ಕಾಸರಗೋಡು ಭಾಗದ ಅಪರಾಧ ಸುದ್ದಿಗಳು


Team Udayavani, Mar 29, 2019, 6:24 AM IST

Crime-n

ಬಾಲಕಿಗೆ ಕಿರುಕುಳ:
ರಿಕ್ಷಾ ಚಾಲಕನ ಬಂಧನ
ಕುಂಬಳೆ: ಮನೆ ಜಗಲಿಯಲ್ಲಿ ಆಟವಾಡುತ್ತಿದ್ದ ಹನ್ನೊಂದರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಉಪ್ಪಳ ಕೈಕಂಬ ನಿವಾಸಿ ರಿಕ್ಷಾ ಚಾಲಕ ಶೆಕ್‌ ಮುಕ್ತಾರ್‌ (44) ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.ಬುಧವಾರ ಸಂಜೆ ಬಾಲಕಿ ಆಟವಾಡುತ್ತಿದ್ದು ಆರೋಪಿ ಕಿರುಕುಳ ನೀಡಿದಾಗ ಬಾಲಕಿ ಬೊಬ್ಬೆ ಹೊಡೆದಳು.ಅಷ್ಟರಲ್ಲಿ ಜನ ಸೇರಿದಾಗ ಈತ ಓಡಿ ಪರಾರಿಯಾಗಿದ್ದ ಈತನನ್ನು ಬಳಿಕ ಪತ್ತೆ ಹಚ್ಚಿ ಬಂಧಿಸಿ ಈತನ ವಿರುದ್ಧ ಫೂಕೊÕ ಕೇಸು ದಾಖಲಿಸಲಾಗಿದೆ.

ವಸತಿ ಗೃಹದಲ್ಲಿ ಮಾದಕ ದ್ರವ್ಯ ದಂಧೆ: ಆರೋಪಿಗಳ ಬಂಧನ
ಕುಂಬಳೆ: ವಸತಿ ಗೃಹದಲ್ಲಿ ತಂಗಿ ಮಾದಕ ದ್ರವ್ಯ ವ್ಯವಹಾರ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಮಾ. 27ರಂದು ಪೆರಿಯ ಸರಕಾರಿ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀಜನ್‌ ಮತ್ತು ಶಹಬಾಸ್‌ ಎಂಬರಿಗೆ ಹೆದ್ದಾರಿ ಯಲ್ಲಿ ಕಾರೊಂದು ಢಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿತ್ತು. ಮಾಹಿತಿ ತಿಳಿದ ಪೊಲೀಸರು ಕಾರನ್ನು ಬೆಂಬತ್ತಿ ನಿಲ್ಲಿಸಿದಾಗ ಕಾರಿನಲ್ಲಿ 5.8 ಗ್ರಾಂ ಹಶಿಶ್‌ ಪತ್ತೆಯಾಯಿತು.ಕಾರಿನಲ್ಲಿದ್ದ ಕಣ್ಣೂರು ಅಳೊಕೋಡಿನ ವಿ.ಎನ್‌. ಸಫಾÌನ್‌ (25) ಎಂಬಾತನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸಿದಾಗ ಪಳ್ಳಿಕರೆಯಲ್ಲಿ ವಸತಿ ಗೃಹ ಒಂದರಲ್ಲಿ ಇನ್ನಿಬ್ಬರು ಮಿತ್ರರೊಂದಿಗೆ ತಂಗಿ ಮಾದಕದ್ರವ್ಯ ಮಾರಾಟ ಮಾಡುವ ದಂಧೆಯ ವಿವರ ತಿಳಿದು ವಸತಿಗೃಹಕ್ಕೆ ತೆರಳಿ ಅಲ್ಲಿ ಶೇಖರಿಸಿಟ್ಟಿದ್ದ 10 ಗ್ರಾಂ.ಹ್ಯಾಶಿಶ್‌ ಆಯಿಲ್‌, ಸಿರಿಂಜ್‌, ಮಾದಕ ಸಿಗರೇಟ್‌ಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಯಿತು.ಬಳಿಕ ಈತನ ಮಿತ್ರರಾದ ಟಿ.ಎ. ಅಶ್ರಫ್‌ (26) ಮತ್ತು ಇಲ್ಯಾಸ್‌ (30 ) ಅವರನ್ನು ಮೇಲ್ಪರಂಬ ಪೊಲೀಸರು ಬಂಧಿಸಿ ಕೇಸು ದಾಖಲಿಸಿರುವರು.

ಹಲ್ಲೆ ಪ್ರಕರಣದ ಆರೋಪಿ ಬಂಧನ
ಕುಂಬಳೆ: ಕಳೆದ 2017 ರ ಹಲ್ಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವಾರಂಟ್‌ ಆರೋಪಿ ಮಂಜೇಶ್ವರ ವಾಮಂಜೂರಿನ ಸೋನಾ ಯಾನೆ ಸೋನಲ್‌ (22) ಎಂಬಾತನನ್ನು ಮಂಜೇಶ್ವರ ಪೊಲೀಸರು Eಬಂಧಿಸಿದ್ದಾರೆ.
ಪ್ರಕರಣದ ಇತರ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

ಕ್ಷೇತ್ರದ ಜಾತ್ರೆಯಲ್ಲಿ ಗಲಭೆ : ಪಾನಮತ್ತ ತಂಡದ ಬಂಧನ
ಕುಂಬಳೆ: ನೆಕ್ರಾಜೆ ಪೈಕ ಪೂಮಾಣಿ ಕಿನ್ನಿಮಾಣಿ ಕೇÒತ್ರದ ವಾರ್ಷಿಕ ಜಾತ್ರೆಯಲ್ಲಿ ಮದ್ಯಪಾನಗೈದು ಗಲಭೆ ನಡೆಸಿದ ನೆಲ್ಲಿಕಟ್ಟೆ ಪೈಕ ನಿವಾಸಿಗಳಾದ ದಾಮೋದರ,
ಗಿರೀಶ್‌, ಸುಧೀಶ್‌, ರಂಜಿತ್‌ ಮತ್ತು ಉಮೇಶ್‌ ಎಂಬವರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.

ಕಸಕ್ಕೆ ಹಚ್ಚಿದ ಬೆಂಕಿ ತಗುಲಿ
ಬಾಲಕನಿಗೆ ಗಾಯ
ಕುಂಬಳೆ: ಸುಟ್ಟ ಗಾಯದೊಂದಿಗೆ ಶಿರಿಬಾಗಿಲು ಸರಕಾರಿ ವಿದ್ಯಾಲಯದ ವಿದ್ಯಾರ್ಥಿ ಜಿಷ್ಣು (7)ವ‌ನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲಾ ಆವರಣದೊಳಗೆ ಕಸಕಡ್ಡಿ ರಾಶಿಗೆ ಬೆಂಕಿ ತಗಲಿದಾಗ ಇದರಿಂದ ಬಾಲಕನಿಗೆ ಬೆಂಕಿ ತಗಲಿರುವುದಾಗಿದೆ.

ಕಾರು -ಬೈಕ್‌ ಢಿಕ್ಕಿ :
ಯುವಕನಿಗೆ ಗಾಯ
ಕುಂಬಳೆ : ಮಂಜೇಶ್ವರ ಪೊಸೋಟು ಎಂಬಲ್ಲಿ ಕಾರು ಮತ್ತು ಬೈಕ್‌ ಢಿಕ್ಕಿ ಹೊಡೆದು ಬೈಕ್‌ ಸವಾರ ಉದ್ಯಾವರ ನಿವಾಸಿ ಮೊಹಮ್ಮದ್‌ ಮೊರಾಸ್‌ (22) ಎಂಬವರು ಗಾಯಗೊಂಡು ಮಂಗಳೂರು ಖಾಸಗೀ ಆಸ್ಪತ್ರೆಯಲ್ಲಿ ದಾಖಲಾಗಿರುವರು.ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಜೀಪ್‌ಬೈಕ್‌ ಢಿಕ್ಕಿ :
ಯುವಕನಿಗೆ ಗಾಯ
ಕುಂಬಳೆ: ರಾಜಪುರದ ಬನ್ನತ್ತಿಕಾನ ಎಂಬಲ್ಲಿ ಬೈಕ್‌ ಮತ್ತು ಜೀಪು ಢಿಕ್ಕಿಯಾಗಿ ಬೈಕ್‌ ಸವಾರ ಚೆಂಗಳ ಕಾನತ್ತಮೂಲೆ ನಿವಾಸಿ ಮಹಮ್ಮದ್‌ ಮುನಾಫ್‌ (24)ಎಂಬವರು ಗಾಯಗೊಂಡು ಮಂಗಳೂರು ಖಾಸಗೀ ಆಸ್ಪತ್ರೆಯಲ್ಲಿ ದಾಖಲಾಗಿರುವರು.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.