Kasaragod:ಅಪರಾಧ ಸುದ್ದಿಗಳು; ಅಕ್ರಮ ಮೀನುಗಾರಿಕೆ: 3 ಬೋಟ್ಗಳು ವಶಕ್ಕೆ
Team Udayavani, Oct 24, 2024, 8:10 PM IST
ಕಾಸರಗೋಡು: ಕೇರಳದ ಸಮುದ್ರ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ರಾತ್ರಿ ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಕರ್ನಾಟಕದ ಮೂರು ಬೋಟ್ಗಳನ್ನು ಕಾಸರಗೋಡು ಸಮುದ್ರ ಕಿನಾರೆಯಿಂದ ಐದು ನಾಟಿಕಲ್ ದೂರದಿಂದ ವಶಕ್ಕೆ ಪಡೆಯಲಾಗಿದ್ದು, 7 ಲಕ್ಷ ರೂ. ದಂಡ ವಿಧಿಸಲಾಗಿದೆ.
ಅಣಂಗೂರು: ವಿದ್ಯಾರ್ಥಿ ಸಾವು
ಕಾಸರಗೋಡು: ಅಸೌಖ್ಯದಿಂದ ಬಳಲುತ್ತಿದ್ದ ಕಾಸರಗೋಡು ವಿದ್ಯಾನಗರದ ಚಿನ್ಮಯ ವಿದ್ಯಾಲಯದ 8ನೇ ತರಗತಿ ವಿದ್ಯಾರ್ಥಿನಿ, ಅಣಂಗೂರಿನಲ್ಲಿ ವ್ಯಾಪಾರಿಯಾಗಿರುವ ನವೀನ್ ಅವರ ಪುತ್ರಿ ಸಾನ್ವಿ ಎನ್.ಕೆ.(12) ಸಾವಿಗೀಡಾಗಿದ್ದಾಳೆ.
ನಾಲ್ಕು ತಿಂಗಳುಗಳಿಂದ ಆಕೆ ತೀವ್ರ ಅಸೌಖ್ಯದಲ್ಲಿದ್ದರು. ಈಕೆಯ ತಾಯಿ ಸ್ವಾತಿ ಹಾಗೂ ಸಹೋದರ ಸನ್ವಿತ್ ಈ ಹಿಂದೆಯೇ ಸಾವಿಗೀಡಾಗಿದ್ದರು. ಈಗ ಈಕೆಯ ಸಾವಿನ ಮೂಲಕ ಕುಟುಂಬಕ್ಕೆ ದೊಡ್ಡ ಆಘಾತ ಉಂಟಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.