Kasaragod: ರೈಲಿನಲ್ಲಿ ಲೈಂಗಿಕ ಕಿರುಕುಳಕ್ಕೆ ಯತ್ನ; ಬಂಧನ
Team Udayavani, Oct 15, 2024, 9:15 PM IST
ಕಾಸರಗೋಡು: ರೈಲು ಗಾಡಿಯಲ್ಲಿ ಮಂಗಳೂರಿಗೆ ತೆರಳುತ್ತಿದ್ದ ಮೆಡಿಕಲ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಾಟೆಕಲ್ಲು ಬಿಸ್ಮಿಲ್ಲ ಹೌಸ್ನ ಇಬ್ರಾಹಿಂ ಬಾದುಶ(28)ನನ್ನು ಕಾಸರಗೋಡು ರೈಲ್ವೇ ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ಮುಂಜಾನೆ ಮಂಗಳೂರಿಗೆ ತೆರಳುತ್ತಿದ್ದ ವೆಸ್ಟ್ಕೋಸ್ಟ್ ಎಕ್ಸ್ಪ್ರೆಸ್ ರೈಲಿನ ಜನರಲ್ ಬೋಗಿಯಲ್ಲಿ ಈ ಘಟನೆ ನಡೆದಿದೆ. 5 ಗಂಟೆಗೆ ನೀಲೇಶ್ವರಕ್ಕೆ ರೈಲುಗಾಡಿ ತಲುಪಿದಾಗ ಅದೇ ರೈಲಿನಲ್ಲಿದ್ದ ಈತ ವಿದ್ಯಾರ್ಥಿಯನ್ನು ಬಿಗಿದಪ್ಪಿ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ್ದಾಗಿ ದೂರು ನೀಡಿದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಯುವಕನ ಕೈಯಿಂದ ಬಿಡಿಸಿಕೊಂಡ ವಿದ್ಯಾರ್ಥಿನಿ ರೈಲ್ವೇ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತಲುಪುವಷ್ಟರಲ್ಲಿ ಆತ ಕಾಂಞಂಗಾಡ್ನಲ್ಲಿ ಇನ್ನೊಂದು ಬೋಗಿಗೆ ಹತ್ತಿದನು. ಅನಂತರ ಆತನನ್ನು ಕಾಸರಗೋಡು ರೈಲು ನಿಲ್ದಾಣದಲ್ಲಿ ಇಳಿದ ತತ್ಕ್ಷಣ ಬಂಧಿಸಲಾಯಿತು. ಆತನನ್ನು ರೈಲ್ವೇ ಪೊಲೀಸ್ ಠಾಣೆಗೆ ಕೊಂಡೊಯ್ಯುತ್ತಿದ್ದಂತೆ ಪೊಲೀಸರನ್ನು ದೂಡಿ ಪರಾರಿಯಾಗಿದ್ದನು. ಅಂಗಿ ಕಳಚಿ ಓಡಿದ ಆತನನ್ನು ಪೊಲೀಸರು ಸಾಹಸದಿಂದ ಮತ್ತೆ ಬಂಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಪ್ರಮೋದ್ ಮಧ್ವರಾಜ್ ಹುಟ್ಟುಹಬ್ಬ: ಕುಂದಾಪುರದಲ್ಲಿ ಅ.17ಕ್ಕೆ ರಕ್ತದಾನ ಶಿಬಿರ
Kota: ಅಚ್ಲಾಡಿ ಶ್ರೀಸಿದ್ಧಿವಿನಾಯಕ ದೇವಸ್ಥಾನ: ನಾಳೆ ನವೀಕೃತ ತೀರ್ಥ ಪುಷ್ಕರಣಿ ಲೋಕಾರ್ಪಣೆ
Udupi: ಗೀತಾರ್ಥ ಚಿಂತನೆ-65: ಪಾಂಡವರಲ್ಲಿದ್ದ ಸಮನ್ವಯ ಕೌರವರಲ್ಲಿಲ್ಲ
Police custody: ಆಹಾರ ಭತ್ತೆ 150 ರೂ.ಗೆ ಹೆಚ್ಚಳ
Congress Govt.,: ಹುಬ್ಬಳ್ಳಿ ಕೇಸ್ ವಾಪಸ್; ಕೇಂದ್ರಕ್ಕೆ ಛಲವಾದಿ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.