ಮಧೂರು : ಮದರು ಮಹಾಮಾತೆಗೆ ಸೂಕ್ತ ಸ್ಥಾನಮಾನ ; ಆಗ್ರಹ


Team Udayavani, Mar 16, 2017, 2:36 PM IST

maddur.jpg

ಮಧೂರು: ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯ ಸ್ಥಳವಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮದರು ಮಹಾಮಾತೆಗೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕೆಂದು ಶ್ರೀ ಮದರು ಮಹಾಮಾತೆ ಮೊಗೇರ ಸಮಿತಿ ಸಭೆಯಲ್ಲಿ ಮೊಗೇರ ಸಮಾಜ ಬಾಂಧವರು ಸಂಬಂಧಪಟ್ಟವರನ್ನು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.

ಕೊಲ್ಯ ಸಮುದಾಯ ಭವನ ಪರಿಸರದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಆನಂದ ಕೆ.ಮವ್ವಾರು ವಹಿಸಿದ್ದರು. 25 ಕೋಟಿ ರೂ. ವೆಚ್ಚದಲ್ಲಿ ಮಧೂರು ದೇವಸ್ಥಾನ ನವೀಕರಣ ನಡೆಯುತ್ತಿದ್ದು, ಅಲ್ಲಿ ಪೂಜಿಸಲ್ಪಡುವ ಶ್ರೀ ಮದನಂತೇಶ್ವರನೊಲಿದ ಮೊಗೇರ ಸಮುದಾಯದ ಮದರು ಮಹಾಮಾತೆ ಯನ್ನು ಸ್ಮರಿಸಲು ಅಥವಾ ಆರಾಧಿಸಲು ಯಾವುದೇ ಯೋಜನೆಗಳನ್ನು ನವೀಕರಣ ಸಮಿತಿ ಕೈಗೊಂಡಿಲ್ಲ. ಈ ಪ್ರಮಾದವನ್ನು ಸರಿಪಡಿಸಿ ಮದರುವಿನ ಆರಾಧನೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮದರುವಿಗೆ ಗುಡಿ ಕಟ್ಟಿ ಪ್ರತಿಮೆ ಸ್ಥಾಪಿಸಬೇಕೆಂದು ಆನಂದ ಕೆ. ಮವ್ವಾರು ಹೇಳಿದರು.

ಈ ಕುರಿತು ಕೇರಳ ಧಾರ್ಮಿಕ ದತ್ತಿ ಖಾತೆಯ ಸಚಿವರಿಗೆ, ಮಲಬಾರ್‌ ದೇವಸ್ವಂ ಮಂಡಳಿ ಅಧ್ಯಕ್ಷರಿಗೆ ಮತ್ತು ಸಂಬಂಧಪಟ್ಟ ಸರ್ವರಿಗೂ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಮೊಗೇರ ಸಮುದಾಯದ ಹಿರಿಯ ವ್ಯಕ್ತಿ, ನಿವೃತ್ತ ತಹಶೀಲ್ದಾರ್‌ ಸಿ.ಎಚ್‌.ಶ್ಯಾಮ್‌ ಚೇನೆಕ್ಕೋಡು ಸಭೆಯನ್ನು ಉದ್ಘಾಟಿಸಿದರು. ಮೂರು ದಶಕಗಳ ಹಿಂದೆ ಮದರು ಆರಾಧನಾ ಸಮಿತಿಯ ನೇತೃತ್ವದಲ್ಲಿ ಮೊಗೇರ ಬಾಂಧವರು ಆಳೆತ್ತರದ ಎರಡು ನಂದಾದೀಪಗಳನ್ನು ಶ್ರೀ ಮದನಂತೇಶ್ವರನ ಮೂಲಸ್ಥಾನ ಉಳಿಯತ್ತಡ್ಕದಿಂದ ಮೆರವಣಿಗೆಯ ಮೂಲಕ ತಂದು ಮಧೂರು ದೇವಸ್ಥಾನ ದಲ್ಲಿ ಪ್ರತಿಷ್ಠಾಪಿಸಿದ ಸ್ಮರಣೀಯ ಘಟನೆಯನ್ನು ಅವರು ಪ್ರಸ್ತಾಪಿಸಿದರು.
ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಪ್ರಾಸ್ತಾವಿಕ ಮಾತು ಗಳನ್ನಾಡಿ ಮಧೂರು ದೇಗುಲ ನಿರ್ಮಾಣಕ್ಕೆ ಕಾರಣೀಭೂತಳಾದ ಮದರುವಿನ ಕುರಿತಾದ ದಾಖಲೆಗಳನ್ನು ಸಭೆಯ ಮುಂದಿರಿಸಿದರು.

ಸಾಮಾಜಿಕ, ಧಾರ್ಮಿಕ ಮುಖಂಡ ರಾಮಪ್ಪ ಮಂಜೇಶ್ವರ, ಕುಂಬಳೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್‌, ವಿವಿಧ ಕ್ಷೇತ್ರಗಳ ಗಣ್ಯರಾದ ಗಣೇಶ್‌ ಮಜಕ್ಕಾರ್‌, ಕೃಷ್ಣದಾಸ್‌ ದರ್ಬೆತ್ತಡ್ಕ, ಲಕ್ಷ್ಮಣ ಪೆರಿಯಡ್ಕ, ನಿಟ್ಟೋಣಿ ಬಂದ್ಯೋಡು, ಅಂಗಾರ ಅಜಕ್ಕೋಡು, ರವಿಕಾಂತ ಕೇಸರಿ ಕಡಾರು, ಸುರೇಶ್‌ ಕಾಳ್ಯಂಗಾಡು, ಶಂಕರ ಕೊಲ್ಯ, ಚಂದ್ರಶೇಖರ ಕುಂಬಳೆ, ವಸಂತ ಅಜಕ್ಕೋಡು, ಗಂಗಾಧರ ಗೋಳಿಯಡ್ಕ, ಕೃಷ್ಣ ಧರ್ಮೆತ್ತಡ್ಕ, ತುಕ್ರ ಬಂದ್ಯೋಡು, ಸುಂದರ ಕೊಲ್ಯ, ಪದ್ಮನಾಭ ಸಿ.ಎಚ್‌, ಧರ್ಮಪಾಲ ಸಿ.ಎಚ್‌., ಐತ್ತಪ್ಪ ಚೆನ್ನೆಗುಳಿ, ಬಾಬು ಬಂದ್ಯೋಡು, ಶಂಕರ ಎಂ.ಎಸ್‌, ಸದಾನಂದ ಶೇಣಿ, ರಾಮ ಪಟ್ಟಾಜೆ, ಶಂಕರ ಸ್ವಾಮಿಕೃಪಾ, ಉದಯ ಸಾರಂಗ, ಹರಿರಾಮ ಕುಳೂರು, ಜೀವನ್‌ ಚೇನಕ್ಕೋಡು, ಗುರುಪ್ರಸಾದ್‌ ಸಿ.ಎಚ್‌., ಸುಧಾಕರ ಬೆಳ್ಳಿಗೆ ಸಹಿತ ಹಲವರು ಅಭಿಪ್ರಾಯ ಮಂಡಿಸಿದರು.
ಜಿಲ್ಲೆಯ ವಿವಿಧೆಡೆಗಳ ಮೊಗೇರ ಬಾಂಧವರು ಆಗಮಿಸಿ ಶ್ರೀ ಮದರು ಮಹಾಮಾತೆ ಮೊಗೇರ ಸಮಿತಿಯ ಸದುದ್ದೇಶಕ್ಕೆ ಬೆಂಬಲ ವ್ಯಕ್ತಪಡಿಸಿದರು. ಸುಂದರಿ ಅವರು ಪ್ರಾರ್ಥನೆ ಹಾಡಿದರು. ಸುಜಿತ್‌ ಕೊಲ್ಯ ಸ್ವಾಗತಿಸಿದರು. ಸಮಿತಿ ಕೋಶಾಧಿಕಾರಿ ಗೋಪಾಲ ಡಿ. ದರ್ಬೆತ್ತಡ್ಕ ವಂದಿಸಿದರು.

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

04

Kasaragod: ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ

0023

Kasargod: ಅಪಹರಿಸಿ ಹಲ್ಲೆ ಪ್ರಕರಣ: ಬಂಧನ

Election: ಬಿಜೆಪಿ, ಜೆಡಿಎಸ್‌ ಜತೆಯಾಗಿ ಸ್ಪರ್ಧೆ: ಸಾ.ರಾ. ಮಹೇಶ್‌

Election: ಬಿಜೆಪಿ, ಜೆಡಿಎಸ್‌ ಜತೆಯಾಗಿ ಸ್ಪರ್ಧೆ: ಸಾ.ರಾ. ಮಹೇಶ್‌

man-a

Kumble: ಕಾರು ಅಪಘಾತ; ಗಾಯಾಳು ಮಹಿಳೆ ಸಾವು

12

Madikeri: 2022ರಲ್ಲಿ ನಡೆದ ಮಹಿಳೆಯ ಹತ್ಯೆ: ಪೊಲೀಸರಿಂದ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.