ಭಕ್ತರಿಂದ, ಭಕ್ತರಿಗಾಗಿ, ಭಕ್ತರಿಗೋಸ್ಕರ


Team Udayavani, Apr 18, 2018, 7:30 AM IST

bayar-(1).jpg

ಬಾಯಾರು ಗ್ರಾಮದ ಬಳ್ಳೂರು ಕೂರಡ್ಕದಲ್ಲಿ ಶ್ರೀ ಪರಾಶಕ್ತಿ ಮಹಾ ಕಾಲಭೈರವೇಶ್ವರ ಕ್ಷೇತ್ರ ಭಕ್ತರ ಕರಸೇವೆಯ ಮೂಲಕ ನಿರ್ಮಾಣಗೊಂಡು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ.ದೇವಾಲಯಕ್ಕೆ ಸಂಬಂಧಿಸಿ ಯಾವುದೇ ಸಮಿತಿಗಳಿಲ್ಲದೆ, ಯಾರಲ್ಲೂ ಏನನ್ನೂ ಯಾಚಿಸದೆ, ಊರ-ಪರವೂರ ಭಕ್ತರು ಸನ್ನಿಧಾನಕ್ಕೆ ಬಂದಾಗ ಸ್ವಯಂಪ್ರೇರಣೆಯಿಂದ ನೀಡಿದ ಕಾಣಿಕೆ ಮತ್ತು ಕರಸೇವೆಯ ಮೂಲಕವೇ ಈ ದೇಗುಲ ನಿರ್ಮಾಣಗೊಂಡಿದೆ.

ಹದಿನೆಂಟು ವರುಷದ ಸುದೀರ್ಘ‌ ಪಯಣದ ಮೂಲಕ ಹಂತ ಹಂತವಾಗಿ ಮೇಲೆದ್ದು ನಿಂತ ದೇಗುಲವಿದು. 2001ರಲ್ಲಿ  ಗುರು ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿ ಪ್ರಥಮ ಬಾರಿಗೆ ಈ ಪ್ರದೇಶಕ್ಕೆ ಆಗಮಿಸಿದ ಸಂದರ್ಭದಲ್ಲಿ ಭಕ್ತರು ಕರಸೇವೆಯ ಮೂಲಕ ಗುಡ್ಡವನ್ನು ಕೊರೆದು ಮಂದಿರ‌ ತನಕದ ಒಂದು ಕಿಲೋಮೀಟರ್‌ ಉದ್ದದ ರಸ್ತೆಯನ್ನು ಒಂದೇ ತಿಂಗಳಿನಲ್ಲಿ ನಿರ್ಮಿಸಿದ್ದರು.

ದೇಗುಲದ ಇದಿರು ಅನತಿ ದೂರದಲ್ಲಿ ಎಂದಿಗೂ ಬತ್ತದ ಪುಷ್ಕರಿಣಿಯೊಂದಿದೆ. ಅದು ಗಂಗಾ, ಕಾವೇರಿ, ಸರಸ್ವತಿ ನದಿಗಳು ಅಂತರ್ಗತವಾಗಿ ಹರಿದು ಸಂಗಮಿಸುವ ತೀರ್ಥಭೂಮಿ ಎಂದು ಪ್ರಶ್ನೆಯಲ್ಲಿ ಕಂಡು ಬಂದ ಚಿಂತನ. ಕೇರಳ ಶೈಲಿಯಲ್ಲಿ ಕೆಂಪು ಕಲ್ಲಿನ ಕೆತ್ತನೆಗಳೊಂದಿಗೆ, ಒಂಬತ್ತು ಸುತ್ತಿನ ಮೆಟ್ಟಿಲುಗಳ ವಿನ್ಯಾಸದೊಂದಿಗೆ ನಿರ್ಮಿತವಾದ ಈ ಪುಷ್ಕರಿಣಿಗೆ ಯಾವುದೇ ಎಂಜಿನಿಯರ್‌ಗಳ ಮಾರ್ಗ ದರ್ಶನವಿಲ್ಲ. ಗುರುವಿನ ಕಲ್ಪನೆಯಂತೆ ಸಾಮಾನ್ಯ ಕೆಲಸಗಾರರ ಮೂಲಕ ಕರಸೇವೆಯಿಂದಲೇ ಮೂವತ್ತು ದಿನ ಗಳಲ್ಲಿ ಈ ಪುಷ್ಕರಿಣಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ.
 
ಪ್ರಕೃತಿದತ್ತ‌ ಷಡಾಧಾರವೇ ಇರುವುದರಿಂದ ಷಡಾಧಾರ ಪ್ರತಿಷ್ಠೆಯನ್ನು ಇಲ್ಲಿ ಮಾಡಲಾಗಿಲ್ಲ. ಶ್ರೀ ಪರಾಶಕ್ತಿಯ ಜತೆಗೆ ಗಣಪತಿ ಮತ್ತು ಕಾಲಭೈರವೇಶ್ವರರು ಇಲ್ಲಿ ಪೂಜೆಗೊಳ್ಳುತ್ತಾರೆ. ಮೂಲ ಗುರು ಮಚ್ಛೇಂದ್ರನಾಥರ ಗುರುಪೀಠವನ್ನು ಸ್ಥಾಪಿಸಲಾಗಿದೆ. ಪುರಾತನ ಕಾಲದ ವಿಶಾಲವಾದ ಬಕುಳ ಪುಷ್ಪದ ಮರ ವೊಂದಿದ್ದು ಅದರ ಬುಡದಲ್ಲಿ ಹುತ್ತವಿದೆ. ಅದರಲ್ಲಿ ನವನಾಗರ ಸಾನ್ನಿಧ್ಯವಿದೆ ಎಂದು ಪ್ರಶ್ನೆಯಲ್ಲಿ   ಕಂಡು  ಬಂದಿದ್ದು ಆ ಜಾಗವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಅಲ್ಲಿಗೆ ಅರ್ಚಕ ರಿಗೂ ಪ್ರವೇಶವಿಲ್ಲ. ಬಳಿಯಲ್ಲೇ ನಾಗ ಪ್ರತಿಷ್ಠೆಯನ್ನು ಮಾಡಲಾಗಿದೆ. ಶೈವ, ವೈಷ್ಣವ, ಶಾಕ್ತೇಯ ಈ ಮೂರು ಮುಖ್ಯ ಸನಾತನ ಧಾರೆಗಳು ಒಟ್ಟಾಗಿರುವ ವಿಶೇಷ ಈ ದೇಗುಲದ್ದು. ಕರ್ಗಲ್ಲಿನಿಂದ ಮತ್ತು ಸುಂದರ ಕೆತ್ತನೆಗಳಿಂದ ಕೂಡಿದ ಈ ದೇಗುಲಕ್ಕೆ ತಗುಲಿದ ಖರ್ಚು ಸುಮಾರು 1.50 ಕೋಟಿ ರೂ.ಗೂ ಹೆಚ್ಚು.

ಕ್ಷೇತ್ರದ ಹಿನ್ನೆಲೆ
ಸುಮಾರು ಹದಿನೆಂಟು ವರುಷಗಳ ಹಿಂದೆ ಇಲ್ಲಿ ಪ್ರಾಕೃತಿಕವಾದ ಬನವೊಂದಿತ್ತು. ಅಲ್ಲಿ ಕಿರಾತೇಶ್ವರನ ಸಾನ್ನಿಧ್ಯವಿತ್ತು ಮತ್ತು ಊರವರ ಸಮ್ಮುಖದಲ್ಲಿ ಪದಕಣ್ಣಾಯ ಮನೆತನದವರಿಂದ ವರುಷಕ್ಕೆ ಒಂದಾವರ್ತಿ ಶಿವಾರ್ಚನೆ ನಡೆಯುತ್ತಿತ್ತು. ಈ ಬನದ ಸುತ್ತಲೂ ಸಾಮಾನ್ಯ ವರ್ಗದ ಜನರ ಮನೆಗಳಿದ್ದವು. ಅವರ್ಯಾರೂ ನೆಮ್ಮದಿಯಿಂದ ಇರಲಿಲ್ಲ. 

ಮರಕಡದ ಶ್ರೀ ಗುರುಪರಾಶಕ್ತಿ ಮಠದ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮಿ ಅವರ ಬಳಿಗೆ ತೆರಳಿ ತಮ್ಮ ಬದುಕಿನ ಸಂಕಟಗಳನ್ನು ನಿವೇದಿಸಿ ಕೊಂಡರು. ಅಂತರ್‌ದೃಷ್ಟಿಯಿಂದ ವಿಚಾರವನ್ನು ಮನನ ಮಾಡಿಕೊಂಡ ಸ್ವಾಮೀಜಿ, ತಾಂಬೂಲ ಪ್ರಶ್ನೆಯನ್ನು ಇಟ್ಟು ಉತ್ತರವನ್ನು ಪಡೆಯಲು ಸೂಚಿಸಿದರು. ಅಂತೆಯೇ 2001ರ ಎಪ್ರಿಲ್‌ನಲ್ಲಿ   ತಾಂಬೂಲ  ಪ್ರಶ್ನೆಯನ್ನು ಇಡಲಾಗಿ ಅಲ್ಲೊಂದು ದೇಗುಲವಿತ್ತು ಎನ್ನುವ ಸೂಚನೆ ಸಿಕ್ಕಿತು. ನಿರಂತರ ನಾಮಾರ್ಚನೆ ಮತ್ತು ಸಾಮೂಹಿಕ ಪ್ರಾರ್ಥನೆಯ ಮೂಲಕ ಸಾನ್ನಿಧ್ಯವನ್ನು ಉದ್ದೀಪನಗೊಳಿಸಬೇಕು. ಜತೆಗೆ ಅಷ್ಟಮಂಗಲ ಪ್ರಶ್ನೆಯ ಮೂಲಕ ದೇಗುಲದ ನಿಖರ ಸ್ಥಳ ಮಾಹಿತಿಯನ್ನು ತಿಳಿಯಬೇಕೆಂಬ ವಿಚಾರ ತಿಳಿದು ಬಂತು. 

ಪ್ರಾಕೃತಿಕ ವೈಪರೀತ್ಯಗಳಿಗೆ ಈಡಾಗಿ ನಾಶವಾಗಿದ್ದ ದೇಗುಲವನ್ನು ಮತ್ತೆ ಪುನರುತ್ಥಾನಗೊಳಿಸಬೇಕೆಂದು ಭಕ್ತರು ಪಣತೊಟ್ಟರು. ಈ ಪ್ರಯುಕ್ತ ಅಷ್ಟಮಂಗಲ ಪ್ರಶ್ನೆಯ ಮೂಲಕ ಚಿಂತನವನ್ನು  ನಡೆಸಿದಾಗ ಆ ಸ್ಥಳದ ದೇಗುಲವು 2,400  ವರ್ಷಗಳಷ್ಟು ಹಳೆಯ ಕಾಲಾವ ಧಿಗೆ ಸೇರಿದ್ದು ಎಂದೂ ನಾಥಪಂಥಕ್ಕೆ ಸೇರಿದ ನವನಾಥರು ಓಡಾಡಿದ ಪ್ರದೇಶವೆಂದೂ ತಿಳಿದುಬಂತು. 

ನವನಾಥರುಗಳಲ್ಲಿ, ಶ್ರೀ ಮಚ್ಛೇಂದ್ರನಾಥರ ತಪೋ ಭೂಮಿ ಅದಾಗಿತ್ತು. ಆ ಸ್ಥಳವನ್ನು ಪರಿಶೀಲಿಸಿದಾಗ, ಉತVನನವನ್ನು ಮಾಡಿದಾಗ ಅಲ್ಲಿ ದೇಗುಲವಿದ್ದುದರ ಕುರುಹುಗಳು ಸಿಕ್ಕಿದವು. ಭಕ್ತರು ಉತ್ಸಾಹಿಗಳಾಗಿದ್ದರೂ ಕೂಡ ನಮಗಿದು ಸಾಧ್ಯವೇ ಎಂಬ ಆತಂಕ ಅವರ ಮನಸ್ಸಿನಲ್ಲಿತ್ತು. ಯಾಕೆಂದರೆ ಅತ್ಯಂತ ಸಾಮಾನ್ಯ ಜನರ ಸಮೂಹವಷ್ಟೇ ಅಲ್ಲಿತ್ತು. ಮುಂದಾಳತ್ವವನ್ನು ವಹಿಸಿ ಮುನ್ನಡೆಸುವ ಸಶಕ್ತರು ಯಾರೂ ಇರಲಿಲ್ಲ. ಭಕ್ತರ ಭಯವನ್ನರಿತ ಗುರು ನರೇಂದ್ರನಾಥ ಸ್ವಾಮೀಜಿ ಧೈರ್ಯ ತುಂಬಿ ಹರಸಿದರು. ಗುರುಗಳ ಸೂಚನೆಯಂತೆ ಮುಂದುವರಿದ ಭಕ್ತರು ದೇಗುಲ ನಿರ್ಮಾಣ ಸಾಕಾರಗೊಳಿಸಿದ್ದಾರೆ.

ಹಣ ನೀಡಿ ಸೇವೆ ಇಲ್ಲ
ಇಲ್ಲಿನ ಇನ್ನೊಂದು ವಿಶೇಷತೆ ಏನೆಂದರೆ ಇಲ್ಲಿ ಯಾವುದೇ  ಸೇವೆ,ಹರಕೆಗಳ ಫಲಕಗಳನ್ನು  ಹಾಕಲಾಗಿಲ್ಲ. ಹಣ ನೀಡಿ ಸೇವೆ ಮಾಡಿಸುವ ಪರಿಪಾಠವಿಲ್ಲ.ಭಕ್ತರು ಹೃದಯಾಂತರಾಳದ ನಿಜ ಪ್ರಾರ್ಥನೆ ಮೂಲಕ ಭಕ್ತಿಯ ನಿವೇದನೆಯನ್ನು ಮಾಡುವುದು ರೂಢಿಯಾಗಿದೆ.ಈ ದೇಗು ಲಕ್ಕೆ ಎಪ್ರಿಲ್‌ 16ರಿಂದ  22ರ ವರೆಗೆ ಪ್ರತಿಷ್ಠಾ ಬ್ರಹ್ಮಕಲಶ ವೇದಮೂರ್ತಿ ಬ್ರಹ್ಮಶ್ರೀ ಕುಂಟುಕುಡೇಲು ರಘುರಾಮ ತಂತ್ರಿಗಳ ನೇತೃತ್ವದಲ್ಲಿ ಜರಗುತ್ತಿದೆ.

– ಕವಿತಾ ಅಡೂರು

ಟಾಪ್ ನ್ಯೂಸ್

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

de

Kasaragod: ಬೋಟ್‌ ಮುಳುಗಡೆ; ನಾಪತ್ತೆಯಾಗಿದ್ದ ಮುಜೀಬ್‌ ಮೃತದೇಹ ಪತ್ತೆ

8

Kumbla: ಕುಸಿದು ಬೀಳುವ ಅಪಾಯದಲ್ಲಿದೆ ಉರ್ಮಿ-ಪಲ್ಲೆಕೂಡೆಲು ಕಿರು ಸೇತುವೆ

Kodagu: ತಲಕಾವೇರಿಯಲ್ಲಿ ನಿಗಧಿತ ಸಮಯಕ್ಕೆ ತೀಥ೯ರೂಪಿಣಿಯಾದ ಕಾವೇರಿ ಮಾತೆ

Kodagu: ತಲಕಾವೇರಿಯಲ್ಲಿ ನಿಗಧಿತ ಸಮಯಕ್ಕೆ ತೀಥ೯ರೂಪಿಣಿಯಾದ ಕಾವೇರಿ ಮಾತೆ

17

Kasaragod: ಜಿಲ್ಲಾ ನ್ಯಾಯಾಲಯದ ತೀರ್ಪಿನ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಸರಕಾರ

courts

Kasaragod: ಕೊಲೆ ಪ್ರಕರಣ: 8 ವರ್ಷ ಕಠಿಣ ಸಜೆ, ದಂಡ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

3-aranthodu

Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.