![Nirmala-Budget](https://www.udayavani.com/wp-content/uploads/2024/07/Nirmala-Budget-415x249.jpg)
Mulleria: 4.76 ಕೋಟಿ ರೂ. ವಂಚನೆ ಪ್ರಕರಣ; ಆರೋಪಿ ಬೆಂಗಳೂರಿನಲ್ಲಿರುವ ಶಂಕೆ
ಆರೋಪಿ ಪತ್ತೆ ಪೊಲೀಸರು ಬೆಂಗಳೂರಿಗೆ
Team Udayavani, May 15, 2024, 7:15 AM IST
![23-mulleria](https://www.udayavani.com/wp-content/uploads/2024/05/23-mulleria-620x372.jpg)
ಮುಳ್ಳೇರಿಯ: ಸದಸ್ಯರಿಗೆ ತಿಳಿಯದೆ ಅವರ ಹೆಸರಿನಲ್ಲಿ 4.76 ಕೋಟಿ ರೂ. ಗಳ ಚಿನ್ನಾಭರಣ ಸಾಲ ತೆಗೆದು ತಲೆಮರೆಸಿಕೊಂಡ ಸಹಕಾರಿ ಸಂಸ್ಥೆಯ ಕಾರ್ಯದರ್ಶಿ, ಸಿಪಿಎಂ ಲೋಕಲ್ ಸಮಿತಿ ಸದಸ್ಯ ಬೆಂಗಳೂರಿನಲ್ಲಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ.
ಆರೋಪಿಯನ್ನು ಪತ್ತೆಹಚ್ಚಲು ಆದೂರು ಪೊಲೀಸರು ಶೀಘ್ರ ಬೆಂಗಳೂರಿಗೆ ತೆರಳಲಿದ್ದಾರೆ.
ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೆರ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಬೆಳ್ಳೂರು ಕಿನ್ನಿಂಗಾರಿನ ಸೂಫಿ ನೀಡಿದ ದೂರಿನಂತೆ ಕರ್ಮಂತೋಡಿ ನಿವಾಸಿ, ಸಿಪಿಎಂ ಮುಳ್ಳೇರಿಯ ಲೋಕಲ್ ಸಮಿತಿ ಸದಸ್ಯ ಕೆ. ರತೀಶ್ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ. ಇಲಾಖೆ ಮಟ್ಟದ ಪರಿಶೀಲನೆಯಲ್ಲಿ ಕೋಟ್ಯಂತರ ರೂ. ಗಳ ವಂಚನೆ ನಡೆದಿರುವುದು ಪತ್ತೆಹಚ್ಚಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ 4,75,99,907 ರೂ. ವಂಚನೆ ಪತ್ತೆಹಚ್ಚಲಾಗಿದೆ. ಜನವರಿ ತಿಂಗಳಿಂದ ಹಲವು ಬಾರಿ ಅಡವು ಚಿನ್ನ ಇಲ್ಲದೆ 7 ಲಕ್ಷ ರೂ. ವರೆಗೆ ಪ್ರತೀ ಸದಸ್ಯನ ಹೆಸರಲ್ಲಿ ಸಾಲ ತೆಗೆಯಲಾಗಿದೆ. ಈ ವಿಷಯ ಅರಿವಿಗೆ ಬಂದ ಹಿನ್ನೆಲೆಯಲ್ಲಿ ಆಡಳಿತ ಸಮಿತಿಗೆ ತಿಳಿಸಿದ್ದು, ಬಳಿಕ ಪೊಲೀಸರಿಗೆ ದೂರು ನೀಡಲು ನಿರ್ದೇಶಿಸಲಾಯಿತು. ಇದೇ ವೇಳೆ ಒಂದು ವಾರದೊಳಗೆ ಹಣವನ್ನು ಮರಳಿ ಪಾವತಿಸುವುದಾಗಿ ರತೀಶ್ ಕೆಲವರಲ್ಲಿ ತಿಳಿಸಿದ್ದಾನೆನ್ನಲಾಗಿದೆ. ಆದರೆ ಅಧ್ಯಕ್ಷರು ದೂರು ನೀಡಿದ ಬೆನ್ನಲ್ಲೇ ಕಾರ್ಯದರ್ಶಿಯಾದ ರತೀಶ್ ಊರಿನಿಂದ ತಲೆಮರೆಸಿಕೊಂಡಿದ್ದಾನೆ.
ಸೈಬರ್ ಸೆಲ್ನ ಸಹಾಯದೊಂದಿಗೆ ನಡೆಸಿದ ತನಿಖೆಯಲ್ಲಿ ರತೀಶ್ ಬೆಂಗಳೂರಿನಲ್ಲಿರುವುದಾಗಿ ತಿಳಿದು ಬಂದಿದೆ. ಈ ಪ್ರಕರಣವನ್ನು ಕೂಡಲೇ ಕ್ರೈಂ ಬ್ರ್ಯಾಂಚ್ಗೆ ಹಸ್ತಾಂತರಿಸಲಾಗುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
![Nirmala-Budget](https://www.udayavani.com/wp-content/uploads/2024/07/Nirmala-Budget-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Nirmala-Budget](https://www.udayavani.com/wp-content/uploads/2024/07/Nirmala-Budget-150x90.jpg)
Union Budget: ಜು.22ರಿಂದ ಕೇಂದ್ರ ಬಜೆಟ್ ಅಧಿವೇಶನ ಆರಂಭ
![1-ewewqe](https://www.udayavani.com/wp-content/uploads/2024/07/1-ewewqe-150x85.jpg)
Koratagere; ಬಸ್ ಗಳ ಸಮಸ್ಯೆ: ಅಳಲು ತೋಡಿಕೊಂಡ ವಿದ್ಯಾರ್ಥಿಗಳು
![SS Rajamouli: ಡಾಕ್ಯುಮೆಂಟರಿಯಾಗಿ ಓಟಿಟಿಗೆ ಬರಲಿದೆ ರಾಜಮೌಳಿ ಸಿನಿಮಾ ಸಾಹಸಗಾಥೆ](https://www.udayavani.com/wp-content/uploads/2024/07/2-4-150x90.jpg)
SS Rajamouli: ಡಾಕ್ಯುಮೆಂಟರಿಯಾಗಿ ಓಟಿಟಿಗೆ ಬರಲಿದೆ ರಾಜಮೌಳಿ ಸಿನಿಮಾ ಸಾಹಸಗಾಥೆ
![ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ತಜ್ಞರ ಹುದ್ದೆ ಭರ್ತಿಗೆ ಶೀಘ್ರ ಕ್ರಮ: ದಿನೇಶ್ ಗುಂಡೂರಾವ್](https://www.udayavani.com/wp-content/uploads/2024/07/dinesh-150x84.jpg)
ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ತಜ್ಞರ ಹುದ್ದೆ ಭರ್ತಿಗೆ ಶೀಘ್ರ ಕ್ರಮ: ದಿನೇಶ್ ಗುಂಡೂರಾವ್
![rahul gandhi (2)](https://www.udayavani.com/wp-content/uploads/2024/07/rahul-gandhi-2-1-150x90.jpg)
Congress ಅಯೋಧ್ಯೆಯಲ್ಲಿ ಮಾಡಿದಂತೆ ಗುಜರಾತ್ ನಲ್ಲೂ ಬಿಜೆಪಿಗೆ ಸೋಲುಣಿಸಲಿದೆ: ರಾಹುಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.