Kasaragod: ಲಂಚ ಪಡೆದ ಪ್ರಕರಣ: ಫೀಲ್ಡ್‌ ಅಸಿಸ್ಟೆಂಟ್‌ ಬಂಧನ


Team Udayavani, Apr 2, 2024, 1:00 AM IST

Kasaragod: ಲಂಚ ಪಡೆದ ಪ್ರಕರಣ: ಫೀಲ್ಡ್‌ ಅಸಿಸ್ಟೆಂಟ್‌ ಬಂಧನ

ಕಾಸರಗೋಡು: ಭೂಮಿಯ ದಾಖಲು ಪತ್ರ ಸರಿಪಡಿಸಲು ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿ ಅಡೂರು ಗ್ರಾಮ ಕಚೇರಿ ವಿಲೇಜ್‌ ಫೀಲ್ಡ್‌ ಅಸಿಸ್ಟೆಂಟ್‌, ಕಾರಡ್ಕ ಕರ್ಮಂತೋಡಿ ನಿವಾಸಿ ಕೆ. ನಾರಾಯಣನ್‌(47)ನನ್ನು ವಿಜಿಲೆನ್ಸ್‌ ಡಿವೈಎಸ್‌ಪಿ ಪಿ. ಉಣ್ಣಿಕೃಷ್ಣನ್‌ ನೇತೃತ್ವದ ತಂಡ ಬಂಧಿಸಿದೆ.

ನಾರಾಯಣನ್‌ ದೂರುದಾತನಿಂದ ಪಡೆದು ಕಾರಿನಲ್ಲಿರಿಸಿದ್ದ 20 ಸಾವಿರ ರೂ. ವಶಪಡಿಸಿದೆ. ಆದೂರು ಆಲಂತಡ್ಕದ ಪಿ. ರಮೇಶನ್‌ ಅವರಿಂದ ವಿಲೇಜ್‌ ಫೀಲ್ಡ್‌ ಅಸಿಸ್ಟೆಂಟ್‌ ನಾರಾಯಣನ್‌ ಲಂಚ ಪಡೆದಿರುವುದಾಗಿ ದೂರಲಾಗಿದೆ. ರಮೇಶನ್‌ ಅವರ ತರವಾಡು ಮನೆ ಹಾಗು ಕುಟುಂಬ ಕ್ಷೇತ್ರ ಅಡೂರು ವಿಲೇಜ್‌ನ ಪಾಂಡಿವಯಲ್‌ನಲ್ಲಿದೆ. ಅಲ್ಲಿ ಅವರ ತಾಯಿಯ ಚಿಕ್ಕಮ್ಮನ ಪುತ್ರಿ ವಾಸಿಸುತ್ತಿದ್ದಾರೆ. ಅಲ್ಲಿರುವ 54 ಸೆಂಟ್ಸ್‌ ಸ್ಥಳದಲ್ಲಿ ಹಲವು ವರ್ಷಗಳಿಂದಲೂ ವಾಸಿಸುತ್ತಿದ್ದರೂ ಪಟ್ಟಾ ಲಭಿಸಿರಲಿಲ್ಲ. ಇದರಿಂದ 2023ರ ಸೆ. 16ರಂದು ಕಾಸರಗೋಡು ಲ್ಯಾಂಡ್‌ ಟ್ರಿಬ್ಯೂನಲ್‌ಗೆ ಅರ್ಜಿ ಸಲ್ಲಿಸಿದ್ದರು. ಅನಂತರ ಸುಮೋಟೋ ಪ್ರೊಫೋಸಲ್‌ ಸಿದ್ಧಪಡಿಸಲು ಗ್ರಾಮ ಕಚೇರಿಗೆ ಅರ್ಜಿ ಕಳುಹಿಸಲಾಗಿತ್ತು. ಇದಕ್ಕೆ ಸಂಬಂಧಿಸಿ ನಾರಾಯಣನ್‌ ಲಂಚ ಕೇಳಿದ್ದರೆನ್ನಲಾಗಿದೆ.

ಈ ಮಧ್ಯೆ ಕಾಸರಗೋಡು ತಾಲೂಕು ಕಚೇರಿಯಲ್ಲಿ ಚುನಾವಣ ವಿಭಾಗಕ್ಕೆ ವರ್ಗಾವಣೆಗೊಂಡ ನಾರಾಯಣನ್‌ ಹಣದೊಂದಿಗೆ ಅಲ್ಲಿಗೆ ಬರುವಂತೆ ರಮೇಶ್‌ ಅವರಲ್ಲಿ ತಿಳಿಸಿದ್ದರು. ಅದರಂತೆ ತಾಲೂಕು ಕಚೇರಿಗೆ ತಲುಪಿದ ದೂರುಗಾರನನ್ನು ಸೇರಿಸಿಕೊಂಡು ನಾರಾಯಣನ್‌ ತನ್ನ ಕಾರಿನಲ್ಲಿ ಕಲೆಕ್ಟರೇಟ್‌ನ ಲ್ಯಾಂಡ್‌ ಟ್ರಿಬ್ಯೂನಲ್‌ ಕಚೇರಿಗೆ ತೆರಳಿ ಮರಳಿ ಬರುತ್ತಿದ್ದಾಗ ತಾಲೂಕು ಕಚೇರಿಯ ಸಮೀಪದಲ್ಲಿ ನಾರಾಯಣನನ್ನು ಬಂಧಿಸಲಾಗಿದೆ. ಬಳಿಕವಿಜಿಲೆನ್ಸ್‌ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಬೈಕ್‌- ಸರಕಾರಿ ಬಸ್‌ ಢಿಕ್ಕಿ; ವ್ಯಕ್ತಿ ಸಾವು
ಕಾಸರಗೋಡು: ಪಯ್ಯನ್ನೂರು ಪೆರುಂಬದ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ಪರಿಸರದಲ್ಲಿ ಬಸ್‌-ಬೈಕ್‌ ಢಿಕ್ಕಿ ಹೊಡೆದು ನಾಯಮ್ಮಾರಮೂಲೆಯ ಐಟಿಐ ರಸ್ತೆಯ ಹೈದ್ರೋಸ್‌ ಮಂಜಿಲ್‌ನ ಅಬ್ದುಲ್ಲ ಕುಂಞಿ ಅವರ ಪುತ್ರ ಬಶೀರ್‌(57) ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

6

Arrested: ಪತ್ನಿಯ ಕೊ*ಲೆಗೆ ಯತ್ನ; ಪತಿಯ ಬಂಧನ

Kasargod: ಕೊ*ಲೆ ಯತ್ನ: ನಾಲ್ವರ ಬಂಧನ

Kasargod: ಕೊ*ಲೆ ಯತ್ನ: ನಾಲ್ವರ ಬಂಧನ

Arrested: ಹಲವು ಪ್ರಕರಣಗಳ ಆರೋಪಿ ಬಂಧನ

Arrested: ಹಲವು ಪ್ರಕರಣಗಳ ಆರೋಪಿ ಬಂಧನ

Kasargod: ವಿದ್ಯಾರ್ಥಿಗೆ ಹಲ್ಲೆ: ಇಬ್ಬರಿಗೆ ಸಜೆ, ದಂಡ

Kasargod: ವಿದ್ಯಾರ್ಥಿಗೆ ಹಲ್ಲೆ: ಇಬ್ಬರಿಗೆ ಸಜೆ, ದಂಡ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.