Kasaragod: ಚಿನ್ನ ವ್ಯವಹಾರದಿಂದ ನಷ್ಟ; ಮಧ್ಯವರ್ತಿಗಳನ್ನು ಅಪಹರಿಸಿ ಹಲ್ಲೆ: ಆರು ಮಂದಿ ಬಂಧನ
Team Udayavani, Sep 9, 2024, 8:58 PM IST
ಕಾಸರಗೋಡು: ಹಳೆಯ ಚಿನ್ನ ವ್ಯವಹಾರದಲ್ಲಿ ನಷ್ಟಗೊಂಡ ದ್ವೇಷದಿಂದ 7 ಮಂದಿಯ ತಂಡ ಮಧ್ಯವರ್ತಿಗಳನ್ನು ಅಪಹರಿಸಿ ಪೆರಿಯಾಟಡ್ಕದ ರಹಸ್ಯ ಸ್ಥಳದಲ್ಲಿ ಕೂಡಿ ಹಾಕಿ ಗಂಭೀರ ಹಲ್ಲೆಗೊಳಿಸಿದ ಘಟನೆ ನಡೆದಿದೆ. ವಿಷಯ ತಿಳಿದು ಬೇಕಲ ಪೊಲೀಸರು ಅಲ್ಲಿಗೆ ತೆರಳಿ ಇಬ್ಬರನ್ನು ಅಪಾಯದಿಂದ ಪಾರು ಮಾಡಿ ಆರು ಮಂದಿಯನ್ನು ಬಂಧಿಸಿದ್ದಾರೆ. ಇನ್ನೋರ್ವ ತಲೆಮರೆಸಿಕೊಂಡಿದ್ದಾನೆ.
ನೀಲೇಶ್ವರ ಕೋಟಪ್ಪುರದ ಶರೀಫ್ ಇಡಕ್ಕಾವಿಲ್ (40) ಮತ್ತು ಕೋಟ್ಟಯಂ ಕಾಞಿರಪಳ್ಳಿ 26ನೇ ಮೈಲಿನ ಟಿ.ಎಂ. ಸಜಿ (40) ಅವರನ್ನು ಪೊಲೀಸರು ರಕ್ಷಿಸಿದ್ದಾರೆ. ಪಾಲ್ಘಾಟ್ ಶ್ರೀಕೃಷ್ಣಪುರಂ ಕಲಸಿಯ ವಿ. ಅಜಯ ಕುಮಾರ್ (36), ಪನಯಾಲ್ನ ಕೆ.ಎಚ್. ಸಲ್ಮಾನ್ ಫಾರಿಸ್ (22), ನೆಲ್ಲಿಕಟ್ಟೆ ಗ್ರೀನ್ ನಗರ ಶರ್ಮಿಳಾ ಮಂಜಿಲ್ನ ಹಂಸತ್ತುಲ್ ಕರಾರ್ (23), ನೆಲ್ಲಿಕಟ್ಟೆ ನೆಕ್ರಾಜೆ ಜಿಲಾನಿ ಹೌಸ್ನ ಎ.ಎಚ್. ಮಾಜಿದ್ (23), ನೆಲ್ಲಿಕಟ್ಟೆ ಮಶರಾ ಮಂಜಿಲ್ನ ಎ. ಮೊಹಮ್ಮದ್ ಅಶ್ರಫ್ (26) ಮತ್ತು ಪನಯಾಲ್ ಚಿರುಂಬಾ ರಿಫಾಯಿ ಕ್ವಾರ್ಟರ್ಸ್ನ ಸಿ.ಎಚ್. ಮುಹಮ್ಮದ್ ರಶೀದ್(35)ನನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ನಷ್ಟಗೊಂಡ ಹಣ ಲಭಿಸದಿದ್ದಲ್ಲಿ ಕೊಲೆಗೈಯ್ಯುವುದಾಗಿ ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.