Kasaragod: ವಿವಿಯಿಂದ ಹೆಚ್ಚು ಹಣ ಪಡೆದ ಸೆಕ್ಯೂರಿಟಿ ಸಂಸ್ಥೆ
ಬಡ್ಡಿ ಸಹಿತ ಮರುಪಾವತಿಸಲು ನ್ಯಾಯಾಲಯ ತೀರ್ಪು
Team Udayavani, Aug 14, 2024, 8:08 PM IST
ಕಾಸರಗೋಡು: ಸೆಕ್ಯೂರಿಟಿ ನೌಕರರ ಸಂಖ್ಯೆಯನ್ನು ಹೆಚ್ಚು ತೋರಿಸಿ ಕೇಂದ್ರ ವಿಶ್ವವಿದ್ಯಾನಿಲಯದಿಂದ ಹೆಚ್ಚಿನ ಹಣವನ್ನು ಪಡೆಯುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಮಾತಾ ಸೆಕ್ಯೂರಿಟಿ ಏಜೆನ್ಸಿ ಪಡೆದ ಮೊತ್ತವನ್ನು ಬಡ್ಡಿ ಸಹಿತ ವಾಪಸು ಮಾಡುವಂತೆ ಹೊಸದುರ್ಗ ಸಬ್ ಕೋರ್ಟ್ ತೀರ್ಪು ನೀಡಿದೆ.
ಜತೆಗೆ ವಿಶ್ವವಿದ್ಯಾನಿಲಯವು ಕಾನೂನು ಹೋರಾಟಕ್ಕೆ ಮಾಡಿದ ವೆಚ್ಚವನ್ನು ಏಜೆನ್ಸಿ ಭರಿಸುವಂತೆ ನ್ಯಾಯಾಲಯ ಹೇಳಿದೆ.
2010ರಿಂದ 2015ರ ವರೆಗಿನ ಕಾಲಾವಧಿಯಲ್ಲಿ ಸೇವೆ ಸಲ್ಲಿಸಿದ ಭದ್ರತಾ ನೌಕರರಿಗಿಂತ ಅಧಿಕ ನೌಕರರನ್ನು ತೋರಿಸಿ 40,96,539 ರೂ. ಅನ್ನು ಕೇಂದ್ರ ವಿಶ್ವವಿದ್ಯಾಲಯದಿಂದ ಪಡೆಯಲಾಗಿದೆ ಎಂದು ಮಾತಾ ಸೆಕ್ಯೂರಿಟಿ ಏಜೆನ್ಸಿ ವಿರುದ್ಧ ಕೇಸು ದಾಖಲಿಸಲಾಗಿತ್ತು. ಬಡ್ಡಿ ಸಹಿತ 64,44,947 ರೂ.ಯನ್ನು ಪಾವತಿಸಲು ಆದೇಶಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Goodudeepa Competition: ಪರ್ಯಾಯ ಶ್ರೀಕೃಷ್ಣ ಮಠ… ಗೂಡುದೀಪ ಸ್ಪರ್ಧೆ ಉದ್ಘಾಟನೆ
ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘ: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ
Nayanthara: ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ್ರಾ ಲೇಡಿ ಸೂಪರ್ ಸ್ಟಾರ್?
Threat: ಇಮೇಲ್ ಮೂಲಕ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ… ಪೊಲೀಸ್, ಶ್ವಾನ ದಳ ದೌಡು
Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.