ಕಡಲಬ್ಬರ : ಕಣ್ವತೀರ್ಥ, ಮುಸೋಡಿ ಅಧಿಕದಲ್ಲಿ 3 ಕುಟುಂಬಗಳ ಸ್ಥಳಾಂತರ


Team Udayavani, Apr 24, 2018, 6:25 AM IST

23ksde9.jpg

ಕಾಸರಗೋಡು: ಮಳೆಗಾಲಕ್ಕೆ ಮುನ್ನವೇ ಸಮುದ್ರದಲ್ಲಿ ತೀವ್ರ ಗಾತ್ರದ ಅಬ್ಬರದ ತೆರೆಗಳು ದಡಕ್ಕೆ ಅಪ್ಪಳಿಸುತ್ತಿರುವ ಹಿನ್ನೆಲೆಯಲ್ಲಿ ಕಣ್ವತೀರ್ಥ, ಮುಸೋಡಿ ಅಧಿಕದಲ್ಲಿ ಮೂರು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 

ಕೆಲವು ತಿಂಗಳ ಹಿಂದೆ ವ್ಯಾಪಕ ಕಡಲ್ಕೊರೆತದಿಂದ ಮುಸೋಡಿ ಅಧಿಕ ಮತ್ತು ಪರಿಸರದಲ್ಲಿ 9 ಮನೆಗಳು ಸಂಪೂರ್ಣ ಸಮುದ್ರ ಪಾಲಾಗಿತ್ತು. ಇದೀಗ ಮತ್ತೆ ಮೂರು ಮನೆಗಳು ಈ ಪ್ರದೇಶದಲ್ಲಿ ಸಮುದ್ರ ಪಾಲಾಗುವ ಭೀತಿಯುಂಟಾಗಿದೆ.

ಕಡಲಬ್ಬರದಿಂದ ಎರ್ಮಾಳ, ಮರಿಯ, ಮೊಹಮ್ಮದ್‌ ಅವರ ಮನೆ ಹಾಗೂ ಪರಿಸರದ ಮಸೀದಿ ಸುತ್ತು ನೀರು ತುಂಬಿಕೊಂಡಿದೆ. ಮನೆಗಳು ಯಾವುದೇ ಕ್ಷಣದಲ್ಲಿ ಸಮುದ್ರ ಪಾಲಾಗುವ ಸ್ಥಿತಿಯಲ್ಲಿದೆ. ಇಲ್ಲಿನ ಕುಟುಂಬಗಳು ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.

ಮುಸೋಡಿ ಅಧಿಕದಲ್ಲಿ ಸುಮಾರು 500 ಮೀಟರ್‌ ಕಡಲ್ಕೊರೆತ ವ್ಯಾಪಿಸಿದೆ. ಘಟನೆ ಸ್ಥಳಕ್ಕೆ ಕಾಸರ ಗೋಡು ಡಿವೈಎಸ್‌ಪಿ ಸುಕುಮಾರನ್‌, ಮಂಜೇಶ್ವರ ಪೊಲೀಸರು, ತಹಶೀಲ್ದಾರ್‌, ಉಪ್ಪಳ ಗ್ರಾಮಾಧಿಕಾರಿಗಳು, ಮಂಗಲ್ಪಾಡಿ ಪಂಚಾಯತ್‌ ಅಧ್ಯಕ್ಷ ಶಾಹುಲ್‌ ಹಮೀದ್‌, ಉಪಾಧ್ಯಕ್ಷೆ ಜಮೀಲಾ, ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ಸಫ, ರಜಾಕ್‌,ಹ್ಯಾರೀಸ್‌, ಸದಸ್ಯರಾದ ಬಾಲಕೃಷ್ಣ ಅಂಬಾರು, ಮಂಜು ನಾಥ, ಪ್ರಸಾದ ರೈ, ಫಾತಿಮಾ  ಮೊದಲಾದವರು ಭೇಟಿ ನೀಡಿದರು. 

ಈ ಪರಿಸರದಲ್ಲಿ 2017 ಜುಲೈ ತಿಂಗಳಲ್ಲಿ ಉಂಟಾದ ಕಡಲುಬ್ಬರದಿಂದ ಅಬ್ದುಲ್‌ ಖಾದರ್‌, ಮೊದೀನ್‌ ಕುಂಞಿ, ಹಮೀದ್‌, ಹಸನಬ್ಬ, ಇಬ್ರಾಹಿಂ,ನೆಬೀಸ, ಅಶ್ರಫ, ಹನೀಫ ಮೊದೀನ್‌ ಮೊದಲಾದವರು ಮನೆಗಳು ಹಾಗೂ ಹಲವಾರು ತೆಂಗಿನ ಮರಗಳು ಸಮುದ್ರ ಪಾಲಾಗಿತ್ತು.ಕಣ್ವತೀರ್ಥದಲ್ಲಿ ಕಡಲುಬ್ಬರ ತೀವ್ರತೆ ಪಡೆದಿದ್ದು,ಸಮುದ್ರ ತೆರೆಗಳು ಆಳೆತ್ತರಕ್ಕೇರುತ್ತಿದೆ. ಆದರೆ ಇಲ್ಲಿ ಎತ್ತರದಲ್ಲಿ ರಸ್ತೆಯಿರುವುದರಿಂದ ಅಲ್ಲಿಯ ವರೆಗೆ ನೀರು ತಲುಪಿಲ್ಲ. ಕಾಸರಗೋಡು ಜಿಲ್ಲೆಯ ವಿವಿಧೆಡೆ ಕಡಲುಬ್ಬರ ಕಂಡು ಬಂದಿದ್ದು, ಸಮುದ್ರ ತೀರ ಪರಿಸರದ ನಿವಾಸಿಗಳನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಕಾಸರಗೋಡು ಜಿಲ್ಲೆಯ ವಿವಿಧೆಡೆ ಸುಮಾರು 20 ಅಡಿಯಷ್ಟು ಎತ್ತರದಲ್ಲಿ ಅಲೆಗಳು ತಲೆಯೆತ್ತಿವೆ ಮಂಜೇಶ್ವರ, ಮೂಸೋಡಿ,ಮೊಗ್ರಾಲ್‌, ತೃಕ್ಕನ್ನಾಡ್‌, ಅಜಾನೂರು, ಚಿತ್ತಾರಿ, ಚೆರ್ವತ್ತೂರು,   ಪರಂದನ್‌ಕಾಡ್‌ ಮೊದಲಾದೆಡೆ ಗಳಲ್ಲಿ ಕಡಲಬ್ಬರ ಕಂಡು ಬಂದಿದೆ.

ಸಮುದ್ರ ಕಿನಾರೆಯಲ್ಲಿ ನಿಲ್ಲಿಸಲಾಗಿದ್ದ ಮೀನುಗಾರಿಕಾ ದೋಣಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. ಕೋಟಿಕುಳಂನಿಂದ ಆರಂಭಗೊಂಡು ತೃಕ್ಕನ್ನಾಡ್‌ ತನಕದ ಸಮುದ್ರದಲ್ಲಿ 20 ಅಡಿಗಿಂತಲೂ ಹೆಚ್ಚಿನ ಎತ್ತರದಲ್ಲಿ ಅಲೆಗಳು ಗೊಚರಿಸಿದ್ದು, ಹಲವು ಮನೆಗಳಿಗೂ ನುಗ್ಗಿದೆ. ಕಡಲಬ್ಬರ ಉಂಟಾಗಿರುವ ಹಿನ್ನೆಲೆಯಲ್ಲಿ ಮೀನುಗಾರಿಕಾ ಇಲಾಖೆ, ಕರಾವಳಿ ಪೊಲೀಸರು, ಕಂದಾಯ ಇಲಾಖೆ, ದುರಂತ ನಿವಾರಣಾ ಪಡೆಯವರೂ ರಕ್ಷಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಎಲ್ಲ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರನ್ನು ನಿಯಂತ್ರಿಸಲಾಗುತ್ತಿದೆ.

ಜಾಗ್ರತೆಗೆ ಕರೆ 
ಸಮುದ್ರ ಪ್ರಕ್ಷುಬ್ಧಗೊಂಡಿರುವ ಹಿನ್ನೆಲೆಯಲ್ಲಿ ಜಾಗ್ರತೆ ವಹಿಸಬೇಕೆಂದು ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ. ಚಿತ್ತಾರಿ,
ಚೆರ್ವತ್ತೂರು, ವಲಿಯತುರ, ಪಳ್ಳಿಕ್ಕೆರೆ, ತೃಕ್ಕನ್ನಾಡ್‌, ಉಪ್ಪಳ ಮೊದಲಾದೆಡೆಗಳಲ್ಲಿ ಜಾಗ್ರತೆ ವಹಿಸಬೇಕೆಂದು ನಿರ್ದೇಶಿಸಲಾಗಿದೆ.

ಟಾಪ್ ನ್ಯೂಸ್

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Drug ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು; ಬೆಂಗಳೂರು,ಮಂಗಳೂರಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಳ

Karnataka Govt.,; ಡ್ರಗ್‌ ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Court-Symbol

Kasaragodu: ಶಿಕ್ಷಕಿ ಆತ್ಮಹತ್ಯೆ: ಪತಿಗೆ 9 ವರ್ಷ, ಅತ್ತೆಗೆ 7 ವರ್ಷ ಕಠಿನ ಜೈಲು ಶಿಕ್ಷೆ

Kasaragod crime news

Kasaragod ಅಪರಾಧ ಸುದ್ದಿಗಳು

Kasaragod: ಹಾರೆಯಿಂದ ಹೊಡೆದು ತಾಯಿಯ ಕೊಲೆ; ಬಂಧನ

Kasaragod: ಹಾರೆಯಿಂದ ಹೊಡೆದು ತಾಯಿಯ ಕೊಲೆ; ಬಂಧನ

1-dde

Edneer ಶ್ರೀ ಚಾತುರ್ಮಾಸ್ಯ; ಪದಯಾನ ತಂಡದ ಭರತನಾಟ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Drug ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು; ಬೆಂಗಳೂರು,ಮಂಗಳೂರಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಳ

Karnataka Govt.,; ಡ್ರಗ್‌ ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.