![Bhovi Community ಜು. 20ಕ್ಕೆ ದೀಕ್ಷಾ ರಜತ ಮಹೋತ್ಸವ: ಲಿಂಬಾವಳಿ](https://www.udayavani.com/wp-content/uploads/2024/07/Aravinda-Limbavali-415x247.jpg)
Kasaragod ಬೈಕ್ ಅಪಘಾತ : ಗಾಯಾಳು ಯುವಕ ಸಾವು
Team Udayavani, Jul 1, 2024, 12:56 AM IST
![Kasaragod ಬೈಕ್ ಅಪಘಾತ : ಗಾಯಾಳು ಯುವಕ ಸಾವು](https://www.udayavani.com/wp-content/uploads/2024/07/car-parkala-620x349.jpg)
ಕಾಸರಗೋಡು: ಕಾಂಞಂಗಾಡ್ ಸೌತ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರಣ ಕಳೆದುಕೊಂಡ ಬೈಕ್ ಮಗುಚಿ ಬಿದ್ದು, ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನೀಲೇಶ್ವರ ಚಿರಪ್ಪುರಂ ಆಲಿನ್ ಕಿಳಿಲ್ನ ಪೈಂಟಿಂಗ್ ಕಾರ್ಮಿಕ ರಘು ಅವರ ಪುತ್ರ ಕಿಶೋರ್ ಕುಮಾರ್ (20) ಸಾವಿಗೀಡಾಗಿದ್ದಾರೆ. ಜೂ.29 ರಂದು ಬೆಳಗ್ಗೆ ಅಪಘಾತ ಸಂಭವಿಸಿತ್ತು.
ಕಾಡಾನೆ ಹಿಂಡು ದಾಳಿ: ಸ್ಕೂಟರ್, ಕೃಷಿಗೆ ಹಾನಿ
ಕಾಸರಗೋಡು: ಬಳಾಲ್ ಗ್ರಾಮ ಪಂಚಾಯತ್ನ ಮಾಲೋಂ ವಲಿಯಪುಂಜಿಯಲ್ಲಿ ಶನಿವಾರ ರಾತ್ರಿ ಕಾಡಾನೆ ಹಿಂಡು ದ್ವಿಚಕ್ರ ವಾಹನವನ್ನು ಎಳೆದಾಡಿದ್ದು, ಅಪಾರ ಕೃಷಿಗೆ ಹಾನಿ ಮಾಡಿದೆ.
ಮನೆಯ ಹತ್ತಿರದ ರಸ್ತೆಯಲ್ಲಿರಿಸಿದ ವಲಿಯ ಪುಂಜಿನ ವರಿಕಾಮುಟ್ಟಿಲ್ ಬಿಬಿನ್ ಸ್ಕರಿಯ ಅವರ ಸ್ಕೂಟರನ್ನು ಎಸೆದು ಹಾನಿ ಮಾಡಿದೆ.
ಸ್ಕೂಟರನ್ನು ತುಳಿದು ಹಾನಿಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನರಿವಲಿಯ ಮೇರಿ ಅವರ ಬಾಳೆ, ಕಂಗು, ಚೆರಿಯಿಲ್ ಜೋಳಿ ಅವರ ಐದು ತೆಂಗಿನ ಮರ, ಬೆನ್ನಿ ಅವರ ತೆಂಗು, ಮಾಲೋಂ ರಜಾಕ್ ಅವರ ತೆಂಗು, ಮುತ್ತುಕಾಟ್ಟಿಲ್ ಕುಟಿಚ್ಚನ್ ಅವರ ತೆಂಗು, ತಂಗಪ್ಪನ್ ಚೆರಿಯಿಲ್, ಶಾಜಿ ಕಳಪ್ಪುರ, ಜಾರ್ಜ್ ಪಾರಕುಡಿಯಿಲ್ ಅವರ ತೆಂಗು, ಕಂಗು, ಬಾಳೆ ಗಿಡಗಳನ್ನು ಹಾನಿಗೈದಿದೆ. ವಲಿಯ ಪುಂಜದ ಅನಿಲ್ ವರ್ಮ ಅವರ ಕೃಷಿ ಬೆಳೆಗಳನ್ನು ನಾಶ ಮಾಡಿದೆ.
ಬಜಕೂಡ್ಲು: ವಿಷ ಸೇವಿಸಿ ಆತ್ಮಹತ್ಯೆ
ಕುಂಬಳೆ: ಬಸ್ ಚಾಲಕರಾಗಿದ್ದ ಪೆರ್ಲ ಬಜಕೂಡ್ಲು ನಿವಾಸಿ ಗಿರಿಧರ ಪೂಜಾರಿ (56) ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಅಯ್ಯಪ್ಪ ಮಂದಿರದ ಬಳಿ ವಿಷ ಸೇವಿಸಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡು ಬಂದ ಅವರನ್ನು ತತ್ಕ್ಷಣ ಸ್ಥಳೀಯರು ಕಾಸರಗೋಡು ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದರೂ ರಕ್ಷಿಸಲು ಸಾಧ್ಯವಾಗಲಿಲ್ಲ.
ಅಯ್ಯಪ್ಪ ಭಕ್ತರಾಗಿದ್ದ ಇವರು ಹಲವಾರು ವರ್ಷಗಳಿಂದ ಶಬರಿಮಲೆ ಯಾತ್ರೆಗೈಯುತ್ತಿದ್ದು, ಗುರು ಸ್ವಾಮಿಗಳಾಗಿ ಹಲವಾರು ಅಯ್ಯಪ್ಪ ಭಕ್ತರನ್ನು ವರ್ಷಂಪ್ರತಿ ಶಬರಿಮಲೆಗೆ ಕರೆದೊಯ್ಯುತ್ತಿದ್ದರು. ಪೆರ್ಲ ಅಯ್ಯಪ್ಪ ಮಂದಿರದ ಗುರುಸ್ವಾಮಿಯಾಗಿಯೂ, ವಿಶ್ವಹಿಂದೂ ಪರಿಷತ್ ಸಮಿತಿ ಪದಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.
ಟಾಪ್ ನ್ಯೂಸ್
![Bhovi Community ಜು. 20ಕ್ಕೆ ದೀಕ್ಷಾ ರಜತ ಮಹೋತ್ಸವ: ಲಿಂಬಾವಳಿ](https://www.udayavani.com/wp-content/uploads/2024/07/Aravinda-Limbavali-415x247.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Question paper ready 2 hours before NEET-PG exam start?](https://www.udayavani.com/wp-content/uploads/2024/07/Neet-2-150x83.jpg)
NEET-PG ಪರೀಕ್ಷೆ ಆರಂಭಕ್ಕಿಂತ 2 ಗಂಟೆ ಮುಂಚೆ ಪ್ರಶ್ನೆಪತ್ರಿಕೆ ಸಿದ್ಧ?
![Indian Prime Minister visits Austria after 41 years!](https://www.udayavani.com/wp-content/uploads/2024/07/aust-150x83.jpg)
Narendra Modi; 41 ವರ್ಷಗಳ ಬಳಿಕ ಆಸ್ಟ್ರಿಯಾಗೆ ಭಾರತದ ಪ್ರಧಾನಿ ಭೇಟಿ!
![Bhovi Community ಜು. 20ಕ್ಕೆ ದೀಕ್ಷಾ ರಜತ ಮಹೋತ್ಸವ: ಲಿಂಬಾವಳಿ](https://www.udayavani.com/wp-content/uploads/2024/07/Aravinda-Limbavali-150x89.jpg)
Bhovi Community ಜು. 20ಕ್ಕೆ ದೀಕ್ಷಾ ರಜತ ಮಹೋತ್ಸವ: ಲಿಂಬಾವಳಿ
![SEBI issues show cause notice to Hindenburg](https://www.udayavani.com/wp-content/uploads/2024/07/sebi-1-150x83.jpg)
SEBI; ಅದಾನಿ ವಿರುದ್ಧ ಆರೋಪಿಸಿದ್ದ ಹಿಂಡನ್ಬರ್ಗ್ಗೆ ಸೆಬಿ ಶೋಕಾಸ್ ನೋಟಿಸ್
![6-](https://www.udayavani.com/wp-content/uploads/2024/07/6--150x90.jpg)
Govt ವೈಫಲ್ಯದ ಕುರಿತು ವಿಷಯ ಪ್ರಸ್ತಾಪ; ಸರ್ಕಾರಕ್ಕೆ ಪ್ರತಿಪಕ್ಷದ ಶಾಸಕ ವಿಜಯ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.