಂಜಾ ಸೇದುತ್ತಿದ್ದ ಇಬ್ಬರ ಬಂಧನ
ಕುಂಬಳೆ: ಗಾಂಜಾ ಬೀಡಿ ಸೇದುತ್ತಿದ್ದ ತಳಂಗರೆ ನಿವಾಸಿ ಅಹಮ್ಮದ್‌ (31) ಮತ್ತು ಕೊಯಿಪ್ಪಾಡಿ ಕಡಪ್ಪುರದ ರಿಯಾಸ್‌ (33)ನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಕೊಯಿಪ್ಪಾಡಿ ಕಡಪ್ಪುರದಲ್ಲಿ ಗಾಂಜಾ ಬೀಡಿ ಸೇದುತ್ತಿದ್ದಾಗ ಬಂಧಿಸಲಾಯಿತು.

ಫಾತಿಮತ್‌ ಸುಹರಾರನ್ನು
ಕೊಂದದ್ದು ಅಸೈನಾರ್‌: ಪೊಲೀಸ್‌
ಕಾಸರಗೋಡು: ಹೊಸದುರ್ಗ ನಾರ್ತ್‌ ಕೋಟಚ್ಚೇರಿಯ ಅವಿಯಿಲ್‌ ಅಪಾರ್ಟ್‌ಮೆಂಟ್‌ನಲ್ಲಿ ನೆಲ್ಲಿಕಟ್ಟೆ ನಿವಾಸಿ ಫಾತಿಮತ್‌ ಸುಹರಾ (42) ಅವರನ್ನು ಕೊಲೆಗೈದಿದ್ದು ಆಕೆಯ ಪ್ರಿಯತಮ ಚೆಂಗಳ ರಹಮ್ಮತ್‌ ನಗರದ ಕನಿಯಡ್ಕದ ಅಸೈನಾರ್‌(33) ಎಂಬುದಾಗಿ ತನಿಖೆಯಲ್ಲಿ ಸ್ಪಷ್ಟಗೊಂಡಿದೆ ಎಂದು ಹೊಸದುರ್ಗ ಪೊಲೀಸರು ತಿಳಿಸಿದ್ದಾರೆ. ಕುತ್ತಿಗೆಗೆ ಇರಿತದ ಗಾಯ ಮತ್ತು ತಲೆಗೆ ಗಂಭೀರ ಗಾಯಗೊಂಡಿರುವುದರಿಂದ ಸಾವು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಿದೆ.

ಅಮಿತ ಮಾತ್ರೆ ಸೇವನೆ : ಮಹಿಳೆ ಸಾವು
ಕಾಸರಗೋಡು: ಪತಿಯ ನಿಧನದ ಬಳಿಕ ಮನನೊಂದಿದ್ದ ಪತ್ನಿ ಅಮಿತ ಪ್ರಮಾಣದಲ್ಲಿ ಮಾತ್ರೆಗಳನ್ನು ಸೇವಿಸಿ ಮೃತಪಟ್ಟ ಘಟನೆ ನಡೆದಿದೆ. ಎಡನೀರಿನ ದಿ|ನಾರಾಯಣ ಅವರ ಪತ್ನಿ ಲಕ್ಷ್ಮೀ (49) ಪರಿಯಾರಂ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಸಾವಿಗೀಡಾದರು. ಘಟನೆಗೆ ಸಂಬಂಧಿಸಿ ವಿದ್ಯಾನಗರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದು ವರ್ಷದ ಹಿಂದೆ ಪತಿ ಹೃದಯ ಸಂಬಂಧ ಅಸೌಖ್ಯದಿಂದ ಸಾವಿಗೀಡಾಗಿದ್ದರು.

ಕಾಂಞಂಗಾಡ್‌ನ‌ಲ್ಲಿ ವಿಷ ಹೊಗೆ
ನಗರಸಭಾ ಕಚೇರಿಗೆ ಮುತ್ತಿಗೆ
ಹಾಕಿದ್ದ 50 ಮಂದಿ ವಿರುದ್ಧ ಕೇಸು
ಕಾಸರಗೋಡು: ಜನರೇಟರ್‌ನಿಂದ ಹೊರ ಸೂಸಿದ ಹೊಗೆಯನ್ನು ಉಸಿರಾಡಿ ಹೊಸದುರ್ಗ ಲಿಟಿಲ್‌ ಫವರ್‌ ಹೈಯರ್‌ ಸೆಕೆಂಡರಿ ಶಾಲೆಯ ಐವತ್ತರಷ್ಟು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆಯನ್ನು ಪ್ರತಿಭಟಿಸಿ ಕಾಂಞಂಗಾಡ್‌ ನಗರಸಭಾ ಕಚೇರಿಗೆ ಮುತ್ತಿಗೆ ಹಾಕಿದ್ದ 50 ಮಂದಿಯ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ.

ಯುಡಿಎಫ್‌ ನೇತಾರರಾದ ಬಶೀರ್‌ ವೆಳ್ಳಿಕೋತ್‌, ಬಿ.ಪಿ.ಪ್ರದೀಪ್‌ ಕುಮಾರ್‌, ಎಂ.ಪಿ.ಜಾಫರ್‌, ಪಿ.ವಿ.ಸುರೇಶ್‌, ಬದ್ರುದ್ದೀನ್‌, ಹಾರಿಸ್‌ ಸಹಿತ ಕಂಡರೆ ಗುರುತು ಪತ್ತೆಹಚ್ಚಬಹುದಾದ ಇತರ 44 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಪ್ರತಿಭಟನಾಕಾರರು ಕಚೇರಿಯ ಮುಂಭಾಗದ ಗಾಜಿನ ಬಾಗಿಲು ಮುರಿದಿರುವುದಾಗಿ ಕೇಸು ದಾಖಲಿಸಲಾಗಿದೆ.

ಕಣ್ವತೀರ್ಥದಲ್ಲಿ ತೆಂಗಿನ ಮರ, ರಸ್ತೆ
ಸಮುದ್ರ ಪಾಲು; ಮನೆಗಳಿಗೆ ಭೀತಿ
ಮಂಜೇಶ್ವರ: ಕಣ್ವತೀರ್ಥದಲ್ಲಿ ಕಡಲ್ಕೊರೆತಕ್ಕೆ ಹಲವು ಮನೆಗಳು ಸಮುದ್ರ ಪಾಲಾಗುವ ಭೀತಿ ಎದುರಾಗಿವೆ. ಈಗಾಗಲೇ ಹಲವು ತೆಂಗಿನ ಮರಗಳು ಸಮುದ್ರ ಪಾಲಾಗಿವೆ. ರಸ್ತೆ ಕೂಡ ನೀರಿಗೆ ಕೊಚ್ಚಿ ಹೋಗಿದೆ. ಕೆಲವು ಮನೆಗಳ ಅಂಗಳದ ವರೆಗೆ ಸಮುದ್ರ ನೀರು ತಲುಪಿದೆ.

ಟಾಪ್ ನ್ಯೂಸ್

Krishi Sinchai Yojana: ರೈತರಿಗೆ ಸಿಗಲಿದೆ ಶೇ.90 ಸಬ್ಸಿಡಿ

Krishi Sinchai Yojana: ರೈತರಿಗೆ ಸಿಗಲಿದೆ ಶೇ.90 ಸಬ್ಸಿಡಿ

army

ಕಾಶ್ಮೀರ ; ಉಗ್ರರಿಂದ ಗ್ರೆನೇಡ್‌, ಗುಂಡಿನ ದಾಳಿ: 5 ಯೋಧರು ಹುತಾತ್ಮ

Theft ಕಟಪಾಡಿ ಫಾರೆಸ್ಟ್‌ಗೇಟ್‌: ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿಯಿಂದ ಕಳವು

Theft ಕಟಪಾಡಿ ಫಾರೆಸ್ಟ್‌ಗೇಟ್‌: ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿಯಿಂದ ಕಳವು

Dinesh-gundurao

Dengue ಹೆಚ್ಚಳಕ್ಕೂ ನಾನೂ ಈಜಿದ್ದಕ್ಕೂ ಏನು ಸಂಬಂಧ: ದಿನೇಶ್‌ ಗುಂಡೂರಾವ್‌

Aranthodu ಅಜ್ಜಾವರ: ಅಪಹರಣಕ್ಕೆ ಯತ್ನ; ದೂರು ದಾಖಲು

Aranthodu ಅಜ್ಜಾವರ: ಅಪಹರಣಕ್ಕೆ ಯತ್ನ; ದೂರು ದಾಖಲು

Manipal ಯಾವುದೇ ಮಾಹಿತಿ ನೀಡದಿದ್ದರೂ 1.57 ಲಕ್ಷ ರೂ. ವರ್ಗಾವಣೆ !

Manipal ಯಾವುದೇ ಮಾಹಿತಿ ನೀಡದಿದ್ದರೂ 1.57 ಲಕ್ಷ ರೂ. ವರ್ಗಾವಣೆ !

Road Mishap ಕೋಲ್ಪೆ: ಲಾರಿ ಚಾಲಕರಿಬ್ಬರಿಗೆ ಕಾರು ಢಿಕ್ಕಿ

Road Mishap ಕೋಲ್ಪೆ: ಲಾರಿ ಚಾಲಕರಿಬ್ಬರಿಗೆ ಕಾರು ಢಿಕ್ಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NANGI-KADALKORETA

Nangi: ತೀವ್ರಗೊಂಡ ಕಡಲ್ಕೊರೆತ… ಬೀಚ್‌ ವ್ಯೂ ರೆಸಾರ್ಟ್‌ ಸಮುದ್ರ ಪಾಲಾಗುವ ಸಾಧ್ಯತೆ

6

Kasargod: ಹಾವು ಕಡಿದು ಸಾವಿಗೀಡಾದ ಮಹಿಳೆಯ ಮನೆಯಲ್ಲಿ ವಿಚಿತ್ರ ಘಟನೆ

Kasaragod: ಕಟ್ಟಿ ಹಾಕಿದ ಕರುವನ್ನು ಕಚ್ಚಿ ಕೊಂದು ಹಾಕಿದ ಕಾಡು ಪ್ರಾಣಿ

Kasaragod: ಕಟ್ಟಿ ಹಾಕಿದ ಕರುವನ್ನು ಕಚ್ಚಿ ಕೊಂದು ಹಾಕಿದ ಕಾಡು ಪ್ರಾಣಿ

Madikeri ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ

Madikeri ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ

Manjeshwar ಜುವೆಲರಿ ದರೋಡೆ: ಇನ್ನಿಬ್ಬರ ಬಂಧನ

Manjeshwar ಜುವೆಲರಿ ದರೋಡೆ: ಇನ್ನಿಬ್ಬರ ಬಂಧನ

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

Krishi Sinchai Yojana: ರೈತರಿಗೆ ಸಿಗಲಿದೆ ಶೇ.90 ಸಬ್ಸಿಡಿ

Krishi Sinchai Yojana: ರೈತರಿಗೆ ಸಿಗಲಿದೆ ಶೇ.90 ಸಬ್ಸಿಡಿ

army

ಕಾಶ್ಮೀರ ; ಉಗ್ರರಿಂದ ಗ್ರೆನೇಡ್‌, ಗುಂಡಿನ ದಾಳಿ: 5 ಯೋಧರು ಹುತಾತ್ಮ

Theft ಕಟಪಾಡಿ ಫಾರೆಸ್ಟ್‌ಗೇಟ್‌: ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿಯಿಂದ ಕಳವು

Theft ಕಟಪಾಡಿ ಫಾರೆಸ್ಟ್‌ಗೇಟ್‌: ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿಯಿಂದ ಕಳವು

Dinesh-gundurao

Dengue ಹೆಚ್ಚಳಕ್ಕೂ ನಾನೂ ಈಜಿದ್ದಕ್ಕೂ ಏನು ಸಂಬಂಧ: ದಿನೇಶ್‌ ಗುಂಡೂರಾವ್‌

Aranthodu ಅಜ್ಜಾವರ: ಅಪಹರಣಕ್ಕೆ ಯತ್ನ; ದೂರು ದಾಖಲು

Aranthodu ಅಜ್ಜಾವರ: ಅಪಹರಣಕ್ಕೆ ಯತ್ನ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.