![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Sep 2, 2024, 8:43 PM IST
ಇಲೆಕ್ಟ್ರಿಕ್ ಸ್ಕೂಟರ್ ಬೆಂಕಿಗಾಹುತಿ
ಉಪ್ಪಳ: ಮನೆ ಬಳಿ ನಿಲ್ಲಿಸಿದ್ದ ಉಪ್ಪಳ ಪೇಟೆಯ ಮೊಹಮ್ಮದ್ ನಾಸಿರ್ ಅವರ ಇಲೆಕ್ಟ್ರಿಕ್ ಸ್ಕೂಟರ್ ಬೆಂಕಿಗಾಹುತಿಯಾಗಿದೆ.
ಅಗ್ನಿಶಾಮಕ ದಳ ಹಾಗು ಸ್ಥಳೀಯರು ಸೇರಿ ಬೆಂಕಿಯನ್ನು ಆರಿಸಿದರು. ಶಾರ್ಟ್ ಸರ್ಕ್ನೂಟ್ ಬೆಂಕಿ ತಗಲಲು ಕಾರಣವೆಂದು ಶಂಕಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಗಾಮಗಾರಿಗೆ ತಂದಿರಿಸಿದ್ದ 2.75 ಲಕ್ಷ ರೂ. ಸಾಮಗ್ರಿ ಕಳವು : ಇಬ್ಬರ ಬಂಧನ
ಉಪ್ಪಳ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಉಪ್ಪಳದಲ್ಲಿ ತಂದಿರಿಸಿದ ಗುತ್ತಿಗೆ ಕಂಪೆನಿಯ 2.75 ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ನಿವಾಸಿ ಅಮೀರ್ ಭಾಷಾ, ಬೆಂಗಳೂರು ದಾಸರಹಳ್ಳಿ ನಿವಾಸಿ ಪುನೀತ್ ಕುಮಾರ್ನನ್ನು ಮಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಕಾಂಕ್ರೀಟ್ಗೆ ಬಳಸುವ ಐದು ಕ್ರಂಚ್ ಬಾರಿಯರ್ ಮೋಲ್ಡ್ಗಳನ್ನು ಕಳವು ಮಾಡಲಾಗಿತ್ತು. ಆ.31 ರಂದು ಕಳವು ಮಾಡಲಾಗಿತ್ತು. ಗುತ್ತಿಗೆ ಕಂಪೆನಿಯವರು ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿ 24 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ. ನ್ಯಾಯಾಲಯ ಬಂಧಿತರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಉಸಿರಾಟದ ತೊಂದರೆ : ಯುವಕನ ಸಾವು
ಕುಂಬಳೆ: ಉಸಿರಾಟದ ತೊಂದರೆಯಿಂದ ಚಿಕತ್ಸೆ ಪಡೆಯುತ್ತಿದ್ದ ಕುಂಬಳೆ ಬದ್ರಿಯಾ ನಗರದ ಮೊಹಮ್ಮದ್ ಅವರ ಪುತ್ರ ಅಶ್ರಫ್(43) ಸಾವಿಗೀಡಾದರು.
You seem to have an Ad Blocker on.
To continue reading, please turn it off or whitelist Udayavani.