“ಮೂಲಸೌಕರ್ಯ ಒದಗಿಸಿ ಇಲ್ಲವೇ ರಾಜೀನಾಮೆ ನೀಡಿ’

ಪೈವಳಿಕೆ ಕುಡಿಯುವ ನೀರಿಗಾಗಿ ಹಾಹಾಕಾರ: ಬಿ.ಜೆ.ಪಿ. ಧರಣಿ

Team Udayavani, May 1, 2019, 6:02 AM IST

30-KBL-6

ಕುಂಬಳೆ: ಭಾರತೀಯ ಜನತಾ ಪಾರ್ಟಿ ಪೈವಳಿಕೆ ಪಂಚಾಯತ್‌ ಸಮಿತಿ ವತಿಯಿಂದ ಪೈವಳಿಕೆ ಗ್ರಾ. ಪಂ.ನ ಎಲ್‌ಡಿಎಫ್‌, ಯುಡಿಎಫ್‌ ಆಡಳಿತ ವೈಫಲ್ಯ ದಿಂದಾಗಿ ಕುಡಿಯುವ ನೀರಿನ ಅಸಮರ್ಪಕ ಸರಬರಾಜಿಗೆ ವಿರುದ್ಧವಾಗಿ ಪಂಚಾಯತ್‌ ಕಚೇರಿ ಮುಂಭಾಗ ಧರಣಿ ನಡೆಸಲಾಯಿತು.

ಧರಣಿಯನ್ನು ಭಾರತೀಯ ಜನತಾ ಯುವಮೋರ್ಚಾ ರಾಜ್ಯ ನೇತಾರ ಪಿ.ಆರ್‌. ಸುನಿಲ್‌ ಉದ್ಘಾಟಿಸಿ ಜನರ ಮೂಲ ಸೌಕರ್ಯಗಳಲ್ಲೊಂದಾದ ಕುಡಿಯುವ ನೀರಿಗಾಗಿ ಪರದಾಡುವಂತ ಸ್ಥಿತಿಯನ್ನು ಆಡಳಿತ ತಂದಿದೆ. ಮೂಲಸೌಕರ್ಯ ಒದಗಿಸದ ಆಡಳಿತ ರಾಜೀನಾಮೆ ನೀಡಬೇಕು ಎಂದರು.

ಸರಕಾರ ಮತ್ತು ಜಿಲ್ಲಾಡಳಿತದಿಂದ ದೊರಕಿದ ಬರಪರಿಹಾರ ನಿಧಿಯಿಂದ ಹಾಗೂ ಪಂಚಾಯತ್‌ ಸ್ವಂತ ನಿಧಿನಿಂದ ಸಕಾಲದಲ್ಲಿ ವಿತರಿಸಬೇಕಾದ ಶುದ್ಧ ಕುಡಿಯುವ ನೀರನ್ನು ವಿತರಣೆ ಮಾಡದೆ ಜನರನ್ನು ಸಂಕಷ್ಟಕ್ಕೊಳಪಡಿಸಿದ ಎಡಬಲ ರಂಗಗಳ ಅಪಮೈತ್ರಿಯ ಆಡಳಿತ ರಾಜೀನಾಮೆ ನೀಡಬೇಕು. ಪೈವಳಿಕೆ ಪಂಚಾಯತ್‌ನ ನಾಗರಿಕರ ಆಶೋತ್ತರಕ್ಕೆ ಅನುಗುಣವಾಗಿ ಆಡಳಿತ ನಡೆಸದಿದ್ದಲ್ಲಿ ಇವರಿಗೆ ಮುಂದಿನ ದಿನಗಳಲ್ಲಿ ಜನರು ತಕ್ಕ ಉತ್ತರ ನೀಡಲಿರುವರೆಂದು ಎಚ್ಚರಿಸಿದರು.

ಗ್ರಾಮ ಸ್ವರಾಜ್ಯಕಲ್ಪನೆಯೊಂದಿಗೆ ಗ್ರಾಮ ಪಂಚಾಯತ್‌ನ ಆಡಳಿತ ನಡೆಸಲು ಅಸಾಧ್ಯವಾಗುವುದಾದಲ್ಲಿ ಅಧ್ಯಕ್ಷರು ರಾಜೀ ನಾಮೆಕೊಟ್ಟು ನಮ್ಮೊಂದಿಗೆ ಹೋರಾಟಕ್ಕೆ ಕೈ ಜೋಡಿಸಲು ಕರೆಕೊಟ್ಟರು. ಹಿಂದಿನ ಬಿಜೆಪಿ ಆಡಳಿತ ಕಾಲದಲ್ಲಿ ನಿರ್ವಹಿಸಿದ ಜಲನಿಧಿ ಯೋಜನೆಯನ್ನು ಇಂದಿನ ಎಡಬಲ ಆಡಳಿತ ಮುಂದುವರಿಸದೆ ಜನರಿಗೆ ಕುಡಿಯುವ ನೀರಿಗೆ ತೊಂದರೆ ಮಾಡಿದೆ ಎಂದು ಆರೋಪಿಸಿದರು.ಕಳೆದ ಬಿಜೆಪಿ ಆಡಳಿತದಲ್ಲಿ ಜಲನಿಧಿ ಯೋಜನೆಯ ಹೆಚ್ಚಿನ ಘಟಕಗಳು ಕಾರ್ಯಪ್ರವರ್ತನಗೊಂಡು ಪಂಚಾಯತ್‌ ವ್ಯಾಪ್ತಿಯ ಜನರ ಕುಡಿಯುವ ನೀರಿನ ಆಶೋತ್ತರವನ್ನು ಈಡೇರಿಸಿದೆ. ಆ ಬಳಿಕ ಬಂದ ಸಿಪಿಎಂ ಆಡಳಿತ ಬಿ.ಜೆ.ಪಿ. ಆಡಳಿತಕ್ಕೆ ಉತ್ತಮ ಹೆಸರು ಬರಬಹುದೆಂಬ ಭಯದಿಂದ ಜಲನಿಧಿಪದ್ಧತಿಯನ್ನು ಸ್ಥಗಿತಗೊಳಿಸಿ ಜನತೆಗೆ‌ ದ್ರೋಹಬಗೆದಿರುವುದಾಗಿ ಆರೋಪಿಸಿದರು.

ಬಿ.ಜೆ.ಪಿ. ಪಂಚಾಯತ್‌ ಸಮಿತಿ ಅದ್ಯಕ್ಷ ಸದಾಶಿವ ಚೇರಾಲ್‌ ಅಧ್ಯಕ್ಷತೆ ವಹಿಸಿದ ಪ್ರತಿಭಟನೆ ಕಾರ್ಯಕ್ರಮದಲ್ಲಿ ಪಕ್ಷದ ಪೈವಳಿಕೆ ಪಂಚಾಯತ್‌ ಪ್ರಭಾರಿ ಎಂ. ಹರಿಶ್ಚಂದ್ರ ಮಂಜೇಶ್ವರ ಪಕ್ಷದ ನಾಯಕರಾದ ಕೆ. ಜಯಲಕ್ಷ್ಮೀ ಭಟ್‌ ಎ.ಕೆ. ಕಯ್ನಾರ್‌, ಪ್ರಸಾದ್‌ ರೈ ಕಯ್ನಾರ್‌, ಕಿಶೋರ್‌ ಕುಮಾರ್‌ ನಾಯಕ್‌, ಗಣೇಶ್‌ ಕುಲಾಲ್‌, ತಾರಾ ವಿ. ಶೆಟ್ಟಿ ರಾಜೀವಿ ಉಪಸ್ಥಿತರಿದ್ದರು. ಪಂಚಾಯತ್‌ ಸಮಿತಿ ಕಾರ್ಯದರ್ಶಿ ಎಸ್‌. ಸುಬ್ರಹ್ಮಣ್ಯ ಭಟ್‌ ಸ್ವಾಗತಿಸಿದರು. ಯುವಮೋರ್ಚಾ ನಾಯಕ ಸಂತೋಷ ಸಜಂಕಿಲ ವಂದಿಸಿದರು.

ಟಾಪ್ ನ್ಯೂಸ್

NS2

Stock Market: ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಏರಿಕೆ, ನಿಫ್ಟಿ ಜಿಗಿತ

INDvsBAN: Bangladesh team in fear of ICC punishment

INDvsBAN: ಟೆಸ್ಟ್‌ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Thirthahalli: ಮರವೇರಿ ಕುಳಿತ್ತಿದ್ದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ

Thirthahalli: ಮರವೇರಿ ಕುಳಿತ 13 ಅಡಿ ಉದ್ದದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ

3-bng

Bengaluru: ನಗರದಲ್ಲಿ 3 ವರ್ಷದಲ್ಲಿ 9700 ಮರಗಳ ಹನನ

ನಟಿಯಾಗುವ ಕನಸು ಕಂಡಿದ್ದ ದ್ರುವಿ ಪಟೇಲ್ ಗೆ ‘ಮಿಸ್ ಇಂಡಿಯಾ ವರ್ಲ್ಡ್‌ವೈಡ್ 2024’ ಕಿರೀಟ

ನಟಿಯಾಗುವ ಕನಸು ಕಂಡಿದ್ದ ಧ್ರುವಿ ಪಟೇಲ್ ಗೆ ‘Miss India Worldwide 2024’ ಕಿರೀಟ

Hagga Movie: ʼಹಗ್ಗʼವೇ ಆಯುಧ; ಅನುಕ್ಷಣ ಹಾರರ್

Hagga Movie: ʼಹಗ್ಗʼವೇ ಆಯುಧ; ಅನುಕ್ಷಣ ಹಾರರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

7-bng

Bengaluru: ರಾಮಯ್ಯ ಆಸ್ಪತ್ರೆಯಲ್ಲಿ ಅಗ್ನಿ ಆಕಸ್ಮಿಕ: ಸಿಬ್ಬಂದಿಗೆ ಗಾಯ

6-bng

Bengaluru: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 23 ಲಕ್ಷ ರೂ. ವಂಚನೆ!

NS2

Stock Market: ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಏರಿಕೆ, ನಿಫ್ಟಿ ಜಿಗಿತ

Karki kananda movie

Karki Movie: ಹಳ್ಳಿ ಹುಡುಗನ ಹೋರಾಟದ ಹಾದಿ

INDvsBAN: Bangladesh team in fear of ICC punishment

INDvsBAN: ಟೆಸ್ಟ್‌ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.