Kerala; ವಿದ್ಯಾರ್ಥಿ ತರಗತಿಗೆ ಬರದಿದ್ದಲ್ಲಿ ತತ್ಕ್ಷಣ ಪೋಷಕರಿಗೆ ಮಾಹಿತಿ
ಶಾಲೆಗಳಿಗೆ ಶಿಕ್ಷಣ ಇಲಾಖೆ ಸೂಚನೆ
Team Udayavani, May 14, 2024, 11:49 PM IST
ಪೆರ್ಲ: ತರಗತಿಗಳು ಆರಂಭಗೊಂಡು ನಿಗದಿತ ಸಮಯದೊಳಗೆ ವಿದ್ಯಾರ್ಥಿಗಳು ಬಾರದೆ ಇದ್ದಲ್ಲಿ ಆ ವಿಷಯವನ್ನು ತತ್ಕ್ಷಣ ಹೆತ್ತವರು/ ಪೋಷಕರಿಗೆ ಕರೆಮಾಡಿ ತಿಳಿಸಬೇಕು ಎಂದು ಕೇರಳ ರಾಜ್ಯ ಸಾರ್ವತ್ರಿಕ ಶಿಕ್ಷಣ ನಿರ್ದೇಶಕರು ಎಲ್ಲ ಶಾಲೆಗಳಿಗೂ ನಿರ್ದೇಶ ನೀಡಿದ್ದಾರೆ.
ಮಕ್ಕಳು ಮನೆಯಿಂದ ಶಾಲೆಗೆಂದು ಹೊರಟು ಬಳಿಕ ಶಾಲೆಗೆ ತಲುಪದಿದ್ದಲ್ಲಿ ಆ ವಿಷಯವನ್ನು ಪೊಲೀಸರಿಗೂ ತಿಳಿಸಬೇಕೆಂದು ನಿರ್ದೇಶಕರು ತಿಳಿಸಿದ್ದಾರೆ. ಶಾಲೆಗಳಲ್ಲಿ ಸ್ಥಿರ ದೂರವಾಣಿ ಸರಿಯಾಗಿ ಕಾರ್ಯವೆಸಗುತ್ತಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಈ ಶೈಕ್ಷಣಿಕ ವರ್ಷ ಪುನರಾರಂಭಗೊಳ್ಳುವ ಮೊದಲು ಮೇ 25ರಿಂದ 30 ರೊಳಗಾಗಿ ಆಯಾ ಜಿಲ್ಲಾ ಶಿಕ್ಷಣಾಧಿಕಾರಿಗಳು ಮತ್ತು ಉಪಶಿಕ್ಷಣಾಧಿಕಾರಿಗಳು ಶಾಲೆಗಳಿಗೆ ನೇರವಾಗಿ ಭೇಟಿ ನೀಡಿ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಬೇಕೆಂದು ನಿರ್ದೇಶಕರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.